ಈ ಸಂಬಂಧ ಹಿಂದೆ ಹೈಕೋರ್ಟ್ ಅಂಕ ಕೊಡಲು ಸೂಚನೆ
ನೀಡಿದ್ದ ಹಿನ್ನೆಲೆ, ಹೈಕೋರ್ಟ್ ಆದೇಶ ಮರುಪರಿಶೀಲನೆ ಕೋರಿದ್ದ
ಸರಕಾರ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಪ್ರಸಕ್ತ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡಲು
ನ್ಯಾಯಾಲಯ ಆದೇಶ ನೀಡಿದೆ. ನಿಯಮ
ರೂಪಿಸಿದ ಬಳಿಕ ಸರಕಾರ ಸೂಕ್ತವೆನಿಸಿದ
ಕ್ರಮ ಕೈಗೊಳ್ಳಬಹುದು, ನಿಯಮ ರೂಪಿಸುವ ಮುಂಚಿನ
ಪರೀಕ್ಷೆಯ ಅಂಕ ಪದ್ದತಿ ಬದಲಾವಣೆ
ಸೂಕ್ತವಲ್ಲ ಎಂದು ಹೈಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿ
ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.
ಹೈಕೋರ್ಟ್
ಹೀಗೆ ಹೇಳಿದೆ
ಹಿಂದಿನ ವರ್ಷ
ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಜನ ಅನುತ್ತೀರ್ಣಗೊಂಡಿದ್ದರು. ಹೀಗಾಗಿ ವಿದ್ಯಾರ್ಥಿಗಳ ಒತ್ತಡ
ಕಮ್ಮಿ ಮಾಡುವ ಉದ್ದೇಶದಿಂದ ಸರಕಾರ ಗ್ರೇಡ್ ನೀಡುವ ನಿರ್ಧಾರಕ್ಕೆ ಬಂದಿತ್ತು. ಆದರೆ ಪರೀಕ್ಷೆಯ ಅಧಿಸೂಚನೆ
ಹೊರಡಿಸುವ ಮೊದಲೇ ಈ ನಿಯಮ ಮಾಡಬೇಕಿತ್ತು, ಪರೀಕ್ಷೆ ಅಧಿಸೂಚನೆಯಲ್ಲಿ ಇಲ್ಲದೇ ಇರುವ ನಿಯಮ ಈಗ ಯಾಕೆ
ತರುತ್ತಿದ್ದೀರಿ? ಪಿಯುಸಿಯಲ್ಲಿ 83% ಉತ್ತೀರ್ಣರಾಗುತ್ತಿದ್ದಾರೆ. ಎಸ್.ಎಸ್.ಎಲ್.ಸಿಯಲ್ಲಿ ಎಲ್ಲರನ್ನೂ
ಪಾಸ್ ಮಾಡುವ ಉದ್ದೇಶವಿದ್ದರೆ ಪರೀಕ್ಷೆ ಯಾಕೆ ಬೇಕಿತ್ತು? ನಿಯಮ ರೂಪಿಸಿದ ಬಳಿಕ ಪರೀಕ್ಷೆ ನಡೆಸಿದ್ದರೆ
ಸರಿಯಾಗುತ್ತಿತ್ತು , ಈಗ ಬದಲಾವಣೆ ಸರಿಯಲ್ಲ. ಈ ವರ್ಷ ಅಂಕಗಳನ್ನೇ ಕೊಡಿ ಎಂದು ಸೂಚಿಸಿದೆ.
ಸರಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು. ಆದರೆ ರಾಜ್ಯ ಸರಕಾರದ ನಿರ್ಧಾರಕ್ಕೆ
ಹಿನ್ನಡೆಯಾಗಿದೆ. ಇದೀಗ ತೀರ್ಪಿನ ಆಧಾರದಲ್ಲಿ ಕೆಎಸ್ಇಎಬಿ ಫಲಿತಾಂಶ ಪ್ರಕಟಿಸಬೇಕಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


