ಉಕ ಜಿಲ್ಲೆಯ ಯಲ್ಲಾಪುರ ದೇಹಳ್ಳಿಯ ನಾಗರಾಜ ಭಟ್ ಈಚೆಗೆ ವಾಟ್ಸಪ್ ಗುಂಪುಗಳಲ್ಲಿ ಬಂದ ಮಾಹಿತಿಯ ಅನುಸಾರ ಗೇರುಹಣ್ಣು ಜ್ಯೂಸ್ (ಮೇಲಿನ ಪಟ ಅವರದೇ) ತಯಾರಿಸಿ ಕುಡಿದು ಹತ್ತರಲ್ಲಿ 8 ಮಾರ್ಕು ಕೊಟ್ಟಿದ್ದಾರೆ.
ದಕ ಅಡ್ಯನಡ್ಕದ ಬಳಿಯ ಪುಣಚದ ಕೃಷಿಕ ಮೂಡಂಬೈಲು ನಾರಾಯಣ ನಾಯ್ಕರೂ ಇದೇ ರೀತಿ ಮಾಡಿ ಕುಡಿದು 10 ರಲ್ಲಿ 9 ಅಂಕ ಕೊಟ್ಟಿದ್ದಾರೆ.
"ಒಗರು ತೆಗೆಯದೆ ಕುಡಿಯಲಸಾಧ್ಯ. ಸುಲಭವಾಗಿ ಒಗರು ತೆಗೆಯುವ ಕ್ರಮ ಗೊತ್ತೇ ಇರಲಿಲ್ಲ. ಇನ್ನು ಆಗಾಗ ಗೇರುಹಣ್ಣು ಜ್ಯೂಸ್ ಮಾಡಬೇಕು" ಎನ್ನುತ್ತಾರೆ ನಾಗರಾಜ ಭಟ್.
"ತೋಟದಲ್ಲಿ ಕೆಲಸ ಮುಗಿಸಿ ಬಂದಾಗ ತಂಪು ಗೇರುಹಣ್ಣಿನ ಜ್ಯೂಸ್ ಕುಡಿದರೆ ಚೈತನ್ಯ ಬರುತ್ತದೆ. ಅದೊಂದು ಎನರ್ಜಿ ಡ್ರಿಂಕೇ" ಎನ್ನುತ್ತಾರೆ ನಾರಾಯಣ ನಾಯ್ಕ.
ಚಿತ್ರ, ಮಾಹಿತಿ: ಶ್ರೀಪಡ್ರೆ,
ಸಂಪಾದಕರು, ಅಡಿಕೆ ಪತ್ರಿಕೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


