ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಗ್ರಾಮೀಣ ಪ್ರದೇಶದ ಅತ್ತಿಗೆರೆ ಶಾಖೆಯ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಕ್ಕಳು ಶಿವಭಕ್ತಿಯಿಂದ ಹುತ್ತದ ಮಣ್ಣಿನಲ್ಲಿ ಪರಮೇಶ್ವರ ಶಿವಲಿಂಗ ಸೃಷ್ಠಿ ಮಾಡಿ ಶಿವಧ್ಯಾನ ಮಾಡಿದರು ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಆಧ್ಯಾತ್ಮಿಕ ಪರಂಪರೆಯ ಆಸಕ್ತಿಯ ಮಕ್ಕಳಾದ ವೈಷ್ಣವಿ ಪಿ, ಜಾನವಿ ಸಿ.ಆರ್., ಧರಣಿ ಟಿ.ಎಂ. ಮೋಕ್ಷ ಟಿ.ಎಂ, ಇಂಪನ ವಿ., ಪರಿಣಿತ ವಿ., ನಿಧಿ ಎಂ.ಬಿ., ಐಶ್ವರ್ಯ ಆರ್, ಆದ್ಯ ಎ.ಎಸ್, ಚಂದು ಸಿ.ಆರ್., ಮಂಥನ್ ಎಸ್., ವರ್ಣಿಕ ಕೆ.ಎಲ್ ಸೇರಿದಂತೆ ಕಲಾಕುಂಚ ಗ್ರಾಮೀಣ ಪ್ರದೇಶದ ಅತ್ತಿಗೆರೆ ಶಾಖೆಯ ಅಧ್ಯಕ್ಷರಾದ ಶೈಲಜಾ ಪ್ರಶಾಂತ್ ದಂಪತಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


