ಬೆಂಗಳೂರು: ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾಭಾಸದ ಹಂತದಿಂದಲೇ ಶ್ರೇಷ್ಠತೆಯತ್ತ ಶ್ರಮಿಸಬೇಕೆಂದು ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ರಾಮಕೃಷ್ಣ ರೆಡ್ಡಿ ಹೇಳಿದರು.
ಅವರು ಗುರುವಾರ (ಫೆ.26) ಬಿಎಂಎಸ್ ಶೈಕ್ಷಣಿಕ ಟ್ರಸ್ಟ್ನ ಆಶ್ರಯದಲ್ಲಿರುವ ಬಿಎಂಎಸ್ ಮಹಿಳಾ ಕಾಲೇಜಿನ ವಿಜ್ಞಾನ ವಿಭಾಗವು, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ “ಜೀವಗೋಳ 2026: ಸುಸ್ಥಿರ ಗ್ರಹಕ್ಕಾಗಿ ವಿಜ್ಞಾನ” ಎಂಬ ಶೀರ್ಷಿಕೆಯ ಎರಡು ದಿನಗಳ ರಾಷ್ಟ್ರೀಯ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರೇರಣಾದಾಯಕ ಭಾಷಣ ಮಾಡಿದರು.
ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಪ್ರಯತ್ನಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ಕಾಲಕ್ರಮೇಣ, ವಿಧಾನಗಳು ಬದಲಾಗಬಹುದು ಆದರೆ ಕಠಿಣ ಪರಿಶ್ರಮವನ್ನು ಬೇರೆ ಯಾವುದೇ ವಿಷಯಗಳಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದರು.
ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಭಾಷಣವನ್ನು ಸಭೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗಾಗಿ ಅರ್ಥಪೂರ್ಣಗೊಳಿಸಿದರು.
ಇಂದಿನ ದಿನಗಳಲ್ಲಿ ವಿವಿಧ ಫೀಲ್ಡ್ ಗಳಲ್ಲಿ ಪಬ್ಲಿಕೇಶನ್ ಇದ್ದರೂ, ಗುಣಮಟ್ಟದ ಕೊರತೆ ಕಾಣುತ್ತಿದೆ. ಅದನ್ನು ಅರ್ಥಪೂರ್ಣ ಹಾಗು ಪ್ರಸ್ತುತವಾಗಿಸಲು ಐಟಿ ಹಬ್ ಬೆಂಗಳೂರಿನಂತಹ ನಗರದಲ್ಲಿ ಅವಕಾಶಗಳಿಗೆ ಕೊರತೆ ಇಲ್ಲವೆಂದು ಕಿವಿ ಮಾತು ಹೇಳಿದರು.
ಅತ್ಯುತ್ತಮ ಸಂಶೋಧನೆ ಹಾಗೂ ಪೋಸ್ಟರ್ ಮಂಡನೆ ವಿಜೇತರಿಗೆ ಟ್ರೋಫಿ ನೀಡಿ ಅಭಿನಂದಿಸಿದರು. ನಂತರ, ವಿದ್ಯಾರ್ಥಿಗಳ ಸಮ್ಮೇಳನದ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಯು ಕಾರ್ಯಕ್ರಮದ ಯಶಸ್ಸನ್ನು ಸ್ಪಷ್ಟಪಡಿಸಿತು.
ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ 24 ಕಾಲೇಜುಗಳಿಂದ ಸುಮಾರು 93 ವಿಜ್ಞಾನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಂಶೋಧನಾ ಪ್ರಬಂಧಗಳು ಮತ್ತು ಪೋಸ್ಟರ್ಗಳನ್ನು ಮಂಡಿಸಿದರು. ಸುಮಾರು 200 ವಿಜ್ಞಾನೋತ್ಸಾಹಿಗಳು ಹೈಬ್ರಿಡ್ ಮೋಡ್ನಲ್ಲಿ ಭಾಗವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

