ದೀಪಾವಳಿ : ಸಹೋದರ ಬಿದಿಗೆ

Upayuktha
0


ಕಾ
ರ್ತಿಕ ಶುಕ್ಲ ದ್ವಿತೀಯಾದ ಈ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಭೋಜನಕ್ಕೆ ಹೋಗಿದ್ದನು; ಆದುದರಿಂದ ಈ ದಿನಕ್ಕೆ ಯಮದ್ವಿತೀಯಾ ಎನ್ನುವ ಹೆಸರು ಬಂದಿದೆ. ಅಪಮೃತ್ಯು ಬರಬಾರದೆಂದು ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಯಮದ್ವಿತೀಯಾ ಈ ದಿನಗಳಂದು ಮೃತ್ಯುವಿನ ದೇವತೆಯಾದ ‘ಯಮಧರ್ಮನ’ ಪೂಜೆಯನ್ನು ಮಾಡುತ್ತಾರೆ. ಈ ದಿನ ಯಮರಾಜನು ತನ್ನ ಸಹೋದರಿ ಯಮುನೆಯ ಮನೆಗೆ ಭೋಜನಕ್ಕೆ ಹೋಗುತ್ತಾನೆ ಮತ್ತು ಈ ದಿನ ನರಕದಲ್ಲಿ ಬಿದ್ದು ತೊಂದರೆಗೊಳಗಾದ ಜೀವಗಳನ್ನು ಒಂದು ದಿನದ ಮಟ್ಟಿಗೆ ಮುಕ್ತಗೊಳಿಸುತ್ತಾನೆ.


ಯಮತರ್ಪಣ, ಯಮದೀಪದಾನ ಮತ್ತು ಯಮನಿಗೆ ಪ್ರಾರ್ಥನೆಯನ್ನು ಮಾಡುವುದು : ಅಪಮೃತ್ಯು ನಿವಾರಣಾರ್ಥ ‘ಶ್ರೀ ಯಮಧರ್ಮಪ್ರೀತ್ಯರ್ಥಂ ಯಮತರ್ಪಣಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ ಯಮನ ಹದಿನಾಲ್ಕು ಹೆಸರುಗಳನ್ನು ಹೇಳಿ ತರ್ಪಣ ಕೊಡಬೇಕು. ಇದರ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ‘ಇದೇ ದಿನ ಯಮನಿಗೆ ದೀಪದಾನವನ್ನು ಮಾಡುವುದಿರುತ್ತದೆ.


ಯಮನು ಮೃತ್ಯು ಮತ್ತು ಧರ್ಮದ ದೇವತೆಯಾಗಿದ್ದಾನೆ. ‘ಪ್ರತಿಯೊಬ್ಬ ಮನುಷ್ಯನಿಗೆ ಮರಣವಿದೆ’ ಎಂಬುದರ ಅರಿವು ಸತತವಾಗಿರುವುದು ಆವಶ್ಯಕವಾಗಿದೆ; ಏಕೆಂದರೆ ಇದರಿಂದ ಮನುಷ್ಯನಿಂದ ಕೆಟ್ಟ ಕಾರ್ಯ ಅಥವಾ ಹಣದ ಅಪವ್ಯಯ ವಾಗುವುದಿಲ್ಲ. ಆದ್ದರಿಂದ ಯಮನಿಗೆ ದೀಪದಾನ ಮಾಡಿ ಮುಂದಿನಂತೆ ಹೇಳಬೇಕು, ‘ಹೇ ಯಮನೇ, ಈ ದೀಪದಂತೆ ನಾವು ಸತರ್ಕರಾಗಿದ್ದೇವೆ, ಜಾಗರೂಕರಾಗಿದ್ದೇವೆ. 


ಜಾಗರೂಕತೆಯ, ಪ್ರಕಾಶದ ಪ್ರತೀಕವಾಗಿರುವ ದೀಪವನ್ನು ನಿನಗೆ ಅರ್ಪಿಸುತ್ತಿದ್ದೇವೆ, ನೀನು ಅದನ್ನು ಸ್ವೀಕರಿಸು. ನಿನ್ನ ಆಗಮನವು ಯಾವಾಗ ಆಗುವುದು ನಮಗೆ ತಿಳಿದಿಲ್ಲ; ಆದುದರಿಂದ ನಾವು ನಮ್ಮ ಲೆಕ್ಕಪತ್ರವನ್ನು ಸಮಯಕ್ಕೆ ಸರಿಯಾಗಿ ಬರೆದಿಡುತ್ತೇವೆ, ಇದರಿಂದ ಅರ್ಧಂಬರ್ಧ ಬರೆದ ಲೆಕ್ಕದ ಕಾಳಜಿಯನ್ನು ಮಾಡುವ ಆವಶ್ಯಕತೆ ಬೀಳುವುದಿಲ್ಲ. ಏಕೆಂದರೆ ನೀನು ಆಕಸ್ಮಿಕವಾಗಿ ಎಂದಿಗೂ ಬರಬಹುದೆಂಬುದು ನಮಗೆ ತಿಳಿದಿದೆ.’


ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗುವುದು : ಈ ದಿನ ಸಹೋದರನು ಸಹೋದರಿಯ ಕಡೆಗೆ ಹೋಗಬೇಕು ಮತ್ತು ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗಬೇಕು. ಯಾರಾದರೊಬ್ಬ ಸ್ತ್ರೀಗೆ ಸಹೋದರನಿಲ್ಲದಿದ್ದರೆ ಅವಳು ಯಾರಾದರೂ ಅನ್ಯ ಪುರುಷನನ್ನು ಸಹೋದರನೆಂದು ತಿಳಿದು ಅವನಿಗೆ ಆರತಿ ಬೆಳಗಬೇಕು. ಅದು ಸಾಧ್ಯವಿಲ್ಲದಿದ್ದರೆ ಚಂದ್ರನನ್ನು ಸಹೋದರನೆಂದು ತಿಳಿದು ಆರತಿ ಬೆಳಗಬೇಕು. 


ಈ ದಿನ ಯಾವುದೇ ಪುರುಷನು ತನ್ನ ಮನೆಯಲ್ಲಿ ಪತ್ನಿಯು ತಯಾರಿಸಿದ ಅಡುಗೆಯನ್ನು ಸೇವಿಸಬಾರದು. ತಂಗಿಯ ಮನೆಗೆ ಹೋಗಿ ಅವಳಿಗೆ ವಸ್ತ್ರಾಲಂಕಾರಗಳನ್ನು ಕೊಟ್ಟು ಅವಳ ಮನೆಯಲ್ಲಿ ಭೋಜನ ಮಾಡಬೇಕು. ಸ್ವಂತ ತಂಗಿ ಇಲ್ಲದಿದ್ದರೆ ಬೇರೆ ಸಹೋದರಿಯ ಮನೆಯಲ್ಲಿ ಅಥವಾ ಬೇರೆ ಸ್ತ್ರೀಯನ್ನು ಸಹೋದರಿಯೆಂದು ಪರಿಗಣಿಸಿ ಅವಳ ಮನೆಯಲ್ಲಿ ಭೋಜನ ಮಾಡಬೇಕು ಎಂದು ಹೇಳಲಾಗಿದೆ. 


ಸಹೋದರ ಬಿದಿಗೆಯ ದಿನದಂದು ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗುತ್ತಾಳೆ. ಅನಂತರ ಸಹೋದರನು ಸಹೋದರಿಗೆ ಅವಳ ನಿತ್ಯ ಉಪಯೋಗದ ವಸ್ತು, ಗ್ರಂಥ ಇಂತಹ ಉಡುಗೊರೆಯನ್ನು ಕೊಡಬೇಕು. ಪ್ರತಿವರ್ಷದಂತೆ ಈ ವರ್ಷವೂ ಸಹೋದರನು ಸಹೋದರಿಗೆ ಉಡುಗೊರೆಯನ್ನು ಕೊಡಬಹುದು. ಆ ಸಮಯದಲ್ಲಿ ಸಹೋದರಿ-ಸಹೋದರರು ಅವರ ಉಪಾಸ್ಯದೇವತೆ ಅಥವಾ ಗುರುದೇವರಿಗೆ ‘ಮುಂಬರುವ ಭೀಕರ ಕಾಲದಲ್ಲಿ ನಮ್ಮ ರಕ್ಷಣೆಯಾಗಲಿ. ಈ ಭೀಕರ ಕಾಲವನ್ನು ಎದುರಿಸಲು ಆತ್ಮಬಲ ಮತ್ತು ಮನೋಬಲ ಸಿಗಲಿ. ನಮ್ಮಿಂದ ನಿರಂತರ ಭಗವಂತನ ನಾಮಸ್ಮರಣೆಯಾಗಲಿ‘, ಎಂದು ಪ್ರಾರ್ಥನೆಯನ್ನು ಮಾಡಬೇಕು.


ಅನೇಕ ದಾರ್ಶನಿಕ ಸಂತರು ಹೇಳಿದಂತೆ ಮುಂಬರುವ ಕಾಲವು ಅತ್ಯಂತ ಭೀಕರವಾಗಿದೆ. ಆ ಕಾಲದಲ್ಲಿ ಯಾವ ಸಹೋದರನೂ ಅವನ ಸಹೋದರಿಯ ಅಥವಾ ಯಾವುದೇ ಸಹೋದರಿಯು ಅವಳ ಸಹೋದರನ ರಕ್ಷಣೆಯನ್ನು ಮಾಡಲು ಸಾಧ್ಯವಿಲ್ಲ. ಈ ಕಾಲದಲ್ಲಿ ಕೇವಲ ಭಗವಂತನೇ ನಮ್ಮ ರಕ್ಷಣೆಯನ್ನು ಮಾಡಲು ಸಾಧ್ಯ. ಆದುದರಿಂದ ಸಹೋದರಬಿದಿಗೆಯ ಶುಭದಿನದಂದು ಸಹೋದರ-ಸಹೋದರಿಯರು ಪರಸ್ಪರರ ರಕ್ಷಣೆಗಾಗಿ ಮೇಲಿನ ಪ್ರಾರ್ಥನೆಯ ಮಾಧ್ಯಮದಿಂದ ಭಗವಂತನಿಗೆ ಹರಕೆಯನ್ನು ಸಲ್ಲಿಸಬೇಕು.



-ವಿನೋದ ಕಾಮತ್,

ರಾಜ್ಯ ವಕ್ತಾರರು, ಸನಾತನ ಸಂಸ್ಥೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top