ಯೋಗವು ದೇಹ, ಮನಸ್ಸು, ಆತ್ಮದ ಬಗ್ಗೆ ಜಾಗೃತಿ ಮೂಡಿಸುವ ಸಾಧನ: ಪ್ರೊ. ಗಣಪತಿ ಗೌಡ

Upayuktha
0



ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನದ  ಪ್ರಯುಕ್ತ ವಿಶ್ವವಿದ್ಯಾನಿಲಯ  ಕಾಲೇಜಿನ  ಪ್ರಾಂಶುಪಾಲರು,  5 KAR  NCC ನೌಕಾಪಡೆ  ಘಟಕದ  ಕೆಡೆಟ್ ಗಳು  ಹಾಗೂ ಎನ್ ಸಿ ಸಿ ಅಧಿಕಾರಿಗಳು  ಜೊತೆಗೂಡಿ  ಈ ವರ್ಷದ ಯೋಗ ದಿನವನ್ನು ಕದ್ರಿ ಪಾರ್ಕ್ ಬಳಿ ಇರುವ  ಯುದ್ಧ ಸ್ಮಾರಕದಲ್ಲಿ  ಆಚರಿಸಲಾಯಿತು .


ಕಾರ್ಯಕ್ರಮಕ್ಕೆ  ಮುಖ್ಯ  ಅತಿಥಿಯಾಗಿ ಆಗಮಿಸಿದ  ಭಾರತೀಯ ನೌಕಾಪಡೆಯ ನಿವೃತ್ತ ಪಿ. ಒ ಸುಧೀರ್ ಪೈ  ಯೋಗ ದಿನದ ಮಹತ್ವ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾತನಾಡಿದರು. ಸಶಸ್ತ್ರ ಪಡೆಗಳಿಗೆ ಸೇರುವ ಪ್ರಸ್ತುತತೆಯನ್ನು ಅವರು  ತಿಳಿಸಿದರು.


ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ  ಪ್ರೊ. ಗಣಪತಿ ಗೌಡ  ಯೋಗದಿಂದ  ಶರೀರಕ್ಕೆ ಉಂಟಾಗುವ  ಉಪಯೋಗದ ಬಗ್ಗೆ  ತಿಳಿಸಿದರು .

 "ಒಂದು ಭೂಮಿ ಮತ್ತು ಒಂದು ಆರೋಗ್ಯಕ್ಕಾಗಿ" ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ  ವಿಶ್ವ ಯೋಗ ದಿನಾಚರಣೆಯನ್ನು ಮಹತ್ವಪೂರ್ಣವಾಗಿ ಆಚರಿಸಲಾಯಿತು. ಯೋಗವು ಒಟ್ಟಾರೆ ಯೋಗಕ್ಷೇಮ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಸಹಕಾರಿ. ದೈಹಿಕ ಭಂಗಿಗಳು, ಉಸಿರಾಟದ ತಂತ್ರಗಳು ಮತ್ತು ಧ್ಯಾನವನ್ನು ಸಂಯೋಜಿಸಿ  ಮನಸ್ಸು-ದೇಹವನ್ನು ಆರೋಗ್ಯವಾಗಿಡಲು ಯೋಗವು ಸಹಕಾರಿಯಾಗುತ್ತದೆ ಎಂದು ಮುಖ್ಯ ಅತಿಥಿ ಅಭಿಪ್ರಾಯ ಪಟ್ಟರು.


ಈ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್‌ ಕಮಾಂಡರ್  ಪ್ರೊ. ಯತೀಶ್‌ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,  ಮೇಜರ್‌ ಡಾ.ಜಯರಾಜ್‌  ವಂದಿಸಿದರು. ಯೋಗ ಪ್ರದರ್ಶನದಲ್ಲಿ  ವಿವಿ  ಕಾಲೇಜಿನ 10  ಕೆಡೆಟ್ ಗಳು  ಮತ್ತು 14 ಜನ ಸೈನಿಕರು  ಉಪಸ್ಥಿತರಿದ್ದರು. ಕೆಡೆಟ್‌ಗಳು ಸೂರ್ಯ ನಮಸ್ಕಾರ, ಪದ್ಮಾಸನ, ಧನುರಾಸನ, ನಟರಾಜಾಸನವನ್ನು  ಪ್ರದರ್ಶಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top