ಗುರುಪೂರ್ಣಿಮೆಯ ಮೂಲಕ ಸಮಾಜದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಕ್ರಿಯರಾಗಿರಿ ! – ಹಿಂದೂ ಜನಜಾಗೃತಿ ಸಮಿತಿ
ಬೆಂಗಳೂರು: ಭವ್ಯವಾದ ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಸಂವರ್ಧನೆಗೊಳಿಸುವ ಅತ್ಯುನ್ನತ ಕಾರ್ಯವು ಗುರು-ಶಿಷ್ಯ ಪರಂಪರೆಯಿಂದಾಗಿ ಸಾಧ್ಯವಾಯಿತು. ಇಂತಹ ತೇಜಸ್ವಿ ಗುರು-ಶಿಷ್ಯ ಪರಂಪರೆಯನ್ನು ಸ್ಮರಿಸಲು ಮತ್ತು ಸಮಾಜದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಪ್ರೇರಣೆ ನೀಡಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ವರ್ಷ ಜುಲೈ 21, 2024 ರಂದು ದೇಶದಾದ್ಯಂತ 67 ಸ್ಥಳಗಳಲ್ಲಿ, ಮತ್ತು – ಬೆಂಗಳೂರಿನ 4 ಕಡೆಗಳಲ್ಲಿ ಗುರುಪೂರ್ಣಿಮೆ ಮಹೋತ್ಸವವನ್ನು ಆಯೋಜಿಸಲಾಗಿದೆ.
ಶ್ರೀಕೃಷ್ಣ-ಅರ್ಜುನ, ಸಮರ್ಥ ರಾಮದಾಸ ಸ್ವಾಮಿ-ಶಿವಾಜಿ ಮಹಾರಾಜರು, ಆರ್ಯ ಚಾಣಕ್ಯ-ಚಂದ್ರಗುಪ್ತ, ಗುರು ವಿದ್ಯಾರಣ್ಯರು-ಹಕ್ಕ-ಬುಕ್ಕರು, ರಾಮಕೃಷ್ಣ ಪರಮಹಂಸರು-ಸ್ವಾಮಿ ವಿವೇಕಾನಂದರು ಇವರಿಂದಾಗಿ ಧರ್ಮಸಂಸ್ಥಾಪನೆ ಮತ್ತು ರಾಷ್ಟ್ರದ ಉದ್ಧಾರದ ಕಾರ್ಯ ನಡೆಯಿತು.
ಗುರುಗಳ ಕೃಪೆಯನ್ನು ಪಡೆಯಲು ನಮಗೆ ಗುರುಗಳ ಧರ್ಮಸಂಸ್ಥಾಪನೆಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ನಾವು ನಮ್ಮದಾಗಿಸಿಕೊಳ್ಳಬೇಕು. ಇದರ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರು ಜಿಲ್ಲೆಯ ಈ ಕೆಳಗಿನ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಸಮಿತಿಯ ವತಿಯಿಂದ ಈ ಕೆಳಗಿನ ಸ್ಥಳಗಳಲ್ಲಿ ಆಯೋಜಿಸಲಾಗಿದೆ.
1.ಧನಂಜಯ ಪ್ಯಾಲೇಸ್, ಕಾಮಾಕ್ಷಿಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು.
2.ಭವಾನಿ ಕಲ್ಯಾಣ ಮಂಟಪ, ಆಂಜನೇಯ ದೇವಸ್ಥಾನ ಬೀದಿ, ಬಸವನಗುಡಿ, ಬೆಂಗಳೂರು.
3.ಆರ್. ವಿ. ಕಲ್ಯಾಣ ಮಂಟಪ, ಮಾರುತಿ ನಗರ, ಯಲಹಂಕ, ಬೆಂಗಳೂರು.
4.ಸಾಯಿಬಾಬಾ ಮಂದಿರ, ಆರ್. ಕೆ. ಟೌನ್ ಶಿಪ್, ಯಾರಂಡಹಳ್ಳಿ, ಬೊಮ್ಮಸಂದ್ರ, ಬೆಂಗಳೂರು.
ಭಾನುವಾರ ಜುಲೈ 21, 2024,
ಸಮಯ : ಸಂಜೆ 5.00 ಗಂಟೆ
ಈ ಮಹೋತ್ಸವದಲ್ಲಿ, ಶ್ರೀವ್ಯಾಸಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಭಾವಚಿತ್ರವನ್ನು ಪೂಜಿಸಲಾಗುತ್ತದೆ (ಗುರುಪೂಜೆ). ‘ಆನಂದಪ್ರಾಪ್ತಿಗಾಗಿ ಸಾಧನೆ ಮತ್ತು ರಾಮರಾಜ್ಯ’ ಈ ವಿಷಯದ ಕುರಿತು ಗಣ್ಯ ವಕ್ತಾರರ ಮಾರ್ಗದರ್ಶನವಿರಲಿದೆ. ಈ ಮಹೋತ್ಸವದಲ್ಲಿ ‘ಸ್ವಸಂರಕ್ಷಣೆಯ ಪ್ರಾತ್ಯಕ್ಷಿಕೆ’ ವಿಶೇಷ ಆಕರ್ಷಣೆಯ ಕೇಂದ್ರವಾಗಲಿದೆ.
ವಿವಿಧ ವಿಷಯಗಳ ಕುರಿತು ಆಧ್ಯಾತ್ಮಿಕ, ರಾಷ್ಟ್ರ ಮತ್ತು ಧಾರ್ಮಿಕ ಗ್ರಂಥಗಳ ಪ್ರದರ್ಶನ, ಜೊತೆಗೆ ರಾಷ್ಟ್ರ-ಧರ್ಮದ ವಿಷಯಗಳ ಫಲಕಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. ಸಮಸ್ತ ಜನತೆಯು ಈ ಕಾರ್ಯಕ್ರಮದಲ್ಲಿ ಸಕುಟುಂಬಸಮೇತ ಉಪಸ್ಥಿತರಿದ್ದು ಇದರ ಲಾಭ ಪಡೆಯಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ