ವನಿತಾ ಕಥನ-1: ಅತ್ರಿ ಋಷಿಗಳ ಪತ್ನಿ- ಮಹಾ ಸಾಧ್ವಿ ಅನಸೂಯಾ

Upayuktha
0


ಮಾಧುರಿ ದೇಶಪಾಂಡೆ, ಬೆಂಗಳೂರು


ಪ್ತರ್ಷಿಗಳಲ್ಲಿ ಅತ್ರಿ ಋಷಿಗಳೂ ಒಬ್ಬರು. ಕರ್ದಮ ಪ್ರಜಾಪತಿ ಮತ್ತು ದೇವಹೂತಿಯರಲ್ಲಿ ಜನಸಿದ ಅನಸೂಯಾ ದೇವಿಯು ಕಪಿಲ ಮಹರ್ಷಿಗಳ ಸಹೋದರಿ. ಅನಸೂಯೆ ಎಂದರೆ ಯಾರಿಗೆ ಅಸೂಯೆ ಎಂಬುದು ಇಲ್ಲವೋ ಅಂತಹ ಸ್ತ್ರೀ ಎಂದು. ಅನಸೂಯೆಗೆ 9 ಜನ ಸಹೋದರಿಯರು ಅವರೂ ಎಲ್ಲರೂ ಕೂಡ ಋಷಿ ಪತ್ನಿಯರೇ. ಅನಸೂಯೆಯ ವಿವಾಹವು ಅತ್ರಿ ಮಹರ್ಷಿಗಳೊಂದಿಗೆ ಆಗಿರುತ್ತದೆ. ಚಿತ್ರಕೂಟದಲ್ಲಿ ತನ್ನ ಪತಿಯೊಡನೆ ಪರ್ಣಕುಟೀರದಲ್ಲಿ ವಾಸಿಸುತ್ತಿರುತ್ತಾಳೆ. ಆಶ್ರಮದ ಮಕ್ಕಳಿಗೆ ಪಾಠಗಳನ್ನು ಸಂಸ್ಕಾರಗಳನ್ನು ಕಲಿಸುತ್ತಿರುವ ಅನಸೂಯಾ ದೇವಿಗೆ ನವಗ್ರಹಗಳಲ್ಲಿ ಒಬ್ಬನಾದ ಸುಂದರನೆನಿಸಿಕೊಳ್ಳುವ ಚಂದ್ರನೂ, ತ್ರಿಮೂರ್ತಿಗಳ ಅಂಶವೆಂದು ನಂಬಿರುವ ದತ್ತಾತ್ರೇಯನೂ ಹಾಗೂ ದೂರ್ವಾಸ ಋಷಿಗಳು  ಮಕ್ಕಳಾಗಿದ್ದಾರೆ.



ಭಾಗವತದಲ್ಲಿ ಬರುವಂತೆ, ಒಮ್ಮೆ ದೇವಲೋಕದಲ್ಲಿ ಅನಸೂಯಾ ದೇವಿಯನ್ನು ಮಹಾನ್‌ ಪತಿವ್ರತೆ ಎಂಬ ಚರ್ಚೆ ನಡೆದಿರುತ್ತದೆ. ಆಗ ನಾರದರ ಮಾತಿನಿಂದ ಮನದಲ್ಲಿ ಈರ್ಷೆಯಿಂದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯರು ಅನಸೂಯಾ ದೇವಿಯ ಪರೀಕ್ಷೆ ಮಾಡಬೇಕೆಂದು ಹೇಳುತ್ತಾರೆ.  ಪತ್ನಿಯರ ಮಾತಿಗೆ ಕಟ್ಟುಬಿದ್ದು ಬ್ರಹ್ಮ ವಿಷ್ಣು ಮಹೇಶ್ವರರು ಭೂಲೋಕಕ್ಕೆ ಋಷಿಗಳ ವೇಷದಲ್ಲಿ ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾರೆ. ಋಷಿಗಳು ಆಶ್ರಮದಲ್ಲಿರುವುದಿಲ್ಲ. ಆಗ ನಾವು ಹಸಿದು ಬಂದಿದ್ದೇವೆ, ನಮಗೆ ಭೋಜನವಾಗ ಬೇಕು ಆದರೆ ಒಂದು ಶರತ್ತಿದೆ. ಅದರ ಪ್ರಕಾರ ನೀವು ಹುಟ್ಟುಡುಗೆಯಲ್ಲಿ ನಮಗೆ ಭೋಜನ ಮಾಡಿಸಬೇಕು ಎಂದು ಹೇಳುತ್ತಾರೆ. ಆಶ್ರಮಕ್ಕೆ ಬಂದ ಅತಿಥಿಗಳನ್ನು ಭೋಜನ ಮಾಡಿಸದೇ ಹಾಗೆಯೇ ಕಳಿಸಬಾರದೆಂಬ ಕಾರಣದಿಂದ ಋಷಿಗಳಿಗೆ ಒಂದು ಕ್ಷಣ ಕಾಯಿರಿ ಎಂದು ಹೇಳಿ ಆಶ್ರಮದ ಒಳಗೆ ಹೋಗಿ ಪತಿಯ ಕಮಂಡಲದ ನೀರನ್ನು ತಂದು ತನ್ನ ತಪಃಶಕ್ತಿಯಿಂದ ಮೂರು ಜನರನ್ನೂ ಚಿಕ್ಕ ಮಕ್ಕಳಾಗಿ ಮಾಡಿ ಅವರಿಗೆ ಹುಟ್ಟುಡುಗೆಯಲ್ಲಿ ತನ್ನ ಸ್ಥನಪಾನ ಮಾಡಿಸಿ, ಮಕ್ಕಳನ್ನಾಗಿ ಮಾಡಿಕೊಂಡು ಸಲಹುತ್ತಿರುತ್ತಾಳೆ. ಋಷಿಗಳು ಬಂದು ಕೇಳದಾಗ ನಡೆದ ವೃತ್ತಾಂತವನ್ನು ಹೇಳಿ ತ್ರಿಮೂರ್ತಿಗಳನ್ನು ಮಕ್ಕಳನ್ನಾಗಿ ಮಾಡಿಕೊಂಡು ಸಾಕುತ್ತಿರುತ್ತಾರೆ. ಭೂಲೋಕಕ್ಕೆ ಹೋದ ತಮ್ಮ ಪತಿಗಳು ಬಾರದೇ ಇದ್ದಾಗ ತ್ರಿಮೂರ್ತಿಗಳ ಪತ್ನಿಯರು ಅತ್ರಿ ಆಶ್ರಮಕ್ಕೆ ಬಂದಾಗ ಅನಸೂಯಾ ದೇವಿಯನ್ನು ಮಹಾನ್‌ ಪತಿವ್ರತೆಯೆಂದು ಒಪ್ಪಿಕೊಂಡು ತಮ್ಮ ಪತಿಯಂದಿರನ್ನು ಹಿಂದಿರುಗಿಸಲು ಕೇಳಿದಾಗ ಪುನಃ ಮೂಲ ರೂಪಕ್ಕೆ ಬರುತ್ತಾರೆ. ಆದರೆ ಮೂವರೂ ತಮ್ಮ ಅಂಶಗಳಿಂದ ಕೂಡಿದ ದತ್ತಾತ್ರೇಯ ರೂಪದಲ್ಲಿ ಅನಸೂಯಾ ದೇವಿಯ ಗರ್ಭದಲ್ಲಿ ಜನನಿಸುವ ವರವನ್ನು ನೀಡಿ ಅಂತರ್ಧಾನ ಹೊಂದುತ್ತಾರೆ. ಈ ರೀತಿಯಲ್ಲಿ ದತ್ತಾತ್ರೇಯರ ಜನನವಾಗುತ್ತದೆ.


ಅನಸೂಯಾ ದೇವಿ ರಾಮಾಯಣ ಕಾಲದಲ್ಲಿ ರಾಮ ಸೀತೆ ಲಕ್ಷ್ಮಣರು ಅತ್ರಿ ಆಶ್ರಮಕ್ಕೆ ಹೋದಾಗ ಅವರನ್ನು ಬಹಳ ಪ್ರೀತ್ಯಾದರಗಳಿಂದ ಸತ್ಕರಿಸುತ್ತಾರೆ. ಸೀತೆಯನ್ನು ಮಗಳಂತೆ ಅನೇಕ ಆಭೂಷಣಗಳಿಂದ ಅಲಂಕರಿಸಿ ಅನಸೂಯಾ ದೇವಿಯು ಆನಂದಿಸುತ್ತಾಳೆ. ವನವಾಸಕ್ಕೆ ಬಂದಿರುತ್ತಾಳೆ. ಅನುಸೂಯಾ ದೇವಿಯು ಸುವಾಸಿನಿ ಸ್ತ್ರೀಯರು ಯಾವುದೇ ಕಾರಣಕ್ಕೂ ಆಭೂಷಣಗಳನ್ನು ಧರಿಸದೇ ಇರಬಾರದೆಂದು ತಿಳಿಸಿ ಆಭರಣಗಳನ್ನು ಕೊಟ್ಟು ಕಳುಹಿಸುವುದು ರಾಮಾಯಣದಲ್ಲಿ ಉಲ್ಲೇಖವಿದೆ.


ಇಂತಹ ಸಾಧ್ವಿ ಶಿರೋಮಣಿ, ಮಾತೃ ಹೃದಯಿ ಅನಸೂಯಾ ದೇವಿಯಿಂದ ಪತಿಯ ಅನುಪಸ್ಥಿತಿಯಲ್ಲೂ ಕೂಡ ಆಶ್ರಮ ಧರ್ಮವನ್ನು ನಿಭಾಯಿಸಿಕೊಂಡು ಪರೀಕ್ಷೆಯ ಸಮಯ ಬಂದಾಗ ಸತೀತ್ವವನ್ನು ಕಾಯ್ದು ಕೊಂಡ ಬಗೆಯನ್ನು ಕಲಿಯಬೇಕು. ತ್ರಿಮೂರ್ತಿಗಳನ್ನೇ ಮಕ್ಕಳನ್ನಾಗಿ ಮಾಡಿಕೊಂಡು ಸಲಹಿದ ಮಹಾನ್ ತಾಯಿಯ ಮಮತಾ ಗುಣವನ್ನು ನಾವು ರೂಢಿಸಿಕೊಳ್ಳಬೇಕು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top