ಲೇಖಕಿ ಅನುವಾದಕಿಯಾಗಿರುವ ಶ್ರೀಮತಿ ಮಾಧುರಿ ದೇಶಪಾಂಡೆಯವರ ಬರವಣಿಗೆ ನಿರಂತನ ದಿನಕ್ಕೆ ಒಂದು ಸುವಿಚಾರವಂತೂ ಇದ್ದೇ ಇರುತ್ತದೆ. ಬೆಂಗಳೂರಿನಲ್ಲಿ ಜನಿಸಿದ ಮಾಧುರಿ ದೇಶಪಾಂಡೆಯವರ ತಂದೆ ಶ್ರೀ ಪ್ರಾಣೇಶ್ ಪಾಟೀಲ ಮತ್ತು ತಾಯಿ ಶ್ರೀದೇವಿ ಪಾಟೀಲ ಇವರ ಏಕೈಕ ಪುತ್ರಿಯಾಗಿ ಜನಿಸಿದ ಮಾಧುರಿಯವರ ಶಾಲಾ ಶಿಕ್ಷಣ ಎಲ್ಲವೂ ಬೆಂಗಳೂರಿನಲ್ಲಿ. ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮಾಧುರಿಯವರು 13-14 ವರ್ಷಗಳಿಂದ ಅನುವಾದಕಿಯಾಗಿ ಕನ್ನಡ ಹಿಂದಿ ಮತ್ತು ಆಂಗ್ಲ ಮೂರು ಭಾಷೆಗಳನ್ನು ಅನುವಾದ ಮಾಡುವ ವೃತ್ತಿಯನ್ನು ಮಾಡುತ್ತಾರೆ.
ತಮ್ಮ ಎಂಟನೇ ತರಗತಿಯಿಂದ ಕವಿತೆ/ಕವನಗಳ ಬೆನ್ನು ಹತ್ತಿ ಕಾವ್ಯಲೋಕಕ್ಕೆ ಪದಾರ್ಪಣೆ ಮಾಡಿದ ಇವರು ಅನೇಕ ಕವನ ಸಣ್ಣ ಕಥೆಗಳು, ಅನುವಾದದ ಕಥೆಗಳು ಲೇಖನಗಳು, ಕಾದಂಬರಿಯನ್ನು ಬರೆದಿದ್ದಾರೆ. ಇವರ 9 ಪುಸ್ತಕಗಳು ಪ್ರಕಟವಾಗಿದ್ದು ಅವುಗಳಲ್ಲಿ ನಾಲ್ಕು ಕಥಾ ಸಂಕಲಗಳು 1) ಮಾತೃತ್ವ ಮತ್ತು ಇತರ ಕಥೆಗಳು, 2) ಪರಿವರ್ತನೆ ಮತ್ತು ಇತರ ಕಥೆಗಳು, ಕಾದಂಬರಿ ಮತ್ತು ಇತರ ಕಥೆಗಳು ಹಾಗೂ ಕಥಾ ರಂಜನಿ ಇವರ ಕಥಾ ಸಂಕಲನಗಳು, ಕವನ ಝರಿ ಇವರ ಕವನ ಸಂಕಲನ, ಮುನ್ಷಿ ಪ್ರೇಮಚಂದ್ರ ಪ್ರೇಮಾ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ (ಈ ಕಾದಂಬರಿಗೆ 2012ರ "ಅರಳು ಪ್ರಶಸ್ತಿ" ದೊರೆತಿದೆ} ಜಯಶಂಕರ ಪ್ರಸಾದರ "ಚಂದ್ರಗುಪ್ತ" ನಾಟಕವನ್ನು ಕೂಡ ಅನುವಾದಿಸಿದ್ದಾರೆ. ಬಾಂಧವ್ಯ ಇವರ ಕಾದಂಬರಿಯ ಹೆಸರು, ದಿನ ನಿತ್ಯ ಇಂದು ಸಂಜೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಸುವಿಚಾರಗಳ ಮಾಲಿಕೆಯನ್ನು "ಮಕ್ಕಳಿಗಾಗಿ ಸುವಿಚಾರಗಳು" ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಇವರ ಅನುವಾದ ಪರಿಶ್ರಮವೂ ಕೂಡ ಸಾಕಷ್ಟು ಇದೆ. ಹಲವು ಸಂಸ್ಥೆಗಳ ಎಚ್ ಆರ್ ಪಾಲಿಸಿಗಳು, ಎನ್ಜಿಒಗಳ ಅನೇಕ ಮಾದರಿ ಪುಸ್ತಕಗಳು, ಮೊದಲಾದ ಅನೇಕ ಅನುವಾದಗಳನ್ನು ಮಾಡಿಕೊಟ್ಟಿದ್ದಾರೆ. ಜಾಹಿರಾತುಗಳನ್ನು, ಕಾನೂನಿನ ನೋಟಿಸುಗಳನ್ನು, ವೈದ್ಯಕೀಯ ಹೊತ್ತಿಗೆಗಳನ್ನು ಕೂಡ ಅನುವಾದಿಸಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಸಂವಿಧಾನದ ಕರಡು ಪ್ರತಿಯ ಕನ್ನಡೀಕರಣ ಕೆಲಸದದಲ್ಲಿಯೂ ಅನುವಾದ ಮಾಡಿದ್ದಾರೆ, ಧರ್ಮಪಾಲ್ ಸೀರೀಸ್ ನ "ಬ್ರಿಟಿಷ್ ಓರಿಜಿನ್ ಆಫ್ ಕೌ ಸ್ಲಟರ್ಸ್" ಪುಸ್ತಕದ ಹಲವು ಪುಟಗಳನ್ನು ಅನುವಾದಿಸಿದ್ದಾರೆ.
ಹಿಂದಿಯಿಂದ ಕನ್ನಡಕ್ಕೂ ಅನೇಕ ಅನುವಾದದ ಕೆಲಸವನ್ನು ಕರ್ನಾಟಕ ಸೌಹಾರ್ದ ಕೋ ಆಪರೇಟಿವ್ ಫೇಡರೇಷನ್ಗಾಗಿ ಅನುವಾದ ಮಡಿಕೊಟ್ಟಿದ್ದಾರೆ. ಹಲವು ಜನರ ವೈಯಕ್ತಿಕ ಪುಸ್ತಕಗಳನ್ನು ಕೂಡ ಅನುವದಿಸಿದ್ದಾರೆ. ಹಿಂದಿಯ ಅರವಿಂದೋ ಅವರ ಋಗ್ವೇದದ ಆಯ್ದ ಶ್ಲೋಕಗಳ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಹಿಂದುಸ್ಥಾನ ಸಮಾಚಾರ್ ಪತ್ರಿಕೆಗೆ 6 ತಿಂಗಳುಗಳ ಕಾಲ ಕನ್ನಡ/ಆಂಗ್ಲದಿಂದ ಸುದ್ದಿಗಳನ್ನು ಅನುವಾದ ಮಾಡಿಕೊಟ್ಟ ಅನುಭವಿದೆ. ಕರ್ನಾಟಕ ಸೌಹಾರ್ದ ಕೋ ಆಪರೇಟಿವ್ ಫೇಡರೇಷನ್ಗಾಗಿ ಕೋ ಆಪರೇಟಿವ್ ಆಕ್ಟ್ ಹೊತ್ತಿಗೆಯನ್ನು ಆಂಗ್ಲದಿಂದ ಹಿಂದಿಗೆ ಅನುವಾದಿಸಿದ್ದಾರೆ.
ಸುಮಾರು 2ವರೆ ಮೂರು ವರ್ಷಗಳಿಂದ ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಲಿದ್ದಾರೆ. ಇಂದು ಸಂಜೆ, ಸಂದರ್ಶನ, ಬೆಳ್ಳಾರಿ ಬೆಳಗಾಯಿತು, ಉದಯಕಾಲ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ವಿಕ್ರಮ, ಕರ್ಮವೀರ ಮೊದಲಾದ ಪತ್ರಿಕೆಗಳಲ್ಲಿ ಸಂದರ್ಭಿಕ ಲೇಖನಗಳನ್ನು ಬರೆಯುವುದರ ಜೊತೆಗೆ ದಿ ಡೈಲಿ ನ್ಯೂಸ್ ಪತ್ರಿಕೆಯಲ್ಲಿ ಹಿತ್ತಲ ಮದ್ದು ಅಂಕಣ ಬರೆಯುತ್ತಿದ್ದಾರೆ.
ಕೆಲವು ಅಭಿನಂದನಾ ಗ್ರಂಥಗಳಿವೆ ವಿಶೇಷ ಲೇಖನಗಳನ್ನು ಕೂಡ ಬರೆದುಕೊಟ್ಟಿರುತ್ತಾರೆ. ಧಾರ್ಮಿಕ ಪತ್ರಿಕೆಗಳಾದ ಶ್ರೀಶೈಲ ಪ್ರಭ ಹಾಗೂ ಸಪ್ತಗಿರಿಯಲ್ಲಿ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಾರೆ.
ಫೇಸ್ಬುಕ್ನ ಎರಡು ಸಾಹಿತ್ಯ ಗುಂಪಿನಲ್ಲಿ ಅಡ್ಮಿನ್ ಆಗಿರುತ್ತಾರೆ. ಸೌರಭ ಗುಂಪಿನಲ್ಲಿ ಬರವಣಿಗೆಯ ಕಲೆಯ ಬಗೆಗೆ ಅಂಕಣವನ್ನು, ಸಮಾನ ಚಿಂತಕರು ಗುಂಪಿನಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿತವಾದ ಹಲವು ಸಂಚಿಕೆಗಳ ಅಂಕಣವನ್ನು, ನುಡಿ ತೋರಣ ಬಳಗಕ್ಕಾಗಿ ಭಾರತೀಯ ಹಬ್ಬ ಹರಿದಿನಗಳ ಅಂಕಣವನ್ನು ಬರೆದಿದ್ದಾರೆ.
ಒಂದು ವರ್ಷದಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಸದಸ್ಯರಾಗಿದ್ದು ಇತ್ತೀಚಿಗೆ ಅಭಾಸಾಪದ ಮಹಿಳಾ ಪ್ರಕಾರದ ದಕ್ಷಿಣ ವಲಯದ ಕಾರ್ಯದರ್ಶಿ ಜವಾಬ್ದಾರಿಯನ್ನು ನಿರ್ವಹಿಸುತ್ತಲಿದ್ದಾರೆ. ಅಭಾಸಾಪ ಸಲುವಾಗಿ 8-10 ಮಹಿಳಾ ಲೇಖಕಿಯರ ವಿಶೇಷ ಪರಿಚಯ ಮಾಡುವ ಅಂಕಣವನ್ನು ಕೂಡ ಬರೆದಿದ್ದಾರೆ
2012ರ ಅರಳು ಪ್ರಶಸ್ತಿ, 2020ನೇ ಸಾಲಿನ ಬುದ್ಧ ಬಸವ ಗಾಂಧಿ ಪ್ರತಿಷ್ಠಾನದ ದತ್ತಿ ಪ್ರಶಸ್ತಿ, 2023ನೇ ಸಾಲಿನ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಸಂಸ್ಥೆಯಿಂದ ಮಹಿಳಾ ಸಾಧಕಿ ಪ್ರಶಸ್ತಿ ದೊರೆತಿದೆ.
ವನಿತಾ ಕಥನ ಅಂಕಣ
ಪ್ರಪಂಚದಲ್ಲಿ ಪ್ರಸಿದ್ಧ ಮಹಿಳೆಯರು ಸಾಕಷ್ಟು ಜನರು ಆಗಿ ಹೋಗಿದ್ದಾರೆ. ಅವರಲ್ಲಿ ಅನೇಕ ಜನ ಋಷಿ ಪತ್ನಿಯರು, ದೇವತಾ ಸ್ತ್ರೀಯರು, ಪೌರಾಣಿಕ ಮಹಿಳೆಯರು ಇದ್ದಾರೆ. ಕೆಲವರ ಹೆಸರು ಮಾತ್ರ ಪರಿಚಯವಿದ್ದರೆ ಇನ್ನು ಹಲವರ ಹೆಸರನ್ನೂ ನಾವು ಕೇಳಿರುವುದಿಲ್ಲ. ಪ್ರತಿ ಶುಕ್ರವಾರದ ದಿನ ಉಪಯುಕ್ತ ನ್ಯೂಸ್ ಡಿಜಿಟಲ್ ಮಾಧ್ಯಮದಲ್ಲಿ "ವನಿತಾ ಕಥನ" ಅಂಕಣವನ್ನು ಶ್ರೀಮತಿ ಮಾಧುರಿ ದೇಶಪಾಂಡೆಯವರು ಬರೆಯುತ್ತಿದ್ದಾರೆ.
ನಮ್ಮ ಭರತ ಭೂಮಿಯಲ್ಲಿ ಆಗಿ ಹೋದ ಪೌರಾಣಿಕ ಮತ್ತು ಐತಿಹಾಸಿಕ ಸ್ತ್ರೀಯರ ಗಾಥೆಯನ್ನು "ವನಿತಾ ಕಥನ" ಅಂಕಣದಲ್ಲಿ ತಿಳಿಯೋಣ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ