ಬೆಂಗಳೂರು: ‘ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಮೇಲುಗೈ ಸಾಧಿಸಲು ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟು ಬಹಳ ಮುಖ್ಯ. ಇದಕ್ಕೆ ಅಗತ್ಯವಿರುವುದು ಅವಶ್ಯ ಜ್ಞಾನದ ಜತೆ ವ್ಯಾವಹಾರಿಕ ಕೌಶಲ್ಯ. ಇವುಗಳ ಜತೆ ಅಪಾರ ಪರಿಶ್ರಮ ಸೇರಿದರೆ ಯಶಸ್ಸು ಖಚಿತ. ಏಕೆಂದರೆ ವ್ಯಾಪಾರ-ವಹಿವಾಟುಗಳಿಗೆ ಯಾವುದೇ ಗಡಿ ಇಲ್ಲ. ನಮ್ಮ ವಿದ್ಯಾರ್ಥಿಗಳು ತಮ್ಮವೇ ಆದ ವಿನೂತನ ಐಡಿಯಾಗಳೊಂದಿಗೆ ಅವಕಾಶಗಳನ್ನು ಅಧ್ಯಯಿನಿಸಿ ನಂತರ ತಮ್ಮ ಸ್ಟಾರ್ಟ್-ಅಪ್ ಕಂಪನಿಗಳನ್ನು ಸ್ಥಾಪಿಸಬೇಕು. ತದನಂತರ ಯಶಸ್ಸು ಕಟ್ಟಿಟ್ಟ ಬುತ್ತಿ’, ಎಂದು ಭಾರತದಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಬ್ರಿಟಿಷ್ ಡೆಪ್ಯೂಟಿ ಹೈಕಮಿಶನರ್ ಹಾಗೂ ದಕ್ಷಿಣ ಏಶಿಯಾದ ಬ್ರಿಟಿಷ್ ಡೆಪ್ಯೂಟಿ ಟ್ರೇಡ್ ಕಮಿಶನರ್ ಚಂದ್ರು ಐಯರ್ ನುಡಿದರು. ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಜಾಗತೀಕರಣ, ಉದ್ಯಮಶೀಲತೆ ಮತ್ತು ವಾಣಿಜ್ಯ’ ಕುರಿತಂತೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
‘ಬ್ರಿಟನ್ ಯೂರೋಪಿನ ಹೆಬ್ಬಾಗಿಲು ಇದ್ದಂತೆ. 2023ರ ಆರ್ಥಿಕ ವರ್ಷಾಂತ್ಯದಲ್ಲಿ ಬ್ರಿಟನ್ ಹಾಗೂ ಇಂಡಿಯಾ ದೇಶಗಳ ದ್ವಿಪಕ್ಷೀಯ ವಹಿವಾಟು 38.1 ಬಿಲಿಯನ್ ಪೌಂಡ್ಗಳಷ್ಟಾಗಿದೆ ಎಂಬುದು ನಿಜಕ್ಕೂ ಸಂತಸದ ಸಂಗತಿ. ಇದಕ್ಕೆ ನಮ್ಮ ಯುವ ತಂತ್ರಜ್ಞರು, ಸ್ವಯಂ ಉದ್ಯಮಗಳನ್ನು ಸ್ಥಾಪಿಸಿ ಯಶಸ್ಸಿನ ಮಾರ್ಗದಲ್ಲಿ ಸಾಗುತ್ತಿರುವುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ತಮ್ಮ ಯಾವುದೇ ಪ್ರಯತ್ನವಿರಲಿ, ಯುವ ಜನತೆ, ಸಹಾನುಭೂತಿ, ಸೂಕ್ತಜ್ಞಾನ ಹಾಗೂ ನಿರಂತರ ಗ್ರಹಿಕಾಸಾಮರ್ಥ್ಯಗಳನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ, ಎಷ್ಟೇ ಕಷ್ಟಸಾಧ್ಯವಾದರೂ ಯಶಸ್ಸು ಪ್ರಾಪ್ತವಾಗುತ್ತದೆ’, ಎಂದರು.
ತದನಂತರ ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನೆ ಹಾಗೂ ಅನ್ವೇಷಣೆಗಳಿಗೆ ಮೀಸಲಾದ ಪ್ರಯೋಗಾಲಯಗಳಿಗೆ ಭೇಟಿ ನೀಡಿ, ಅನ್ವೇಷಣೆಯಲ್ಲಿ ತೊಡಗಿದ್ದ ಯುವ ಸಂಶೋಧಕರನ್ನು ಅಭಿನಂದಿಸಿದರು.
ಪ್ರಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಸಂದೀಪ್ ಶಾಸ್ತಿç ಸ್ವಾಗತಿಸಿದರು. ಕೊನೆಯಲ್ಲಿ ಸಂಸ್ಥೆಯ ಅಂತಾರಾಷ್ಟ್ರೀಯ ವ್ಯವಹಾರಗಳ ಡೀನ್ ಡಾ. ಸುಧೀರ್ ರೆಡ್ಡಿ ವಂದಿಸಿದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಹಾಗೂ ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ