ಮೈಸೂರು: ಶಂಕರಾಲಯ ಶತಮಾನೋತ್ಸವ- ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ

Upayuktha
0

ವಿಧಿವತ್ತಾಗಿ ನಡೆದ ಕುಂಭಾಭಿಷೇಕ, ವಿವಿಧ ಹೋಮ, ಹವನ, ಪಾರಾಯಣ 


ಮೈಸೂರು: ನಗರದ ಶಂಕರ ಮಠದ  ಶಂಕರಾಲಯದ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಗುರುವಾರ ದೇಗುಲದ ಅವರಣದಲ್ಲಿ ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ, ಜಗದ್ಗುರುಗಳ ಪಾದಪೂಜೆ, ಭಿಕ್ಷಾ ವಂದನೆ, ಸಾರ್ವಜನಿಕ ದರ್ಶನ ಸೇರಿದಂತೆ ವಿವಿಧ ಹೋಮಗಳು ವಿಧಿವತ್ತಾಗಿ ನೆರವೇರಿದವು.


ಬೆಳಗ್ಗೆ 8.30ಕ್ಕೆ ಮಠದ ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ ಸನ್ನಿಧಿಗಳಲ್ಲಿ ಕುಂಭಾಭಿಷೇಕ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆಯನ್ನು ಜಗದ್ಗುರುಗಳು ನೆರವೇರಿಸಿದರು.


ಶತಮಾನೋತ್ಸವ ಅಂಗವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಪಾದಪೂಜೆ ಸ್ವೀಕಾರ ಮಾಡಿ ಭಕ್ತರಿಗೆ ಫಲ, ಮಂತ್ರಾಕ್ಷತೆ ಅನುಗ್ರಹಿಸಿದರು. ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಗುರುಗಳು ಪೂಜೆ ಸಮರ್ಪಿಸಿದರು. 


ರಂಜಿಸಿದ ಗಾಯನ:

ಸಂಜೆ ಪೃಥ್ವಿ- ಅಮೋಘ ಅವರ ಶಾಸ್ತ್ರೀಯ ಗಾಯನ ರಂಜಿಸಿತು. ಆನಂದ ಕಶ್ಯಪ್ ಮೃದಂಗ  ಮತ್ತು ಸುಬ್ರಹ್ಮಣ್ಯ ಕುಮಾರ್ ಘಟ ಪಕ್ಕವಾದ್ಯ ಸಾಥ್ ನೀಡಿದರು. ರಾತ್ರಿ 8. 30ಕ್ಕೆ ಶ್ರೀ ಮಠದಲ್ಲಿ ಗುರುಗಳು ಚಂದ್ರಮೌಳೇಶ್ವರ ಪೂಜೆ ನೆರವೇರಿಸಿದರು.


ಬಂಗಾರ ಲೇಪಿತ ಕಂಚಿನ ಕಳಸ ನಾಳೆ ಪ್ರತಿಷ್ಠಾಪನೆ

ಏ. 5ರ ಬೆಳಗ್ಗೆ 8:30ಕ್ಕೆ ಶಂಕರ ಮಠದ ಆವರಣದಲ್ಲಿ ಶ್ರೀ ಶಾರದಾಂಬಾ ಹಾಗೂ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಜಗದ್ಗುರುಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ ಮತ್ತು ಶಿಖರ ಕುಂಭಾಭಿಷೇಕ ನೆರವೇರಲಿವೆ. ಇದೇ ಸಂದರ್ಭ ದೇಗುಲಕ್ಕೆ 7 ಅಡಿ ಎತ್ತರದ ಬಂಗಾರ ಲೇಪಿತ ಕಂಚಿನ ಕಳಸ ಪ್ರತಿಷ್ಠಾಪನೆ ನೆರವೇರಲಿದೆ.


ಸಮಾರೋಪ ನಾಳೆ

ಏ. 5ರಂದು ಸಂಜೆ 5.30ಕ್ಕೆ ಮಠದ ಆವರಣದಲ್ಲಿ ‘ಗುರುವಂದನಾ’ ಕಾರ್ಯಕ್ರಮ, ಸಮಾರೋಪ ಸಮಾರಂಭ ಆಯೋಜನೆಗೊಂಡಿದೆ. ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಆಗಮಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆ ಪ್ರಮುಖರು, ನಗರದ ಗಣ್ಯರು, ಸಾರ್ವಜನಿಕರು ಗುರುಗಳಿಗೆ ಭಕ್ತಿ ಸಮರ್ಪಣೆ ಮಾಡಲಿದ್ದಾರೆ.


ನಾಳೆ ಸಂಜೆ ಸಂಗೀತ ಕಛೇರಿ:

5ರಂದು ಸಂಜೆ- ಅದಿತಿ- ಕೀರ್ತನಾ ಅವರ ದ್ವಂದ್ವ ಗಾಯನ ಸುಧೆಗೆ ರೂಪನಗುಡಿ ರತ್ನತೇಜ (ಪಿಟೀಲು) ಮತ್ತು ಪ್ರಣವ ಸುಬ್ರಹ್ಮಣ್ಯ (ಮೃದಂಗ) ಸಹಕಾರ ಮೆರುಗು ನೀಡಲಿದ್ದಾರೆ.


ಚಿತ್ರಗಳ ವಿವರ:

* ಮೈಸೂರಿನ ಶಂಕರ ಮಠದ ಆವರಣದಲ್ಲಿ ಶತಮಾನೋತ್ಸವ ಅಂಗವಾಗಿ ಗುರುವಾರ ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನೆರವೇರಿತು.

* ಗುರುವಾರ ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ ಸನ್ನಿಧಿಗಳಲ್ಲಿ ಕುಂಭಾಭಿಷೇಕ ನೆರವೇರಿತು. ಶ್ರೀ ವಿಧುಶೇಖರ ಭಾರತೀ ತೀರ್ಥ ಜಗದ್ಗುರುಗಳು ನೇತೃತ್ವ ವಹಿಸಿದ್ದರು.

* ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಶೃಂಗೇರಿಯ ಪಂಡಿತರಿಂದ  ಹೋಮ ನೆರವೇರಿತು.

* ಮೈಸೂರಿನ ಶಂಕರಮಠದಲ್ಲಿ ವಿದ್ವಾನ್ ನರಹರಿ ಭಟ್ ನೇತೃತ್ವದಲ್ಲಿ  ಶತಚಂಡಿ ಪಾರಾಯಣ ಪೂಜೆ ಸಂಪನ್ನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top