ಧರ್ಮಸ್ಥಳ : ದೇಶಿಯ ಸಂಸ್ಕೃತಿಯಲ್ಲಿ ಭರತ ನಾಟ್ಯಕ್ಕೆ ಅದರದ್ದೇ ಆದ ಮಹತ್ವ ಸ್ಥಾನವಿದೆ. ಭರತ ನಾಟ್ಯವು ನವರಸಗಳನ್ನು ಪ್ರತಿಬಿಂಬಿಸುವ ನೃತ್ಯ ಪ್ರಕಾರವಾಗಿದ್ದು. ತಾಳ್ಮೆ, ಶ್ರದ್ಧೆ, ಆಸಕ್ತಿಯೇ ಕಲೆಯ ಸ್ವರೂಪವೆಂದು ನಾಟ್ಯ ಪ್ರವೀಣೆ ವಿದೂಷಿ ಪ್ರಣತಿ ಚೈತನ್ಯ ಪದ್ಯಾಣ ತಂಡ ತೋರಿಸಿ ಕೊಟ್ಟಿದೆ.
ಲಕ್ಷ ದೀಪೋತ್ಸವದ ಪ್ರಯುಕ್ತ ಸೋಮವಾರ ವಸ್ತು ಪ್ರದರ್ಶನ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯವನ್ನು ಆಯೋಜಿಸಲಾಗಿತ್ತು.
ತಿಲ್ಲಂಗ್ ರಾಗ ಆದಿತಾಳದಲ್ಲಿ ಪ್ರಭು ಗಣಪತಿ ಎಂಬ ವಿಘ್ನನಿವಾರಕನ ಸ್ತುತಿಗೆ ಪುಟಾಣಿಗಳು ಹೆಜ್ಜೆ ಹಾಕಿ ಭರತನಾಟ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ನವರಸಗಳಾದ ಹಾಸ್ಯ, ಶೃಂಗಾರ ,ಕರುಣ, ರೌದ್ರ, ವೀರ, ಭಯಾನಕ, ಬಿಭತ್ಸ, ಅದ್ಭುತ, ಶಾಂತರಸಗಳನ್ನು ಶಿವನವರಸದ ಮೂಲಕ ಶಿವನ ವಿರಾಟ ರೂಪದ ನೃತ್ಯ ಮನಸೊರೆಗೊಂಡಿತು. ತಿಲ್ಲಾನ್ ನೃತ್ಯದೊಂದಿಗೆ ಭರತನಾಟ್ಯ ಸಂಪನ್ನಗೊಂಡಿತು.
ನಟುವಾಂಗದಲ್ಲಿ ನಾಟ್ಯ ಮಯೂರಿ ವಿದೂಷಿ ಗುರುರಾಜ್, ಹಾಡುಗಾರಿಕೆ ಸಂಗೀತ ಬಾಲ ಚಂದ್ರ, ಮೃದಂಗ ದೇವೇಶ್ ಭಟ್ ಕಿದಿಯೂರ್, ಕೋಳಲು ವಾದನದಲ್ಲಿ ಕೃಷ್ಣ ಗೋಪಾಲ್ ಪುತ್ತುರ್, ಇವರು ನೃತ್ಯದ ಮೆರುಗನ್ನು ಹೆಚ್ಚಿಸಿದರು.
- ಕಲಾನ್ವಿತ ಜೈನ್
ಪ್ರಥಮ ಎಂ.ಎ
ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್,ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ