ಧರ್ಮಸ್ಥಳ : ಲಕ್ಷದೀಪೋತ್ಸವದ ರಂಗುರಂಗಿನ ಬೆಳಕಿನಲ್ಲಿ ವಿವಿಧ ತಾಳ, ರಾಗಗಳ ಸಂಯೋಜನೆಯಲ್ಲಿ ಬೆಂಗಳೂರಿನ ಶ್ರೀ ಕೃಷ್ಣ ಕಲಾಲಯ ತಂಡವು ಸುನೀತಾ ಸುಕುಮಾರನ್ ಮಾರ್ಗದರ್ಶನದಲ್ಲಿ ಮೂರು ತಂಡಗಳು 17 ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿತು.
ಲಕ್ಷದೀಪೋತ್ಸವದ ಪ್ರಯುಕ್ತ ಭಾನುವಾರ ವಸ್ತು ಪ್ರದರ್ಶನ ಮಂಟಪದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಭರತನಾಟ್ಯ ಮತ್ತು ಜಾನಪದ ನೃತ್ಯವನ್ನು ಆಯೋಜಿಸಲಾಗಿತ್ತು.
ಮಿಶ್ರ ತಿಲಂಗ್ ರಾಗದಲ್ಲಿ ಆದಿ ತಾಳದಲ್ಲಿ ಪುಪ್ಪಾಂಜಲಿ ನೃತ್ಯ. ಶಿವನನ್ನು ಕುರಿತು ನಟನ ಮನೋಹರ , ಆಡಿದನೋ ಮದನಾರಿ, ಆನಂದ ನಟನವಾಡಿದ, ಶಿವ ತಾಂಡವ. ಮಣ್ಣಿನ ಮಡಿಕೆಯ ಮೇಲೆ ನಿಂತು, ತಲೆಯ ಮೇಲೆ ದೀಪವನ್ನು ಹೊತ್ತು ಶಿವನನ್ನು ವರ್ಣಿಸುತ್ತಾ ಸುಮನಸ ರಂಜನಿ ರಾಗ, ಆದಿ ತಾಳದಲ್ಲಿ ಈಶನೇ ಎಂಬ ನೃತ್ಯ ಪ್ರದರ್ಶನ. ವಿಜ್ಞನಿವಾರಕ ಗಣೇಶನ ಕುರಿತು ಸಂತತಮಹಂ ನೃತ್ಯ, ದೇವಿಯನ್ನು ನೆನೆಯುತ್ತಾ ಓಂಕಾರ ಬಿಂದು, ಭೈರವ ನಾರಿ ನೃತ್ಯ, ಆದಿಶಕ್ತಿಯಾದ ರಾಜರಾಜೇಶ್ವರಿಯನ್ನು ನೆನೆಯುತ್ತಾ ಪಾಹಿಮಾಂ ಶ್ರೀ ರಾಜರಾಜೇಶ್ವರಿ ನೃತ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
ಶ್ರೀ ಮಂಜುನಾಥ ಸ್ವಾಮಿಗೆ ಕಾರ್ತಿಕ ಲಕ್ಷದೀಪೋತ್ಸವ ಎಂಬ ನೃತ್ಯವು ನೆರೆದಿದ್ದ ಭಕ್ತ ವೃಂದವನ್ನು ಮಂತ್ರಮುಗ್ದಗೊಳಿಸಿತು. ಕರಗವನ್ನು ತಲೆಯಮೇಲೆ ಹೊತ್ತು ಬಂದ ಅಣ್ಣಮ್ಮ ದೇವಿಯ ಕುರಿತು ಅಣ್ಣಮ್ಮ ಬಂದಳು, ಪೂಜಾ ಕುಣಿತವಾದ ಕಂಡೆ ಪರಶಿವನ, ಚಾಮುಂಡೇಶ್ವರಿ ದೇವಿಯನ್ನು ನೆನೆಯುತ್ತಾ ಒಲಿದು ಬಾ, ಶ್ರೀಗಣರಾಯ ಎಂಬ ಜಾನಪದ ನೃತ್ಯಗಳು ಪ್ರೇಕ್ಷಕರ ಗಮನವನ್ನು ಸೆಳೆದವು. ಒಂದು ಗಂಟೆ ಅವಧಿಯ ಭರತನಾಟ್ಯ ಮತ್ತು ಜಾನಪದ ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಕೀರ್ತನಾ ಸ್ವಾಗತಿಸಿ, ಲಿಖಿತ ಎಂ ವಂದನಾರ್ಪಣೆ ಮಾಡಿದರು.
- ಚಂದ್ರಶೇಖರ್ ವಿ.
ದ್ವಿತೀಯ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ