ಗೋವಿಂದ ದಾಸ ಕಾಲೇಜು: ವಿದ್ಯಾರ್ಥಿ ಸೆನೆಟ್ ದಿನ ಹಾಗೂ ಕಾಲೇಜು ದಿನಾಚರಣೆ

Upayuktha
0


ಸುರತ್ಕಲ್:
ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಾಧನೆಯ ಪಥದಲ್ಲಿ ಶ್ರೇಷ್ಠತೆಯನ್ನು ಸಾಧಿಸಿಕೊಳ್ಳಬೇಕು ಎಂದು ಜೈಪುರ ಎನ್.ಐ.ಟಿ ಹಾಗೂ ಸುರತ್ಕಲ್ ಎನ್.ಐ.ಟಿ.ಕೆಯ ನಿಕಟಪೂರ್ವ ನಿರ್ದೇಶಕ ಮತ್ತು ಪ್ರಾಧ್ಯಾಪಕ ಡಾ. ಉದಯಕುಮಾರ್ ಆರ್. ಯರಗಟ್ಟಿ ನುಡಿದಿದ್ದಾರೆ. ಅವರು ಗೋವಿಂದ ದಾಸ ಕಾಲೇಜು ಸುರತ್ಕಲ್‍ನ ವಿದ್ಯಾರ್ಥಿ ಸೆನೆಟ್ ದಿನ ಹಾಗೂ ಕಾಲೇಜು ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಅತ್ಮೋನ್ನತಿ ಹಾಗೂ ರಾಷ್ಟ್ರಾಭಿಮಾನದ ಮೂಲಕ ವಿದ್ಯಾರ್ಥಿಗಳು ನಾಡಿನ ಸತ್ಪ್ರಜೆಗಳಾಗಬೇಕಾಗಿದೆ. ಗೋವಿಂದ ದಾಸ ಕಾಲೇಜು ಶೈಕ್ಷಣಿಕ ಹಾಗೂ ಶೈಕ್ಷಣಿಕ ಪೂರಕ ಚಟುವಟಿಕೆಗಳಿಗೆ ಅಪಾರ ಅವಕಾಶಗಳನ್ನು ಕಲ್ಪಿಸಿದೆ ಎಂದು ಅವರು ನುಡಿದರು.


ಹಿಂದೂ ವಿದ್ಯಾದಾಯಿನಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿ ಇ. ಜನಾರ್ಧನ್  ಅವರನ್ನು ಸನ್ಮಾನಿಸಲಾಯಿತು. ಇ. ಜನಾರ್ಧನ್ ಮಾತನಾಡಿ ವೇಗವಾಗಿ ಬದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಧುನಿಕತೆಗಳಿಗೆ ಸ್ಪಂದಿಸಬೇಕಾಗಿದೆ ಎಂದರು.


ಅಧ್ಯಕ್ಷತೆಯನ್ನು  ವಹಿಸಿದ್ದ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೆಚ್. ಮಾತನಾಡಿ ಕಲಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆಂದರು. 

ನಿವೃತ್ತರಾಗಿರುವ ಆಡಳಿತಾತ್ಮಕ ಸಿಬ್ಬಂದಿಗಳಾದ ಬಸವ ಕೆ. ಮತ್ತು ಕೆ. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.


ಅಂತರಾಷ್ಟ್ರೀಯ ಮಟ್ಟದ ಯುವ ಉತ್ಸವದಲ್ಲಿ ಭಾಗವಹಿಸಿದ ಪ್ರಾಧ್ಯಾಪಕಿಯರಾದ ಡಾ. ವಿಜಯಲಕ್ಷ್ಮಿ ಮತ್ತು ಪುನಿತಾ ಆರ್. ಹಾಗೂ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಅತ್ಯತ್ತಮ ರಾಷ್ಟ್ರೀಯ ಸ್ವಯಂ ಸೇವಕ ಪ್ರಶಸ್ತಿ ಪಡೆದ ರಶ್ಮಿ ಅಂಚನ್ ಅವರನ್ನು ಗೌರವಿಸಲಾಯಿತು.


ಉಪಪ್ರಾಚಾರ್ಯ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಭಟ್ ಎಸ್.ಜಿ. ಸ್ವಾಗತಿಸಿದರು. ನಿರ್ದೇಶಕರು - ಆಡಳಿತ ಪ್ರೊ. ರಮೇಶ್ ಕುಳಾಯಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು.


ಬಬಿತಾ ನವೀನ್‍ಚಂದ್ರ ದಾನಿಗಳ ಪಟ್ಟಿಯನ್ನು ಓದಿದರು. ಉಪನ್ಯಾಸಕರಾದ ಡಾ. ವಿಜಯಲಕ್ಷ್ಮಿ, ಡಾ. ಗಣೇಶ ಆಚಾರ್ಯ, ಶರ್ಮಿತ ಯು, ಡಾ. ಪ್ರಶಾಂತ್ ಎಂ.ಡಿ. ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು.


ಸೌಪರ್ಣಿಕ ನಾೈಕ್ ಎಸ್. ವಂದಿಸಿ, ಲಾವಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.


ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್,  ಜೊತೆ ಕಾರ್ಯದರ್ಶಿ ರಾಮಚಂದ್ರ, ಕೋಶಾಧಿಕಾರಿ ಹೆಚ್.ಎಲ್ ರಾವ್, ನಿಕಟಪೂರ್ವ ಉಪಾಧ್ಯಕ್ಷ ಪ್ರೊ. ವೈ.ವಿ. ರತ್ನಾಕರ ರಾವ್, ನಿಕಟಪೂರ್ವ ಕಾರ್ಯದರ್ಶಿ ಎಂ. ವೆಂಕಟ್ರಾವ್ ಹಿಂದೂ ವಿದ್ಯಾದಾಯಿನೀ ಸಂಘದ ಸದಸ್ಯರಾದ ಉಮಾದೇವಿ, ಹೆಚ್.ಯು ಅನಂತಯ್ಯ, ಸುಬ್ರಹ್ಮಣ್ಯ ಪಿ.  ಕಾಲೇಜಿನ ಮಾಜಿ ಆಡಳಿತಾತ್ಮಕ ನಿರ್ದೇಶಕರಾದ  ಡಾ. ಬಿ.ಆರ್ ಸಾಮಗ, ಮಧುಸೂಧನ ರಾವ್, ಶಿಕ್ಷಕ ರಕ್ಷಕ ಸಂಘದ ಸಲಹೆಗಾರ ಗಂಗಾಧರ ಪೂಜಾರಿ, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ನ ಕಾರ್ಯದರ್ಶಿ ಗಂಗಾಧರ ಶೆಟ್ಟಿ, ವಿದ್ಯಾರ್ಥಿ ಸೆನೆಟ್ ಕಾರ್ಯದರ್ಶಿಗಳಾದ ಶ್ರೇಯ, ಆಶೀಶ್, ಯಶವಂತ, ರಕ್ಷಿತ್ ಕುಮಾರ್, ಕೆ.ಎಂ. ಜಯಸೂರ್ಯ ಜೊತೆ ಕಾರ್ಯದರ್ಶಿಗಳಾದ ಪಲ್ಲವಿ, ಪ್ರಿಯಾಂಕ, ವಿಭಾ ಎಂ. ಶೆಟ್ಟಿ, ಪೂರ್ವಿ ಅಶೋಕ್ ಮೆಂಡನ್ ಮತ್ತಿತ್ತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top