ಪಾರ್ಕಿಂಗ್ ಅವ್ಯವಸ್ಥೆ, ಸಂಚಾರ ಕಿರಿಕಿರಿ: ನೋ ಪಾರ್ಕಿಂಗ್ ಫಲಕ ಆಳವಡಿಲು ಬನಶಂಕರಿ ಟ್ರಾಫಿಕ್‌ ಇನ್ಸ್‌ಪೆಕ್ಟರ್ ಗೆ ಮನವಿ

Upayuktha
0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಅಧಿಕವಾಗುತ್ತಿರುವ ಪಾರ್ಕಿಂಗ್ ಅವ್ಯವಸ್ಥೆ, ಸಂಚಾರ ಕಿರಿಕಿರಿ, ಸಂಚಾರ ದಟ್ಟಣೆ ಸಂಬಂಧ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅವರಿಗೆ ಇತ್ತೀಚೆಗೆ ಸಿಂಹಸ್ವಪ್ನ ಕನ್ನಡಿಗರ ಬಳಗ (ರಿ) ಅಧ್ಯಕ್ಷರು ಹಾಗೂ ಬನಶಂಕರಿ 3ನೇ ಹಂತದ ಗುರುದತ್ತ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಮಹಾಪ್ರಧಾನ ಕಾರ್ಯದರ್ಶಿಗಳು ಆದ ಜಯದೇವ ಸಿಂಗ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಮನವಿ ಪತ್ರ ಸಲ್ಲಿಸಲಾಯಿತು.


ಮನವಿ ಪತ್ರಕ್ಕೆ ಸ್ಪಂದಿಸಿದ ಬನಶಂಕರಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗದವರು ಜುಲೈ 1ರಂದು ಬನಶಂಕರಿ 3ನೇ ಹಂತದ ಗುರುದತ್ತ ಬಡವಾಣೆಗೆ ಭೇಟಿ ನೀಡಿ ಬನಶಂಕರಿ 3ನೇ ಹಂತದ ಗುರುದತ್ತ ಬಡಾವಣೆಯಿಂದ ನಗರದ ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸುವ ದತ್ತಾತ್ರೇಯ ದೇವಾಲಯ ಹಾಗೂ ನರಗುಂದ ಶಾಲೆಯ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಿದ್ದ ವಾಹನಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಬನಶಂಕರಿ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ನೋ ಪಾರ್ಕಿಂಗ್ ನಾಮ ಫಲಕ ಆಳವಡಿಸಲು ಬಡಾವಣೆಯ ನಾಗರೀಕರು ಒತ್ತಾಯಿಸಿದರು.


ಖಾಸಗಿ ವಾಹನಗಳು, ಶಾಲಾ ವಾಹನಗಳು, ಆಟೋ- ದ್ವಿಚಕ್ರ ವಾಹನಗಳನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವ ವಾಹನಗಳ ವೀಲ್ ಗೆ ಕ್ಲ್ಯಾಂಪ್  ಹಾಕಬೇಕು ಎಂದು ಜಯದೇವ ಸಿಂಗ್ ಹಾಗೂ ಬಡಾವಣೆಯ ಸಮಸ್ತ ನಾಗರೀಕರು ಪೊಲೀಸ್ ಹಾಗೂ ಆರ್.ಟಿ.ಓ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಂಚಾರ ಪೊಲೀಸ್ ಇಲಾಖೆಯ ವತಿಯಿಂದ ನಗರದಲ್ಲಿ ಎಲ್ಲೆಲ್ಲಿ ಪಾರ್ಕಿಂಗ್ ಲಭ್ಯವಿದೆ ಎಂಬ ಬಗ್ಗೆ ಇಲ್ಲಿ ಪಾರ್ಕಿಂಗ್ ಮಾಡಿರುವ ವಾಹನ ಮಾಲೀಕರಿಗೆ ಬ್ಲೂಪ್ರಿಂಟ್ ನೀಡಲಿ ಎಂದು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.

ದತ್ತಾತ್ರೇಯ ದೇವಾಲಯದ ರಸ್ತೆಯು ಬಹಳ ಕಿರಿದಾದ ರಸ್ತೆಯಾಗಿದ್ದು ಈ ರಸ್ತೆ ವಿ(ಯು).ಬಿ. ಬೇಕರಿ, ಟಿ.ಜಿ.ಲೇಔಟ್, ಮಾರ್ಸ್ ಮೌಂಟ್ ಅಪಾರ್ಟ್ಮೆಂಟ್, ಟಾಟಾ ಪ್ರಮೌಂಟ್ ಅಪಾರ್ಟ್ಮೆಂಟ್, ಗುರುರಾಜ ಲೇಔಟ್, ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಹಾಗೂ ನರಗುಂದ ಶಾಲೆಗೆ ಹೋಗುವ ಮಕ್ಕಳು ಮತ್ತು ದತ್ತಾತ್ರೇಯ ದೇವಾಲಯಕ್ಕೆ ಹೋಗುವ ಭಕ್ತರು ಮತ್ತು ಔಟರ್ ರಿಂಗ್ ರೋಡ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.

ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಎದುರು- ಬದುರು ವಾಹನಗಳು ಬಂದಾಗ ಅಪಾಘಾತ ಆಗುವ ಸಾಧ್ಯತೆ ಹೆಚ್ಚು ಇರುವುದರಿಂದ ಈ ವಿಚಾರದಲ್ಲಿ ಸಂಚಾರಿ ಪೊಲೀಸ್ ಇಲಾಖೆಯ ವತಿಯಿಂದ ಶಾಶ್ವತವಾಗಿ ಪರಿಹಾರ ನೀಡಲಿ ಎಂದು ಸಿಂಹ ಸ್ವಪ್ನ ಕನ್ನಡಿಗರ ಬಳಗ (ರಿ) ಅಧ್ಯಕ್ಷರು ಹಾಗೂ ಬನಶಂಕರಿ 3ನೇ ಹಂತದ ಗುರುದತ್ತ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಮಹಾ ಪ್ರಧಾನ ಕಾರ್ಯದರ್ಶಿಗಳು ಆದ ಜಯದೇವ ಸಿಂಗ್ ಹಾಗೂ ಗುರುದತ್ತ ಬಡಾವಣೆಯ ಸಮಸ್ತ ನಾಗರೀಕರು ಒತ್ತಾಯಿಸಿದ್ದಾರೆ.

ಚಿತ್ರ, ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top