ಕಾರವಾರ: "ಕಥಾಯಾನ - ರಾಜ್ಯಮಟ್ಟದ 10ನೇ ಸಾಹಿತ್ಯ ಕಾರ್ಯಾಗಾರ" ವನ್ನು ಏಪ್ರಿಲ್ 22-23 ಶನಿವಾರ ಮತ್ತು ರವಿವಾರ ಕೈಗಾ ಟೌನ್ಶಿಪ್ ಸಭಾಂಗಣದಲ್ಲಿ ಆಯೋಜಿಲಾಗುತ್ತಿದ್ದು ಅಸಕ್ತ ಉದಯೋನ್ಮುಖ ಬರಹಗಾರರು, ಲೇಖಕರು ಈ ಸಾಹಿತ್ಯ ಕಾರ್ಯಾಗಾರದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಮಾನದಂಡವಾಗಿ ಆಸಕ್ತ ಶಿಬಿರಾರ್ಥಿಗಳು ತಮ್ಮ ಇತ್ತಿಚಿನ ಪ್ರಕಟಿತ ಅಥವಾ ಹಸ್ತಪ್ರತಿ ರೂಪದಲ್ಲಿರುವ ಕಥೆ, ಲೇಖನ, ವೈಜ್ಞಾನಿಕ ಅಥವಾ ಯಾವುದೇ ಬರಹವನ್ನು kathayaana@gmail.com ಸಲ್ಲಿಸಲು ಕೋರಲಾಗಿದೆ. ಈಗಾಗಲೇ ಪ್ರಕಟಿತ ಲಿಂಕ್ನ್ನು ಕೂಡಾ ಮೇಲ್ ಮೂಲಕ ಸಲ್ಲಿಸಬಹುದಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಚ್.ಎಸ್. ಸತ್ಯನಾರಾಯಣ. ಕತೆಗಾರರು ಮತ್ತು ಖ್ಯಾತ ವಿಮರ್ಶಕರು. ಟಿ.ಜಿ. ಶ್ರೀನಿಧಿ - ಸಂಪಾದಕರು ಈಜ್ಞಾನ.ಕಾಮ್, ಸಂತೋಷಕುಮಾರ ಮೆಹೆಂದಳೆ. ಕತೆಗಾರ ಮತ್ತು ಕಾದಂಬರಿಕಾರ ಹಾಗೂ ವಾಸುದೇವ ನಾಡಿಗ್, ಖ್ಯಾತ ಕವಿಗಳು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಕೈಗಾ ಆಡಳಿತ ಮಂಡಳಿ ಸಹಯೋಗದೊಂದಿಗೆ ಕಾರ್ಯಾಗಾರ ಜರುಗಲಿದೆ. ಆಯ್ಕೆ ಪ್ರಕ್ರಿಯೆಯು ಬರಹದ ಸಲ್ಲಿಕೆಯ ಮೇರೆಗೆ ಗರಿಷ್ಠ 35 ಜನರಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ:
ನಿರ್ದೇಶಕರು ಕಥಾಯಾನ: 9480842680
ಅಥವಾ ನಿರ್ವಾಹಕರು : 90081 30204 ಸಂಪರ್ಕಿಸಲು ಕೋರಲಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ