ಉಜಿರೆ: ಎಸ್.ಡಿ.ಎಂ. ಸೆಕೆಂಡರಿ ಶಾಲೆ ಆಯೋಜಿಸಿರುವ ಬೇಸಿಗೆ ಶಿಬಿರದ ಅಂಗವಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಆರ್ಬೋರೆಟಮ್ ಗೆ ಶಿಕ್ಷಕರ ಜೊತೆಗೆ, 100 ವಿದ್ಯಾರ್ಥಿಗಳು ತಂಡವು ಭೇಟಿ ನೀಡಿ ವೀಕ್ಷಣೆ, ಮಾಹಿತಿ ಸಂಗ್ರಹ ಹಾಗೂ ಸಂವಾದ ಕಾರ್ಯಾಗಾರದಲ್ಲಿ ಭಾಗವವಹಿಸಿತು .
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಗಿಡಮೂಲಿಕೆಗಳ ಪರಿಚಯ, ಸಸ್ಯ ವರ್ಗೀಕರಣ, ಜೀವ ವೈವಿಧ್ಯತೆ, ಪರಿಸರ ಸಂರಕ್ಷಣೆ, ನಾಳಿನ ದಿನಗಳಿಗೆ ಸಸ್ಯಗಳ ಅಗತ್ಯತೆ ಮುಂತಾದ ಅತ್ಯಮೂಲ್ಯ ವಿಷಯಗಳ ಬಗ್ಗೆ ಎಸ್.ಡಿ.ಎಮ್. (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ಡಾ| ಕುಮಾರ ಹೆಗ್ಡೆ ಬಿ.ಎ. ಇವರು ಕೂಲಂಕುಷ ಮಾಹಿತಿ ನೀಡಿದರು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್ ಕೆ. ಎಸ್. ಇವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ