ಮಂಗಳೂರು: ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಟೂರಿಸಂ ಮತ್ತು ಡಿಪಾರ್ಟ್ಮೆಂಟ್ ಆಫ್ ಇಂಟೀರಿಯರ್ ಡಿಸೈನ್ ವಿದ್ಯಾರ್ಥಿಗಳು, 2022 ರ ಅಕ್ಟೋಬರ್ 28 ರಂದು 'ದಿ-ಲೈಟ್ಸ್ 2ಕೆ 22 ದಿ ಸ್ಪಾರ್ಕ್ ಆಫ್' ಹ್ಯಾಪಿನೆಸ್ ಅನ್ನು ಆಯೋಜಿಸಿದ್ದರು.
ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ.ಸಿ.ಎ.ಎ.ರಾಘವೇಂದ್ರ ರಾವ್ ಅವರ ಮಾರ್ಗದರ್ಶನ ಮತ್ತು ಆಶೀರ್ವಾದಗಳೊಂದಿಗೆ, ಕಾರ್ಯಕ್ರಮದ ಅಧ್ಯಕ್ಷರಾದ, ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಪ್ರೊ.ಕುಲಾಧಿಪತಿ, ಡಾ.ಎ.ಶ್ರೀನಿವಾಸ್ ರಾವ್ ಅವರು ಉತ್ಸವವನ್ನು ಉದ್ಘಾಟಿಸಿದರು. ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಟ್ರಸ್ಟಿ -ಸದಸ್ಯರು, ಆಡಳಿತ ಮಂಡಳಿ, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು ಮತ್ತು ಪ್ರೊ.ಇ ಆರ್. ಎ. ಮಿತ್ರ ಎಸ್. ರಾವ್ ಟ್ರಸ್ಟಿ-ಸದಸ್ಯರು, ಆಡಳಿತ ಮಂಡಳಿ, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಎಸ್.ಐತಾಳ್ ಉಪಸ್ಥಿತರಿದ್ದರು. ಶ್ರೀನಿವಾಸ್ ಯೂನಿವರ್ಸಿಟಿ ಇನ್ ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಅಂಡ್ ಟೂರಿಸಂ ನ ಡೀನ್ ಪ್ರೊ.ಸ್ವಾಮಿನಾಥನ್ ಎಸ್ ಮತ್ತು ಇತರ ಬೋಧಕ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
4ನೇ ವರ್ಷದ ಬಿ.ಎಚ್.ಎಂ.ಸಿ.ಟಿ.ಯ ವಿದ್ಯಾರ್ಥಿ ಶ್ರೀಮತಿ ಆರ್ಯ ಸಾವನ್ ಶಿರೋಡ್ಕರ್ ಅವರು ಸ್ವಾಗತ ಭಾಷಣ ಮಾಡಿದರು. ಮತ್ತು ಎರಡನೇ ವರ್ಷದ ಬಿ.ಎಸ್ಸಿ ಐಡಿ ವಿದ್ಯಾರ್ಥಿ ಶ್ರೀ ಪ್ರೇಮ್ ಕಿರಣ್ ಡಿ ಸೋಜಾ ಅವರು ವಂದಿಸಿದರು. ಕಾರ್ಯಕ್ರಮವನ್ನು ಎರಡನೇ ವರ್ಷದ ಬಿ.ಎಸ್ಸಿ.ಎಚ್.ಎಮ್ ವಿದ್ಯಾರ್ಥಿ ಶ್ರೀ ತನ್ಮಯ್ ಭದ್ಭುಜೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿಗಳು ಕ್ಯಾಂಪಸ್ ನಾದ್ಯಂತ ಎಣ್ಣೆ ದೀಪಗಳನ್ನು ಬೆಳಗಿಸಿ, ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಪ್ರದಾಯಿಕ ಆಹಾರ ಪದಾರ್ಥಗಳು ತಯಾರಿಸಿದ್ದರು ಹಾಗೂ ಸಾಂಸ್ಕೃತಿಕ ಮತ್ತು ವಾದ್ಯ ಕಾರ್ಯಕ್ರಮಗಳನ್ನು ಸಹ ಪ್ರದರ್ಶಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ