ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಸರು ನೋಂದಾಯಿಸಲು ರೈತ ಸದಸ್ಯರಲ್ಲಿ ಮನವಿ: ಪ್ರಭಾಕರ ಪ್ರಭು

Upayuktha
0

ಬಂಟ್ವಾಳ: ಸಹಕಾರ ಇಲಾಖೆಯ ಮೂಲಕ ಈ ಹಿಂದೆ ಜಾರಿಯಲ್ಲಿದ್ದು ನಂತರ ಸ್ಥಗಿತಗೊಂಡಿದ್ದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಸಹಕಾರ ಸಂಘಗಳ ಸದಸ್ಯರ ಮತ್ತು ರೈತರ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಮಾನ್ಯ ಮುಖ್ಯಮಂತ್ರಿ ಯವರು 2022-23 ನೇ ಸಾಲಿನ ಆಯವ್ಯಯದಲ್ಲಿ ಮತ್ತೆ ಪರಿಷ್ಕರಣೆ ಮಾಡಿ ಮರು ಜಾರಿಗೊಳಿಸಲು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸರಕಾರವು ಈ ಯೋಜನೆಯನ್ನು 2022 ನವಂಬರ್ 1ರಿಂದ ಜಾರಿಗೊಳಿಸಲು ಆದೇಶ ಮಾಡಿದ್ದು ಸಹಕಾರ ಸದಸ್ಯರೆಲ್ಲರೂ ತಕ್ಷಣದಿಂದಲೇ ಹೆಸರು ನೋಂದಾಯಿಸುವಂತೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ವಿನಂತಿಸಿದ್ದಾರೆ.


ಸದ್ರಿ ಯೋಜನೆಗೆ ಸರಕಾರವು ಬರೋಬ್ಬರಿ 300 ಕೋಟಿ ಹಣ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿ ಗ್ರಾಮೀಣ ಮತ್ತು ನಗರ ಪ್ರದೇಶದ ಸುಮಾರು 30 ಲಕ್ಷದಷ್ಟು ಫಲಾನುಭವಿಗಳನ್ನು ನೋಂದಾಯಿಸಲು ಸರಕಾರ ಉದ್ದೇಶಿಸಿದೆ. ಪ್ರತಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ವೆಚ್ಚದ ಗರಿಷ್ಠ ಮಿತಿ 5 ಲಕ್ಷ ಹೊಂದಿರುತ್ತದೆ.


ಸಹಕಾರ ಸಂಘಗಳು /ಗ್ರಾಮೀಣ ಸ್ವಸಹಾಯ ಗುಂಪಿನಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ 3 ತಿಂಗಳು ಆದಲ್ಲಿ ಆ ಕುಟುಂಬ ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಗ್ರಾಮೀಣ ಸಹಕಾರಿಗಳಿಗೆ ಅನ್ವಯಿಸಿದಂತೆ 4 ಸದಸ್ಯರು ಇರುವ ಒಂದು ಕುಟುಂಬಕ್ಕೆ ವಾರ್ಷಿಕ ಕಂತು 500 ಎಂಬುದಾಗಿ ನಿಗದಿ ಪಡಿಸಲಾಗಿದ್ದು 4ಕ್ಕಿಂತ ಹೆಚ್ಚಿನ ಸದಸ್ಯರ ಕುಟುಂಬ ಪ್ರತಿ ಯೊಬ್ಬ ಸದಸ್ಯರಿಗೆ 100 ರೂ. ರಂತೆ ಹೆಚ್ಚುವರಿಯಾಗಿ ಸದಸ್ಯರು ಪಾವತಿಸಬೇಕು. ಪ. ಜಾತಿ, ಪ. ಪಂಗಡ ಸದಸ್ಯರಿಗೆ ವಂತಿಗೆ ರಿಯಾಯಿತಿ ಮಾಡಲಾಗಿದ್ದು ಸರಕಾರವೇ ವಂತಿಗೆಯನ್ನು ಭರಿಸುತ್ತದೆ.


ಸಹಕಾರ ಸಂಘ ಹಾಗೂ ಸ್ವಸಹಾಯ ಗುಂಪು ಸದಸ್ಯರೆಲ್ಲರೂ ಯೋಜನೆ ಲಾಭ ಪಡೆಯಲು ತಮ್ಮ ಕುಟುಂಬದ ಪಡಿತರ ಚೀಟಿ, ಆಧಾರ್, ಫೋಟೋ ದೊಂದಿಗೆ ಸಮೀಪದ ಸಹಕಾರ ಸಂಘಗಳನ್ನು ಸಂಪರ್ಕ ಮಾಡುವತೆ ಸಹಕಾರ ಸಂಘಗಳ ಸದಸ್ಯ ರೈತ ಬಾಂದವರಲ್ಲಿ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆ ಮೂಲಕ ವಿನಂತಿ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ  ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top