ನೂತನ ಶಿಕ್ಷಣ ಪದ್ಧತಿ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕ: ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ

Upayuktha
0



ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ನ್ನು ಮೂರು ವರ್ಷದಿಂದ ಉನ್ನತ ಶಿಕ್ಷಣ ಪಡೆಯುವ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ಮುಕ್ತ ವಾತಾವರದಲ್ಲಿ ಶಿಕ್ಷಣದ ಜೊತೆಗೆ ಮಗುವಿನ ಆರೋಗ್ಯ, ಆಹಾರದ ಕಡೆಗೂ ನೀತಿ ಒತ್ತು ನೀಡಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.  


ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ಹಾಗೂ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟಗಳು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬುಧವಾರ ಆಯೊಜಿಸಿದ್ದ 'ಮಕ್ಕಳ ಹಕ್ಕುಗಳ ಮಾಸೋತ್ಸವ-2021' ಉದ್ಘಾಟಿಸಿ ಮಾತನಾಡಿದ ಅವರು ತಂತ್ರಜ್ಞಾನ ನಮ್ಮನ್ನು ಆಳದಂತೆ ಮಕ್ಕಳು, ಪೋಷಕರು ಎಚ್ಚರದಿಂದಿರಬೇಕು. ಮಗುವಿನ ನೋವು ನಿವಾರಿಸುವಲ್ಲಿ ನಮ್ಮ ಜವಾಬ್ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅನಾಥಮಕ್ಕಳ, ಬಾಲಕಾರ್ಮಿಕರ ಸಮೀಕ್ಷೆ ಸೇರಿದಂತೆ ಅವರನ್ನು ಮುಖ್ಯವಾಹಿನಿಗೆ ತರುವ ಎಲ್ಲಾ ಪ್ರಯತ್ನಗಳಿಗೆ ವಿಶ್ವವಿದ್ಯಾನಿಲಯ ಬೆಂಬಲವಾಗಿರಲಿದೆ ಎಂದು ಆಶ್ವಾಸನೆ ನೀಡಿದರು.  


ಮುಖ್ಯ ಅತಿಥಿ ಮಾನಸಿಕ ಆರೋಗ್ಯ ತಜ್ಞೆ ರಮೀಳಾ ಶೇಖರ್ ಅವರು ಮಕ್ಕಳ ಯೋಗಕ್ಷೇಮ, ಸಂಪರ್ಕದಿಂದಾಗಿ ಅವರಿಗೆ ಆಗುವ ಅಪಾಯಗಳು ಮತ್ತು ನಡವಳಿಕೆಯಿಂದಾಗುವ ಅಪಾಯಗಳ ಕುರಿತು ತಿಳಿಸಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಬೆಳಕು ಚೆಲ್ಲಿದರು. 


ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಸಹ ಸಂಚಾಲಕ ರೆನ್ನಿಡಿʼಸೋಜ, ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, 90% ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಜಾರಿಯಲ್ಲಿಲ್ಲ. ಅದರ ಜಾರಿಗೆ ನಾವು ಸರ್ಕಾರವನ್ನು ಒತ್ತಾಯಿಸಲಿದ್ದೇವೆ. ಈ ಒಂದು ಯೋಜನೆಗೆ ಶೈಕ್ಷಣಿಕ ಸ್ಪರ್ಶ ಸಿಗುವಂತಾಗಲು ಮಂಗಳೂರು ವಿವಿಯ ಸಹಕಾರ ಅಗತ್ಯವಿದೆ ಎಂದರು.  


ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ, ಸಮಿತಿಯ ಸಂಚಾಲಕ ಮಂಜು ವಿಟ್ಲ, ವಿದ್ಯಾರ್ಥಿ ಪ್ರತಿನಿಧಿ ಗಾಯತ್ರಿ ಮೊದಲಾದವರು ಉಪಸ್ಥಿತರಿದ್ದರು. ಆಶಾಲತಾ ಸುವರ್ಣ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಕಾರ್ಯದರ್ಶಿ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು. ಪಡಿ ಕಾರ್ಯಕ್ರಮ ನಿರ್ವಾಹಕ ನವೀನ್ ಕುಮಾರ್ ಮೊದಲಾದವರು ಹಾಜರಿದ್ದರು. 'ಮಗು ಸ್ನೇಹಿ ಸಮಾಜಕ್ಕಾಗಿ ಮಕ್ಕಳ ಹಕ್ಕುಗಳ ಮಾಸೋತ್ಸವ' ಎಂಬ ಘೋಷ ವಾಕ್ಯದೊಂದಿಗೆ ಡಿಸೆಂಬರ್ 11 ರವರೆಗೆ ಜಿಲ್ಲೆಯ ವಿವಿದೆಡೆ ಕಾರ್ಯಕ್ರಮಗಳು ನಡೆಯಲಿವೆ.  


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top