ಪ್ರಾತಿನಿಧಿಕ ಚಿತ್ರ
ನಮ್ಮ ಕೃಷಿ ವಿಜ್ಞಾನಿಗಳು ಹೇಳುವುದು-
ಸಾಧಾರಣವಾಗಿ ಪ್ರಸಕ್ತವಾಗಿ ಇರುವ ಯಾವುದೇ ಅಡಿಕೆ ಮರದಿಂದ ಗರಿಷ್ಠ ಇಳುವರಿ ಅಂದರೆ 3- 4 ಕಿಲೋ ಚಾಲಿ ಅಡಿಕೆ.
ನನ್ನ ಪ್ರಕಾರ, ಆಯಾಯಾ ತಳಿಗೆ ಸಂಬಂಧಪಟ್ಟ ಹಾಗೆ, ಇದಕ್ಕಿಂತ ಹೆಚ್ಚು ಇಳುವರಿ ತೆಗೆದರೆ, ಇದು ಒಳ್ಳೆಯ ಕೃಷಿ ಕ್ರಮ ಅಲ್ಲ. ಇದು ಅತಿಯಾದ ಉದ್ದೀಪನ ಕೊಟ್ಟು ಒಲಂಪಿಕ್ಸ್ನಲ್ಲಿ ಮೆಡಲ್ ಪಡೆದಂತೆ. (ಅಲ್ಲಿ ಈಗ doping check ಮಾಡ್ತಾರೆ, ಆದರೆ ಕೃಷಿಯಲ್ಲಿ ಅಂತಹ ತಪಾಸಣೆ ಇಲ್ಲ). ಅಂದರೆ ಒಂದು ಇತಿ ಮಿತಿಗಿಂತ ಹೆಚ್ಚು ಗೊಬ್ಬರ ಕೊಟ್ಟು ಬೆಳೆ ತೆಗೆಯುವುದು ಪ್ರಕೃತಿ ಧರ್ಮಕ್ಕೆ ವಿರುದ್ಧವಾದುದು. ಇದು ವಿಕೃತ ಮನೋಭಾವದ ಕೃಷಿ. (ಅಂತಹ ಮಾದರಿಯನ್ನು ಅನುಸರಿಸುವವರು ಇದೇ ವ್ಯವಸ್ಥೆಯನ್ನು ತಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಕೂಡಾ ಮಾಡುತ್ತಾರೆಯೇ ಎಂಬುದು ಯಕ್ಷಪ್ರಶ್ನೆ). ಸರಿಯೋ, ತಪ್ಪೋ? ನಿಮಗೆ ಬಿಟ್ಟದ್ದು.
-ಶಿವರಾಮ್ ಭಟ್ ಮಣಿಪಾಲ
Key Words: Natural Farming, ನೈಸರ್ಗಿಕ ಕೃಷಿ, ಸಹಜ ಕೃಷಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ