ನಾಡೋಜ ಡಾ| ಕಯ್ಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿಯ ಡಾ| ಎಚ್.ಎನ್. ಉದಯಶಂಕರ್ ಪಿ., ಕನ್ನಡ ಪಯಸ್ವಿನಿ ಸಂಗೀತ ರತ್ನ ಅಚೀವ್ಮೆಂಟ್ ಅವಾರ್ಡ್ ಗೆ ವಿದುಷಿ ಉಮಾಶಂಕರಿ ಟಿ.ಕೆ. ಆಯ್ಕೆ
ಕಾಸರಗೋಡು, ಜು. 24: ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನದ ಆಶ್ರಯದಲ್ಲಿಕೇರಳ ರಾಜ್ಯ ಕಾಸರಗೋಡಿನ ಕನ್ನಡ ಭವನ ರಜತ ಸಂಭ್ರಮ ಸಮಾರೋಪ ಪ್ರಯುಕ್ತ ಡಾ| ಸಿದ್ರಾಮ ನೀಲಜಗಿ ಸಾರಥ್ಯದ ಶ್ರೀ ಲಕ್ಕಮ್ಮೇವಿ ಕಲಾ ಪೋಷಕ ಸಂಘ (ರಿ) ಸಹಯೋಗದಲ್ಲಿ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ–2026’ ಕಾರ್ಯಕ್ರಮವು ಜು. 26ರಂದು ಕಾಸರಗೋಡು ಜಿಲ್ಲೆಯ ಕನ್ನಡ ಭವನದಲ್ಲಿ ನಡೆಯಲಿದೆ. ಈ ವೇಳೆ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಈ ವೇಳೆ ಪ್ರದಾನಗೈಯಲಿರುವ ನಾಡೋಜ ಡಾ| ಕಯ್ಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಮಣಿಪಾಲ ಮಾಹೆ ವಿವಿ ನಿವೃತ್ತ ಪ್ರಾಧ್ಯಾಪಕ ಡಾ| ಎಚ್.ಎನ್. ಉದಯಶಂಕರ್ ಪಿ. ಹಾಗೂ ಕನ್ನಡ ಪಯಸ್ವಿನಿ ಸಂಗೀತ ರತ್ನ ಅಚೀವ್ಮೆಂಟ್ ಅವಾರ್ಡ್ ಗೆ ಸಂಗೀತ ಶಿಕ್ಷಕಿ ವಿದುಷಿ ಉಮಾಶಂಕರಿ ಟಿ.ಕೆ. ಆಯ್ಕೆಯಾಗಿದ್ದಾರೆ.
ಮಾಹಿತಿಗಾಗಿ :
ಡಾ| ವಾಮನ್ ರಾವ್ ಬೇಕಲ್ ಅವರನ್ನು ಸಂಪರ್ಕಿಸಬಹುದು
(ಮೊ.: 9037173400)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

