ಸವಾಲುಗಳನ್ನು ಗೆದ್ದು ಬೀಗಿದ ಇಸ್ರೋ

Upayuktha
0


ಗತ್ತು ಭಾರತದ ಬಾಹ್ಯಾಕಾಶ ಸಂಸ್ಥೆ ಆದ ಇಸ್ರೋವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಭಾರತೀಯರಿಗಿಂತ ಜಗತ್ತಿನ ಜನರಿಗೆ ಬಹುದೊಡ್ಡ ಭರವಸೆಯ ಶಕ್ತಿಯಾಗಿ ಅನಾವರಣಗೊಳ್ಳುತ್ತಿದೆ. ಇಂದು ನಾವು ಇಸ್ರೋದ ಉತ್ತುಂಗದ ಸಿಖರವನ್ನು ನೋಡುತ್ತಿದ್ದೇವೆ, ಆದರೆ ಒಂದು ಕಾಲದಲ್ಲಿ ಇದರ ಮೇಲೆ ಕಷ್ಟಗಳ ಸವಾಲುಗಳು ಹಾಸಿ ಮಲಗಿದ್ದವು. ಬಡದೇಶದ ಹಾವಾಡಿಗರಿಂದ ಏನು ಸಾಧಿಸಲು ಸಾಧ್ಯ ಎಂದು ಅನೇಕರು ಆಡಿಕೊಂಡಿದ್ದರು, ಅಪಹಾಸ್ಯದ ಮಾತುಗಳಿಂದ ಪ್ರತಿ ಹಂತದಲ್ಲೂ ಅವಮಾನಗಳನ್ನೇ ಅನುಭವಿಸಿ ಕೆಲವು ಬಾರಿ ಧೃತಿಗೆಟ್ಟರೂ ಕಾಯಕವೇ ಕೈಲಾಸ ಎನ್ನುವ ಹಾದಿಯಲ್ಲಿ ನಿರಂತರ ಪರಿಶ್ರಮದಿಂದ ವಿಜ್ಞಾನಿಗಳು ಪ್ರಯೋಗಗಳಿಂದಲೇ  ಕಲಿಯುತ್ತಾ ಬಂದರು.


ಸತೀಶ್ ಧವನ್, ವಿಕ್ರಂ ಸಾರಾಭಾಯಿ ಅಂತ ಮಹಾನ್ ಮೇಧಾವಿ ವಿಜ್ಞಾನಿಗಳನ್ನು ಹೊಂದಿದ್ದರೂ  ಬಡತನ, ಅನಕ್ಷರತೆ  ವಿಜ್ಞಾನಿಗಳಿಗಿರುವಷ್ಟು ಬೆಳೆಯುವ ಛಲ ರಾಜಕಾರಣಿಗಳಿಗೆ ಇಲ್ಲದಿರುವುದರಿಂದ ಸಾಧಿಸುವ ತಾಕತ್ತನ್ನು ಹೊಂದಿರುವ ವಿಜ್ಞಾನಿಗಳ ಕೈ ಕೆಲವು ಕಾಲ ಕಟ್ಟಿದ್ದರು ಸಹ ಆ ಎಲ್ಲ ಏಳು ಬೀಳುಗಳನ್ನು ದಾಟುತ್ತಾ ಬಂದಿತ್ತು ಇಸ್ರೋ.


1962 ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ ರಚನೆಯಾಗಿ ಅದೇ ಮುಂದೆ 1969 ಆಗಸ್ಟ್ 15ರಂದು ಇಸ್ರೋ ಹೆಸರಿನಲ್ಲಿ ಜನ್ಮ ತಾಳಿತು. ಅವು ಕಷ್ಟದ ದಿನಗಳು ನಮ್ಮ ಬಳಿ ಯಾವ ಉಪಕರಣಗಳು ಇಲ್ಲದ ಕಾಲ ಕೆಲವು ಬಾರಿ ವಿಜ್ಞಾನಿಗಳು ಊಟಕ್ಕಾಗಿ ಭಿಕ್ಷೆ ಬೇಡಿ ತಿಂದು ಹಸಿದ ಹೊಟ್ಟೆಯಲ್ಲಿ ತಮ್ಮ ಕೆಲಸ ಮಾಡಬೇಕಿತ್ತು. ಸರಕಾರ ಭರವಸೆಗಳನ್ನು ನೀಡಿದಷ್ಟು ಅಶಕ್ತವಾದ ಸಮಯದಲ್ಲಿ ನಮ್ಮ ಹೆಮ್ಮೆಯ ವಿಜ್ಞಾನಿಗಳು ಇಸ್ರೋವನ್ನು ಕಟ್ಟುತ್ತಲೇ ಹೋದರು. ತಾಯಿ ಭಾರತೀಯ ಸೇವೆಯನ್ನ ವಿಜ್ಞಾನದ ಕಾಯಕದಲ್ಲಿ ಕಾಣುತ್ತಾ ಬಂದರು. 1975ರಲ್ಲಿ ಕಾಡಿಬೇಡಿ ರಷ್ಯಾದ ಸಹಾಯವನ್ನು ಪಡೆದು ಆರ್ಯ ಭಟ್ ಎಂಬ ಉಪಗ್ರಹವನ್ನು ಗಗನಕ್ಕೆ ಹಾರಿಬಿಟ್ಟರು. ಅದು ವಿಫಲವಾದರೂ ಅದರಿಂದ ಅನೇಕ ಸಂಗತಿಗಳನ್ನು ಕಲಿತು ಕಿಂಚಿತ್ತು ಕುಗ್ಗದೆ ಕಷ್ಟಗಳನ್ನು ಜೊತೆಯಲ್ಲೇ ಕರೆದುಕೊಂಡು ಸಾಗಿದ ಇಸ್ರೋ. ಅಂದು ನಮ್ಮನ್ನು  ಆಡಿಕೊಂಡವರು ನಾವು ಸಹಾಯ ಎಂದು ಕೇಳಿಕೊಂಡು ಹೋದಾಗ ನಮ್ಮನ್ನ ಜಾಡಿಸಿ ಒದ್ದರು. ಇಂದು ಅವರೇ ನಮ್ಮ ಇಸ್ರೋದ ಸಹಾಯವನ್ನು ಬೇಡಿಕೊಂಡು ಸರತಿ  ಸಾಲಿನಲ್ಲಿ ನಿಂತಿದ್ದಾರೆ.


ಭಾರತೀಯರ ಹುಟ್ಟುಗುಣವೇ ಅವಮಾನಗಳನ್ನು ಮೆಟ್ಟಿನಿಂತು ಸಾಧಿಸುವುದಲ್ಲವೇ. ನಮಗೆ ನಿಂದನೆ ಅವಮಾನಗಳ ಆದಾಗಲೇ ನಾವು ಸಾಧಿಸುವ ಛಲ ತೊಡುತ್ತೇವೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ ನಾವು ಏನನ್ನು ಸಾಧಿಸದೆ ಸುಮ್ಮನಿದ್ದು ಬಿಡುತ್ತೇವೆ. ಒಂದು ವೇಳೆ ನಮ್ಮನ್ನು ಅವಹೇಳನ ಮಾಡಿದರೆ ಸಾಧಿಸದೆ ಬಿಡಲಾರೆವು. ಕಷ್ಟಗಳು ಭಾರತೀಯರಿಗೆ ಹೆಚ್ಚು ಏಕೆಂದರೆ ಸಾಧಿಸುವ ತಾಕತ್ತು ನಮ್ಮಲ್ಲಿ ಅಧಿಕ ಅದಕ್ಕಾಗಿ ಕಷ್ಟಗಳು ನಮ್ಮನ್ನೇ ಹುಡುಕಿಕೊಂಡು ಬರುತ್ತವೆ. ಇಸ್ರೋ ಆ ಕಷ್ಟಗಳನ್ನ ಮೆಟ್ಟಿ ನಿಂತು ನಮಗೂ ಸ್ಪೂರ್ತಿಯಾಗಿದೆ. ನಾವುಗಳು ಎಲ್ಲವನ್ನ ಬಿಡಲು ಸಿದ್ದ ಆದರೆ ಆಡಿಕೊಂಡವರ ಮುಂದೆ ತೊಡೆತಟ್ಟಿ ನಿಂತೇ ನಿಲ್ಲುತ್ತೇವೆ.


ಇಸ್ರೋದ ವಿಜ್ಞಾನಿಗಳು ಕಷ್ಟಗಳನ್ನ ಬೆನ್ನಿಗೆ ಕಟ್ಟಿಕೊಂಡು ನಿರಂತರವಾಗಿ ಸಾಧಿಸುತ್ತಲೇ  ಇಂದು ಚಂದ್ರನ ಮೇಲೆ ತಿರಂಗ ನೆಟ್ಟಿದ್ದಾರೆ. "ಗುರಿ ಮುಂದಿದ್ದರೆ ಎಲ್ಲವನ್ನು ಮರೆಯುತ್ತೇವೆ" ಎಂಬಂತೆ ಚಂದ್ರನನ್ನು ಮುಟ್ಟಲು ನಿದ್ದೆ ಹಸಿವುಗಳನ್ನೆಲ್ಲ ಮರೆತು ಕೆಲಸ ಮಾಡಿದ ಪರಿಣಾಮ 140 ಕೋಟಿ ಜನ ಹೆಮ್ಮೆಯಿಂದ ಎದೆ ಉಬ್ಬಿಸಿ ನಿಲ್ಲುವಂತೆ ಮಾಡಿರುವ ಆ ಎಲ್ಲ ಅಪರೂಪದ ಜೀವಿಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ನಮ್ಮ ವಿಜ್ಞಾನಿಗಳ ಶಕ್ತಿ ಇಂದು ಅನಾವರಣಗೊಂಡದ್ದಲ್ಲ ಅನೇಕ ದಶಕಗಳ ಹಿಂದೆಯೇ ಅವರು ಹೆಜ್ಜೆ ಗುರುತುಗಳನ್ನು ಮೂಡಿಸಲು ಪ್ರಾರಂಭಿಸಿದರು. 2008ರಲ್ಲಿ ಚಂದ್ರಯಾನ-1,  2014ರಲ್ಲಿ ಮಂಗಳಯಾನ, 2019 ರಲ್ಲಿ ಚಂದ್ರಯಾನ 2 ಹಾಗೂ 104 ಉಪಗ್ರಹಗಳನ್ನು ಗಗನಕ್ಕೆ ಹಾರಿಸಿದ ಇಸ್ರೋದ ಸಾಧನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಆ ಸಾಧನೆಗಳದ್ದೇ ಪುಟಗಳು ತುಂಬುತ್ತಾ ಹೋಗುತ್ತವೆ. ಅದರದ್ದೇ ಒಂದು ಪುಸ್ತಕ ರಚನೆ ಮಾಡಬಹುದು, ಹೇಳತೀರದಷ್ಟು ಇಸ್ರೋ ವಿಜ್ಞಾನಿಗಳ ಸಾಧನೆ.


2019 ರಲ್ಲಿ ಚಂದ್ರಯಾನ 2 ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಪ್ರಜ್ಞಾನ್ ರೋವರ್ ಇಳಿಸುವ ಪ್ರಯತ್ನ ಮಾಡಿದಾಗ 2.1 ಕಿಲೋಮೀಟರ್ ಇರುವಾಗ ಅದು ನಿಯಂತ್ರಣ ಕಳೆದುಕೊಂಡಿದ್ದರೂ ಹೊಸ ಭರವಸೆಯ ಕಿರಣಗಳನ್ನ ಬೀರಿತ್ತು. ಅಂದು ಇಸ್ರೋದ ಅಧ್ಯಕ್ಷರ ಕಣ್ಣೀರು ನೋಡಿ ಇಡೀ ಭಾರತೀಯರ ಹೃದಯ ಭಾರಮಾಡಿಕೊಂಡು ಕಣ್ಣೀರು ಇಟ್ಟಿದ್ದರು. ಅಂದಿನಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ನಮ್ಮ ವಿಜ್ಞಾನಿಗಳು ಮಾಡಿದ ತಪಸ್ಸಿನ ಕಾರ್ಯದ ಫಲದಿಂದ ಇಂದು ಹೆಮ್ಮೆಯ ಜಯಘೋಷಗಳನ್ನು ಮೊಳಗಿಸುತ್ತಿದ್ದೇವೆ. ಚಂದ್ರಯಾನ 2 ವಿಫಲವಾದಾಗ ಬಡದೇಶ 800 ಕೋಟಿ ಖರ್ಚು ಮಾಡಿ ಇದೆಲ್ಲವೂ ಮಾಡಬೇಕಿತ್ತೇ ಎಂದು ಕೇಳುವವರು ಇಂದು 610 ಕೋಟಿಯಲ್ಲಿ ಸಾಧಿಸಿ ತೋರಿಸಿದ್ದನ್ನು ನೋಡಿ ಅವರ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಡುತ್ತಿದ್ದಾರೆ. ಅದೇನೇ ಆಗಲಿ ಬಿಡಿ ಸಾವಿರಾರು ಸಮಸ್ಯೆಗಳ ಮಧ್ಯೆ ಎದ್ದು ನಿಂತ ಇಸ್ರೋ ವಿಜ್ಞಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು. ಸಾಧನೆಯ ಸಾಗುತ್ತಿರಲಿ.


- ರಾಮಕೃಷ್ಣ ದೇವರು, ಮರೆಗುದ್ದಿ

ಷಣ್ಮುಖಾರೂಢ ಮಠ ವಿಜಯಪುರ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top