ಸುರತ್ಕಲ್: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್ಐಟಿಕೆ), ಸುರತ್ಕಲ್, ಜೂನ್ 21, 2026 ರಂದು 12ನೇ ಅಂತರಾಷ್ಟ್ರೀಯ ಯೋಗ ದಿನ (ಐಡಿವೈ)ವನ್ನು ಆಚರಿಸಿತು. ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಆಯುಷ್ ಸಚಿವಾಲಯ ಘೋಷಿಸಿದ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ರಾಷ್ಟ್ರೀಯ ಥೀಮ್ ಅಡಿಯಲ್ಲಿ ನಡೆಸಲಾಯಿತು.
ಬೆಳಿಗ್ಗೆ 6:30ಕ್ಕೆ ಡಿಜಿಟಲ್ ಲೈಬ್ರರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ ಮತ್ತು ಯೋಗ ಸತ್ರದ ನೇರ ಪ್ರಸಾರದಿಂದ ದಿನದ ಕಾರ್ಯಕ್ರಮ ಆರಂಭವಾಯಿತು. ಡೀನ್ಗಳು, ಅಧಿಕಾರಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು.
ಮುಖ್ಯ ಕಾರ್ಯಕ್ರಮವು ಬೆಳಿಗ್ಗೆ 8:30ಕ್ಕೆ ಹೊಸ ಕ್ರೀಡಾ ಸಂಕೀರ್ಣದ ಯೋಗ ಸಭಾಂಗಣದಲ್ಲಿ ನಡೆಯಿತು. ಸುಮಾರು 350 ಮಂದಿ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ವಸತಿ ನಿಲಯದ ನಿವಾಸಿಗಳು ಸಾಮಾನ್ಯ ಯೋಗ ಪ್ರೋಟೋಕಾಲ್ನ ಸಮೂಹ ಪ್ರದರ್ಶನದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿ ಕಲ್ಯಾಣ ಡೀನ್ ಪ್ರೊ. ಗೋವಿಂದ ರಾಜ ಮಂಡೇಲ ಸ್ವಾಗತಿಸಿ, ಮುಖ್ಯ ಅತಿಥಿ ಯೋಗಗುರು ಶ್ರೀ ರಾಘವೇಂದ್ರ ರಾವ್ ಅವರು ಸತ್ರವನ್ನು ನಡೆಸಿದರು. ಅವರು ಹಲವಾರು ಆಸನಗಳ ಜೊತೆಗೆ. ಕೆಲವು ಪ್ರಾಣಾಯಾಮ ತಂತ್ರಗಳನ್ನು ಪ್ರದರ್ಶನ ಮಾಡಿದರು. ಪ್ರತಿಯೊಂದು ಆಸನದ ಪ್ರಯೋಜನಗಳನ್ನು ವಿವರಿಸಿ, ಕುಳಿತ ಜೀವನಶೈಲಿಯಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಲು ಯೋಗದ ಪಾತ್ರವನ್ನು ವಿವರಿಸಿದರು. ಎರಡು ಗಂಟೆಗಳ ಸತ್ರವು ಶಾಂತಿ ಮಂತ್ರ ಪಠಣ ಮತ್ತು ಧ್ಯಾನದೊಂದಿಗೆ ಮುಕ್ತಾಯವಾಯಿತು.
ಐಡಿವೈ 2026ಕ್ಕೆ ಮುನ್ನ, ಎನ್ಐಟಿಕೆ ಜೂನ್ 8ರಿಂದ 21ರವರೆಗೆ ಪ್ರತಿದಿನ ಸಂಜೆ 5:30ರಿಂದ 7:00ರ ವರೆಗೆ ಯೋಗ ವಿಶೇಷ ಶಿಬಿರವನ್ನು ಆಯೋಜಿಸಿತು. ಈ ಶಿಬಿರವನ್ನು ಯೋಗಗುರು ಶ್ರೀ ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಜೂನ್ 19, 2026ರಂದು ಸಂಜೆ 4:30ರಿಂದ 5:30ರವರೆಗೆ ಹೊಸ ಕ್ರೀಡಾ ಸಂಕೀರ್ಣದ ಯೋಗ ಸಭಾಂಗಣದಲ್ಲಿ “30 ನಿಮಿಷಗಳಲ್ಲಿ 30 ಸೂರ್ಯ ನಮಸ್ಕಾರ” ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯ ಉದ್ದೇಶ ಯೋಗಾಭ್ಯಾಸಿಗಳಲ್ಲಿ ನಿಯಮಿತತೆ, ಸಹನಶೀಲತೆ ಮತ್ತು ಶಿಸ್ತನ್ನು ಉತ್ತೇಜಿಸುವುದು. ವಿಜೇತರನ್ನು ಮುಖ್ಯ ಅತಿಥಿಯವರಿಂದ ಐಡಿವೈ ಮುಖ್ಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


