ಡಾ. ರಮಾನಂದ ಬನಾರಿ ಸಾಕ್ಷ್ಯಚಿತ್ರ ಲೋಕಾರ್ಪಣೆ ಹಾಗೂ ಕೃತಿ ಬಿಡುಗಡೆ
ನೀರ್ಚಾಲು:
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಮತ್ತು
ಕ.ಸಾ.ಪ ಕೇರಳ
ಗಡಿನಾಡ ಘಟಕ, ಬನಾರಿ ಶ್ರೀ
ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಸೇರಿದಂತೆ
ವಿವಿಧ ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದೊಂದಿಗೆ ಮೇ 31ರಂದು ನೀರ್ಚಾಲು
ಮಹಾಜನ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಬೃಹತ್ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಹಿರಿಯ
ಸಾಹಿತಿ ಡಾ. ರಮಾನಂದ ಬನಾರಿ
ಅವರ 85ರ ಅಭಿನಂದನಾ ಪೂರ್ವಕ
'ಮಂಜೇಶ್ವರದ ಮುತ್ತು' ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಕೃತಿ ಲೋಕಾರ್ಪಣೆ
ಕಾರ್ಯಕ್ರಮಗಳು ಜರುಗಲಿವೆ.
ಗಣ್ಯರಿಂದ
ಉದ್ಘಾಟನೆ ಮತ್ತು ಕೃತಿ ಬಿಡುಗಡೆ:
ಅಂದು
ಬೆಳಗ್ಗೆ 9 ಗಂಟೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ
ಅವರು ಡಾ. ರಮಾನಂದ ಬನಾರಿ
ಅವರ ಕುರಿತಾದ 'ಮಂಜೇಶ್ವರದ ಮುತ್ತು' ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಕರ್ನಾಟಕ
ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್
ಅವರು ಕುಟ್ಟಿಯಾನ ಮುಹಮ್ಮದ್ ಅವರ 'ಕನಸುಗಳ ಭೂಮಿಗೆ
ಯಾತ್ರೆ' ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿ ಡಾ. ಮೋಹನ ಕುಂಟಾರು
ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು
ಅಭಿನಂದನಾ ಭಾಷಣ ಮಾಡಲಿದ್ದಾರೆ. ಆಕಾಶವಾಣಿಯ
ವಿಶ್ರಾಂತ ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ
ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರದ
ನಿರ್ದೇಶಕ ಡಾ. ಪ್ರವೀಣರಾಜ್ ಎಸ್.
ರಾವ್ ಅವರನ್ನು ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್, ಗಡಿ
ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ ಹಾಗೂ ಕ.ಸಾ.ಪ ಗಡಿನಾಡ ಘಟಕದ
ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ
ತೊಟ್ಟೆತ್ತೋಡಿ ಉಪಸ್ಥಿತರಿರಲಿದ್ದಾರೆ.
ವೈಚಾರಿಕ
ಗೋಷ್ಠಿಗಳು ಮತ್ತು ವಿಷಯ ಮಂಡನೆ:
ಉದ್ಘಾಟನಾ
ಸಮಾರಂಭದ ಬಳಿಕ ನಡೆಯುವ ಉಪನ್ಯಾಸ
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ
ಕಾಸರಗೋಡಿನ ಸಾಹಿತ್ಯದ ಸ್ಥೂಲ ಅವಲೋಕನ ನಡೆಸಿಕೊಟ್ಟರೆ, ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ
ಕಾಸರಗೋಡಿನ ಸಮಗ್ರ ಸಂಸ್ಕೃತಿಯ ಕುರಿತು ವಿಷಯ ಮಂಡಿಸಲಿದ್ದಾರೆ.
ಅಪರಾಹ್ನ
ನಡೆಯಲಿರುವ ಸರಣಿ ವಿಚಾರಗೋಷ್ಠಿಗಳಲ್ಲಿ ಗಡಿನಾಡಿನ ಜ್ವಲಂತ
ಸಮಸ್ಯೆಗಳು ಹಾಗೂ ಸಾಹಿತ್ಯದ ಕುರಿತು
ಮಂಥನ ನಡೆಯಲಿದೆ. ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಡಾ.
ಬನಾರಿಯವರ ಕಾವ್ಯ), ಡಾ. ಧನಂಜಯ ಕುಂಬ್ಳೆ
(ಬನಾರಿಯವರ ಗದ್ಯ ಮತ್ತು ಅರ್ಥಗಾರಿಕೆ),
ಟಿ.ಎ.ಎನ್ ಖಂಡಿಗೆ
(ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣ), ನ್ಯಾಯವಾದಿ ಎನ್.ಕೆ. ಮೋಹನದಾಸ್
(ನ್ಯಾಯಾಂಗದ ಮುಂದೆ ಕಾಸರಗೋಡಿನ ಸಮಸ್ಯೆ), ಡಾ. ಬಾಲಕೃಷ್ಣ ಹೊಸಂಗಡಿ
(ಕನ್ನಡ ಸಂಘಟನೆಗಳ ಪಾತ್ರ) ಮತ್ತು ಶಿವಶಂಕರ ಪಿ. (ಸಾಹಿತ್ಯ-ಸಂಸ್ಕೃತಿ
ಸಂವರ್ಧನೆಯಲ್ಲಿ ವಿದ್ಯಾರ್ಥಿಗಳ ಪಾತ್ರ) ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಸಮಾರೋಪ
ಮತ್ತು ಸಾಂಸ್ಕೃತಿಕ ಸಂಭ್ರಮ:
ಸಂಜೆ
ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ
ಅವರು 'ಕನ್ನಡಿಯಲ್ಲಿ ಕನ್ನಡಿಗ' ಕೃತಿ ಸರಣಿಯ 7ನೇ
ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಕ.ಸಾ.ಪ
ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಯಾಗಿದ್ದು, ಸಾಹಿತಿ ಡಾ. ಪ್ರಮೀಳಾ ಮಾಧವ್
ಕೃತಿ ಪರಿಚಯ ಮಾಡಲಿದ್ದಾರೆ. ವೇದಿಕೆಯಲ್ಲಿ ಗಡಿನಾಡಿನ ಪ್ರಮುಖ ಮುಖಂಡರು ಹಾಗೂ ಸಂಘಟನೆಗಳ ಪದಾಧಿಕಾರಿಗಳು
ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ
ಅಂಗವಾಗಿ ಸಾಂಸ್ಕೃತಿಕ ವೈವಿಧ್ಯಗಳು ಜರುಗಲಿದ್ದು, ಯೋಗ ಪ್ರದರ್ಶನ, ನಾಟ್ಯ
ತರಂಗಿಣಿ ಸಂಸ್ಥೆಯಿಂದ ಮೋಹಿನಿಯಾಟ್ಟಂ, ವಿದುಷಿ ಅನುಪಮಾ ರಾಘವೇಂದ್ರ ಅವರಿಂದ ನೃತ್ಯ ಹಾಗೂ ಗುರುರಾಜ್ ಕಾಸರಗೋಡು
ನೇತೃತ್ವದ ಕಲಾ ವೇದಿಕೆಯಿಂದ 'ಸಾಂಸ್ಕೃತಿಕ
ಕಲಾ ವೈಭವ' ಪ್ರದರ್ಶನಗೊಳ್ಳಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


