ಸ್ಯಾನ್
ಹೋಸೆ (ಕ್ಯಾಲಿಫೋರ್ನಿಯಾ): ಮಹಾನ್ ದಾರ್ಶನಿಕ, ಪ್ರವಚನಕಾರ ಪದ್ಮಶ್ರೀ ಪುರಸ್ಕೃತ ದಿವಂಗತ ಶ್ರೀ ಬನ್ನಂಜೆ ಗೋವಿಂದಾಚಾರ್ಯ
ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ‘ಶ್ರೀ ಬನ್ನಂಜೆ 90 ವಿಶ್ವ
ನಮನ’ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು
ಇಲ್ಲಿನ ಶ್ರೀ ಪುತ್ತಿಗೆ ಮಠದಲ್ಲಿ
ಅತ್ಯಂತ ವೈಭವದಿಂದ ಜರುಗಿದವು. ಪರಮ ಪೂಜ್ಯ ಪುತ್ತಿಗೆ
ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ
ತೀರ್ಥ ಶ್ರೀಪಾದರ ಪರಮಾನುಗ್ರಹದೊಂದಿಗೆ, ಶ್ರೀ ಬನ್ನಂಜೆ ಪ್ರತಿಷ್ಠಾನ
ಹಾಗೂ ಅಮೆರಿಕಾದ ಶ್ರೀ ಪುತ್ತಿಗೆ ಮಠದ
ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭವು ಶ್ರೀಹರಿವಾಯುಗುರುಗಳ
ಭವ್ಯ ರಥೋತ್ಸವದೊಂದಿಗೆ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಭಾವಚಿತ್ರ
ಮೆರವಣಿಗೆ ಹಾಗೂ ಉದ್ಘಾಟನೆ
ಮೊದಲ
ದಿನ ಹರಿ ವಾಯು ಗುರುಗಳ
ಮತ್ತು ಶ್ರೀ ಬನ್ನಂಜೆ ಆಚಾರ್ಯರ
ಭಾವಚಿತ್ರಗಳ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ
ಚಾಲನೆ ನೀಡಲಾಯಿತು. ಖ್ಯಾತ ಶಿಕ್ಷಣ ತಜ್ಞ, ಚಿಂತಕ ಡಾ. ಗುರುರಾಜ ಕರ್ಜಗಿ
ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು
ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,
"ಬನ್ನಂಜೆ ಆಚಾರ್ಯರ ಸಾಹಿತ್ಯ ಶೈಲಿ, ಅವರ ಅಗಾಧ ಪಾಂಡಿತ್ಯ
ಮತ್ತು ಕೃತಿಗಳ ಸರಳತೆ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ," ಎಂದು ಸ್ಮರಿಸಿದರು.
ಗುರುಸ್ಮರಣೆ
ಮತ್ತು ಅನುಭವ ಹಂಚಿಕೆ
ಶ್ರೀ
ಬನ್ನಂಜೆ ಆಚಾರ್ಯರ ಶಿಷ್ಯರಾದ ವಿದ್ವಾನ್ ಶ್ರೀ ಗೋಪಿನಾಥ ಗಲಗಲಿ,
ಶ್ರೀ ಪೂರ್ಣಪ್ರಸಾದ್, ಶ್ರೀ ಬಾಲಚಂದ್ರ ಕೃಷ್ಣ,
ಶ್ರೀ ಪ್ರಭು ಮೂರ್ತಿ, ಶ್ರೀ ಪ್ರಸನ್ನ ಕೃಷ್ಣ,
ಶ್ರೀ ಹರೀಶ ವಾಸುದೇವ, ಶ್ರೀ
ಆನಂದ ದೇಶಪಾಂಡೆ, ಶ್ರೀ ಜಗನ್ನಾಥ್, ಶ್ರೀ
ಎಮ್.ಎಸ್. ಸತ್ಯನಾರಾಯಣ ಸೇರಿದಂತೆ
ಹಲವು ಗಣ್ಯರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ಮಾತನಾಡಿದರು. ಆಚಾರ್ಯರು ಈ ಹಿಂದೆ ಅಮೆರಿಕಾಕ್ಕೆ
ಭೇಟಿ ನೀಡಿದ್ದಾಗ ನಡೆಸಿಕೊಟ್ಟ ಪ್ರವಚನಗಳು, ಅವರ ಆದರ್ಶ ವ್ಯಕ್ತಿತ್ವ
ಹಾಗೂ ಅವರ ಒಡನಾಟದಲ್ಲಿ ತಮಗಾದ
ಅಪೂರ್ವ ಅನುಭವಗಳನ್ನು ಶಿಷ್ಯರು ಮತ್ತು ಅಭಿಮಾನಿಗಳು ಭಾವುಕರಾಗಿ ಹಂಚಿಕೊಂಡರು.
ಸಾಂಸ್ಕೃತಿಕ
ಮತ್ತು ಸಾಹಿತ್ಯಿಕ ವೈವಿಧ್ಯತೆ
ಕಾರ್ಯಕ್ರಮದ
ಪ್ರಮುಖ ಆಕರ್ಷಣೆಯಾಗಿ ದಾಸರ ಪದಗಳ ಗಾನನೃತ್ಯ
ಸಮ್ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಮೂಡಿಬಂದವು. ಶ್ರೀಮತಿ ದಿವ್ಯಾ ರಮೇಶ್ ಮತ್ತು ಅವರ ವಿದ್ಯಾರ್ಥಿ ವೃಂದದವರು
ಬನ್ನಂಜೆಯವರ ಕೃತಿಗಳನ್ನು ಅತ್ಯಂತ ಸುಶ್ರಾವ್ಯವಾಗಿ ಗಾಯನ ಮಾಡಿದರು. ಶ್ರೀ
ಪ್ರಭು ನಂದನ್ ಮೂರ್ತಿ ಅವರು ಸಂಸ್ಕೃತದಲ್ಲಿ ಸ್ವಯಂ
ರಚಿಸಿದ ಸುಂದರ ಪದ್ಯಗಳನ್ನು ಪುಟಾಣಿ ಮಕ್ಕಳ ಮೂಲಕ ಹಾಡಿಸಿ ಶ್ರೀಹರಿಗೆ
ಸಮರ್ಪಿಸಿದರು. ಶ್ರೀಮತಿ ಕವಿತಾ ಉಡುಪ ಅವರಿಂದ ಕವಿತಾ
ವಾಚನ ಹಾಗೂ ವಿಶೇಷ ಪ್ರಶ್ನೋತ್ತರ
ಗೋಷ್ಠಿ ಕಾರ್ಯಕ್ರಮದ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿದವು.
ಸಭೆಯಲ್ಲಿ
ಶ್ರೀಮತಿ ಆಶಾ, ಶ್ರೀ ಶ್ರೀಧರ
ಗೋಪಾಲ ಸೇರಿದಂತೆ ಅನಿವಾಸಿ ಭಾರತೀಯ ಸಮುದಾಯದ ನೂರಾರು ಹಿರಿಯ ಗಣ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ಶ್ರೀ
ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ
ಶ್ರೀ ಪ್ರಸನ್ನಾಚಾರ್ಯ ಸ್ವಾಗತಿಸಿದರು. ಡಾ. ವೀಣಾ ಬನ್ನಂಜೆ
ಧನ್ಯವಾದ ಸಮರ್ಪಣೆ ಮಾಡಿದರು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು
ಶ್ರೀಮತಿ ಸರಸ್ವತಿ ವಟ್ಟಂ, ಶ್ರೀ ಮುರಳಿ ಬಾಟಿ
ಮತ್ತು ಶ್ರೀ ಸತೀಶ ಜಮಖಂಡಿ
ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಸ್ಯಾನ್
ಹೋಸೆ ಶ್ರೀಕೃಷ್ಣವೃಂದಾವನದ ಪ್ರಧಾನ ಅರ್ಚಕರಾದ ಶ್ರೀ ಶಂಕರ ನಾರಾಯಣ
ಭಟ್ಟರ ದಿವ್ಯ ನೇತೃತ್ವದಲ್ಲಿ, ಎಲ್ಲ ಭಕ್ತರ ಸಕ್ರಿಯ
ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ದಾಸರ ಪದಗಳ ಜುಗಲ್ಬಂದಿ ಹಾಗೂ ಮಹಾ
ಪೂಜೆಯು ಶ್ರೀ ವೆಂಕಟಕೃಷ್ಣನಿಗೆ ಸಮರ್ಪಿತವಾಗುವುದರೊಂದಿಗೆ
‘ಬನ್ನಂಜೆ ವಿಶ್ವ ನಮನ’ ಕಾರ್ಯಕ್ರಮವು ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


