ಬಳ್ಳಾರಿ:
ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್
ಕಚೇರಿಯಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು
ಡಿ.ಕೆ. ಶಿವಕುಮಾರ್ ಅವರ
65ನೇ ಹುಟ್ಟುಹಬ್ಬ ಅಂಗವಾಗಿ ದಿನಾಂಕ 15.05.2026 ಶುಕ್ರವಾರ ರಂದು ಬಳ್ಳಾರಿ ಗ್ರಾಮ
ದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ
ವಿಶೇಷ ಪೂಜೆ ಮಾಡಿಸಿ ಭಕ್ತರಿಗೆ
ಹಾಗೂ ಬಡವರಿಗೆ ಅನ್ನಪ್ರಸಾದ ವಿತರಣೆ ಮಾಡುವುದು ಹಾಗೂ ಇತರೆ ಸಾಮಾಜಿಕ
ಸೇವೆ ಮಾಡುವುದರ ಬಗ್ಗೆ ಪೂರ್ವಭಾವಿ ಸಭೆಯನ್ನು ಡಿಸಿಸಿ ಅಧ್ಯಕ್ಷರು ಅಲ್ಲಂ ಪ್ರಶಾಂತ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ
ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯುಲು
ಅವರು ಸಹಮತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ
ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರು ಗಾದೆಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹುಮಾಯೂನ್ ಖಾನ್, ಡಿಸಿಸಿ ಕಾರ್ಯಾಧ್ಯಕ್ಷರು ಬೋಯಪಾಟಿ ವಿಷ್ಣುವರ್ಧನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಮಂಜುಳಾ, ಡಿಸಿಸಿ ಉಪಾಧ್ಯಕ್ಷರು ಕೆ. ಶ್ರೀನಿವಾಸಲು, ಎಸ್.ಸಿ. ಸೆಲ್ ಅಧ್ಯಕ್ಷರು
ಎರುಕುಲಸ್ವಾಮಿ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರು ಕಣೇಕಲ್ ಮಾಬುಸಾಬ್, ಸಾಮಾಜಿಕ ಜಾಲತಾಣ ಅಧ್ಯಕ್ಷರು ಅಫಾಕ್ ಅಹಮದ್, ಯೂತ್ ಕಾಂಗ್ರೆಸ್ ಅಧ್ಯಕ್ಷರು
ಶ್ರೀಕಾಂತ್, ಸೇವಾದಳ ಅಧ್ಯಕ್ಷರು ಅತಾವುಲ್ಲಾ, ಗ್ರಾಜುಯೇಟ್ ಸೆಲ್ ಅಧ್ಯಕ್ಷರು ಜೋಗಿನ
ಚಂದ್ರಪ್ಪ ಹಾಗೂ ಮುಂತಾದ ನಾಯಕರು
ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


