ಮಂಗಳೂರು: ಕರ್ನಾಟಕ
ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸುವಲ್ಲಿ ಗಮನಾರ್ಹ ಸಮರ್ಪಣೆ ಮತ್ತು ಶಿಸ್ತು ಪ್ರದರ್ಶಿಸಿದ
ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಜೂನಿಯರ್ ಮತ್ತು ಸೀನಿಯರ್ ವಿಂಗ್ನ ಎನ್ಸಿಸಿ ಕೆಡೆಟ್ಗಳ
ಅನುಕರಣೀಯ ಪ್ರಯತ್ನಗಳನ್ನು ಗೌರವಿಸಲು ಏಪ್ರಿಲ್ 18, 2026 ರಂದು ಸಂತ ಅಲೋಶಿಯಸ್ ವಿವಿಯ ಎಲ್ಸಿಆರ್ಐ
ಸಭಾಂಗಣದಲ್ಲಿ ಸನ್ಮಾನ ಸಮಾರಂಭವನ್ನು ನಡೆಸಲಾಯಿತು. ಈ ಕೆಡೆಟ್ಗಳು ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ
ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ನಾಯಕತ್ವ ಕೌಶಲ್ಯಗಳನ್ನು ಪ್ರದರ್ಶಿಸಿದ್ದರು.
ಎನ್ಸಿಸಿ
ಮಂಗಳೂರು ಗ್ರೂಪ್ ಆಯೋಜಿಸಿದ್ದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮತ್ತು ಗೋವಾದ ಎನ್ಸಿಸಿ
ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮೋಡೋರ್ ಎಸ್ಬಿ ಅರುಣ್ಕುಮಾರ್, ವಿಎಸ್ಎಂ ಮತ್ತು ಸಂತ
ಅಲೋಶಿಯಸ್ ವಿವಿಯ ಸಹಕುಲಪತಿಗಳಾದ್ದ ರೆ. ಡಾ. ಮೆಲ್ವಿನ್ ಡಿ'ಕುನ್ಹಾ ಎಸ್ಜೆ ಸೇರಿದಂತೆ ಗೌರವಾನ್ವಿತ
ಗಣ್ಯರು ಉಪಸ್ಥಿತರಿದ್ದರು.



