ಕಾಸರಗೋಡು: ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ 178ನೇ ಕಾರ್ಯಕ್ರಮವು ಆಲಂಕೋಡು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಜರಗಿತು. ಈ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀ ಯವರು ಸಾಹಿತ್ಯ ಸಾದರಪಡಿಸಿದರು.
ಗಾನಾಮೃತ ಕಾರ್ಯಕ್ರಮವನ್ನು ಕನ್ನಡ ಕೋಗಿಲೆಗಳಾದ ದಿವಾಕರ ಕಾಸರಗೋಡು, ವಿಶ್ವನಾಥ್ ಪುತ್ತಿಗೆ, ಮುರಳಿ ನಿರ್ಚಾಲು, ಅಮೃತ್ ಸೀತಾರಾಮ್ ಮನೋಜ್ ಇವರುಗಳು ಶ್ರೇಷ್ಠಗಾಯನದ ಮೂಲಕ ಪ್ರಸ್ತುತ ಪಡಿಸಿದರು.
ಶ್ರೀ ದೇವಳದ ವತಿಯಿಂದ ಸಂಸ್ಥೆಯ ಸ್ಥಾಪಕಿ ಡಾ. ವಾಣಿಶ್ರೀಯವರನ್ನು ಶ್ರೀ ದೇವರ ಪ್ರಸಾದ ನೀಡಿ ಹರಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಕಲಾಮಣಿಗಳಿಗೆ ಸಂಸ್ಥೆಯ ವತಿಯಿಂದ ಗೌರವಧನ ಮತ್ತು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ರವಿ, ವಿಜಯರಾಜ ಕಾರ್ಯದರ್ಶಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.


