ಜ್ಞಾನ ವಿಕಾಸ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ: ಶ್ರದ್ದಾ ಅಮಿತ್

Upayuktha
0


ಮೂಡಬಿದಿರೆ: ಗ್ರಾಮೀಣ ಪ್ರದೇಶದ ಮಹಿಳೆಯರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಬಲೀಕರಣ ಮಾಡುವ ಮೂಲಕ ಜ್ನಾನ ವಿಕಾಸ ಕಾರ್ಯಕ್ರಮ ಮಹತ್ತರ ಪಾತ್ರವನ್ನು ವಹಿಸಿದೆ ಎಂದು ಬೆಂಗಳೂರು ಕ್ಷೇಮವನ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ರವರು  ಹೇಳಿದರು.


ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಬಡಕೋಡಿಯಲ್ಲಿ ನಡೆದ ಜ್ಞಾನವಿಕಾಸ ಸದಸ್ಯರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಪ್ರಮುಖ ಪಾತ್ರವನ್ನು ವಹಿಸಿದೆ . ಈ ಕಾರ್ಯಕ್ರಮದಿಂದಾಗಿ ಮಹಿಳೆಯು ನಾಲ್ಕು ಗೋಡೆಗಳಿಂದ ಹೊರಗಡೆ ಬಂದು ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆಯುವಂತಾಗಿದೆ. ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಂಡು ಆರ್ಥಿಕ ನೆರವಿನ ಸದ್ಬಳಕೆಯನ್ನು  ವಿವೇಚನಯುತವಾಗಿ ಬಳಸಿಕೊಂಡು ಕುಟುಂಬದ ಅಭಿವೃದ್ದಿಯನ್ನು ಇಂದು ಕಾಣುವಂತಾಗಿದೆ ಎಂದು ತಿಳಿಸಿದರು. 


ಕಾರ್ಯಕಮದಲ್ಲಿ ಪ್ರಬುದ್ದ ಕೇಂದ್ರ ಸದಸ್ಯರಾದ ರಾಜೀವಿರವರು ಮತ್ತು ವಸಂತಿರವರು ಕೇಂದ್ರಕ್ಕೆ ಸೇರಿಕೊಂಡ ನಂತರ ಮನೆಯಲ್ಲಿ  ಆದ ಪರಿವರ್ತನೆಯ ಬಗ್ಗೆ ಅನಿಸಿಕೆಯನ್ನ ವ್ಯಕಪಡಿಸಿದರು. ಕಾರ್ಯಕಮದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟಿಗಳಾದ ಸಂಪತ್‌  ಸಾಮ್ರಾಜ್ಯ ರವರು , ಪ್ರಾದೇಶಿಕ ನಿರ್ದೇಶಕರರಾದ ಆನಂದ ಸುವರ್ಣ, ಗ್ರಾಮ ಪಂಚಾಯತ್ ಅಧ್ಯಕ್ಷರು ಉದಯ್‌, ಜನಜಾಗೃತಿ ವೇದಿಕೆಯ ಲಕ್ಷ್ಮಣ ಸುವರ್ಣ, ಮಹಾವೀರ ಹೆಗ್ಡೆ , ಮುನಿರಾಜ್‌ ಹೆಗ್ಡೆ ಗಣ್ಯರಾದ ಜಯಂತ ಹೆಗ್ಡೆ, ವೇದ ಕುಮಾರ್‌ ಜೈನ್‌, ವಿಶ್ವನಾಥ ಕೋಟ್ಯಾನ್‌, ನಿರ್ದೇಶಕರು ದಿನೇಶ್‌  ಯೋಜನಾಧಿಕಾರಿ ಧನಂಜಯ್‌, ಜ್ಞಾನವಿಕಾಸ ಸಮಾನ್ವಯಾಧಿಕಾರಿ ವಿದ್ಯಾ, ಶಿರ್ತಾಡಿ ವಲಯದ ಮೇಲ್ವಿಚಾರಕಿ ಪುಷ್ಪ, ಒಕ್ಕೂಟದ ಅದ್ಯಕ್ಷರು ಶೇಖರ್‌ ಪೂಜಾರಿ , ರವಿ ಎನ್. ಶೋಭಾ, ಸುಕೇಶ್  ಹಾಗೂ ಜ್ಞಾನವಿಕಾಸದ ಸರ್ವ ಸದಸ್ಯರು ಉಪಸ್ಥಿತರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top