ಪರ್ಕಳ: ಪರೀಕ ಶ್ರೀ ಮಾಲಿಂಗೇಶ್ವರ ದೇವಸ್ಥಾನದಲ್ಲಿ ಅ. 15 ರಂದು ನಡೆದ ಶ್ರೀ ಶತಚಂಡಿಕಯಾಗದ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷರು, ಚಿಂತಕರು ಪ್ರವಚನಕಾರರು ಆದ ನಟರಾಜ್ ಪರ್ಕಳ ವಿರಚಿತ "ಧರ್ಮಜ್ಞಾನ" ಹಾಗೂ ಕೃಷ್ಣ ಪ್ರಿಯಾ ಮುಂಬೈ ಇವರು ರಚಿಸಿದ "ಸೇವೆಗಳ ಮಾರ್ಗದಲ್ಲಿ" ಎಂಬ ಎರಡು ಪುಸ್ತಕಗಳನ್ನು ಶ್ರೀಮತಿ ಲೀಲಾ ಮತ್ತು ಡಾ. ಗೋಪಾಲಕೃಷ್ಣರಾವ್ ಪರೀಕ ಇವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಾಲಚಂದ್ರ ರಾವ್ ಉಡುಪಿ, ಕರುಣಾಕರ ಬೆಳ್ಳೆ, ಪರೀಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಉದಯ ಹೆಗ್ಡೆ, ನಟರಾಜ್ ಪರ್ಕಳ ಇವರ ತಂದೆಯವರಾದ ಗೋವಿಂದರಾವ್ ಪರ್ಕಳ, ಶ್ರೀನಿವಾಸ ಉಪಾಧ್ಯ ಪರ್ಕಳ ಮೊದಲಾದವರು ಉಪಸ್ಥಿತರಿದ್ದರು. ನಟರಾಜ್ ಪರ್ಕಳ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜೇಶ್ ರಾವ್ ಮುಂಬೈ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


