ಮಂಗಳೂರು: ಹಲವು ತಿಂಗಳಿನಿಂದ ಉಬ್ಬಸದಿಂದ ಬಳಲುತ್ತಿದ್ದ ವ್ಯಕ್ತಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಬಹುಕಾಲದಿಂದ ಅನುಭವಿಸುತ್ತಿದ್ದ ಉಬ್ಬಸವನ್ನು ಅಸ್ತಮಾ ಎಂದು ತಿಳಿದ 50 ವರ್ಷದ ರಮೇಶ್ (ಹೆಸರು ಬದಲಿಸಲಾಗಿದೆ) ಎಂಬುವವರು ಕೊನೆಗೂ ಕೆಎಂಸಿ ಆಸ್ಪತ್ರೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಅಸ್ತಮಾ ಅಥವಾ ಯಾವುದೇ ಅಲರ್ಜಿಯ ಲಕ್ಷಣ ಹೊಂದಿರದ ವ್ಯಕ್ತಿ ರಮೇಶ್ 6 ತಿಂಗಳಿನಿಂದ ಉಬ್ಬಸ ಸಮಸ್ಯೆಯಿಂದ ಬಳಲುತ್ತಿದ್ದರು. ಉಬ್ಬಸ ಸಮಸ್ಯೆಯನ್ನು ಅಸ್ತಮಾ ಎಂದು ತಿಳಿದು ಸಾಕಷ್ಟು ಕಡೆ ಚಿಕಿತ್ಸೆ, ಬ್ರೊಂಕೊಡೈಲೇಟರ್ ಥೆರಪಿ ಪಡೆದರೂ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ, ಈ ಸಮಯಲ್ಲಿ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಮತ್ತು ಹಿರಿಯ ಪಲ್ಮನೊಲಾಜಿಸ್ಟ್ ಡಾ. ವಿಶಾಖ ಆಚಾರ್ಯ, ಹಿರಿಯ ಕನ್ಸಲೆಂಟ್ ಅರವಳಿಕೆ ತಜ್ಞ ಡಾ ಸುನೀಲ್ ಬಿ.ವಿ. ಕನ್ಸಲ್ಟೆಂಟ್ ಪಲ್ಮೊನೊಲಾಜಿಸ್ಟ್ ಡಾ. ಉದಯ, ಅರವಳಿಕೆ ತಜ್ಞ ಡಾ. ಫ್ರೇಡಾ, ಬೊಂಕೊಸ್ತಾಪಿ ಅಸಿಸ್ಟೆಂಟ್ ಮಗೆಲಿನಾ ಪೈಸ್, ಮಲ್ಲೇಶ್ ಪಿ, ಸುಮಿತ್ರಾ, ರೀಮಾ ಡಿಸೋಜಾ, ಸಂಯೋಜಕಿ ಸೈರಾ ಡಿಸೋಜಾ ಅವರ ತಂಡ ರೋಗಿಗೆ ಅವರ ಸಾಮಾನ್ಯ ಜೀವನವನ್ನು ಮರಳಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕಿತ್ಸೆಯ ಭಾಗವಾಗಿ ರೋಗಿಯ ಕುರಿತು ಕೆಲವು ವಿಚಾರಣೆ ನಡೆಸಿದಾಗ, ರೋಗಿಯು ಕೆಲ ತಿಂಗಳ ಹಿಂದೆ ಕಡಲೆಕಾಯಿ ಗಂಟಲಿಗೆ ಸಿಲುಕಿದ್ದ ಬಗ್ಗೆ ಜ್ಞಾಪಿಸಿಕೊಂಡಿದ್ದಾರೆ. ಆದರೆ ನೀರು ಸೇವಿಸಿದ ಬಳಿಕ ಸಮಸ್ಯೆ ಕಡಿಮೆಯಾಯಿತು ಎಂದೂ ತಿಳಿಸಿದ್ದಾರೆ. ಆದರೆ ಈ ಘಟನೆ ಬಳಿಕ ಉಬ್ಬಸ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗಿದೆ. ತಪಾಸಣೆಯಲ್ಲಿ ಅಸಮಾದಲ್ಲಿ ಕಂಡುಬರುವ ಉಬ್ಬಸದ ಲಕ್ಷಣವಲ್ಲ ಎಂದು ತಿಳಿದಿದ್ದು ಎಕ್ಸ್ ರೇ ನಡೆಸಿದಾಗ ಬಲ ಡಯಾಫ್ರಾಮ್ ನಲ್ಲಿ ಉಬ್ಬು ಪತ್ತೆಯಾಗಿದೆ. ಇದರಿಂದ ಗಾಳಿ ಸುಗಮ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ.
ಶ್ವಾಸನಾಳದಲ್ಲಿ ಕಡಲೆಕಾಯಿ ತುಣುಕು:
"ಫೆಕ್ಸಿಬಲ್ ಬ್ರೊಂಕೊಸ್ಮಾಪಿ ತಪಾಸಣೆಯಲ್ಲಿ ಶ್ವಾಸನಾಳದಲ್ಲಿ ಕಡಲೆಕಾಯಿಯ ತುಣುಕು ಸಿಲುಕಿರುವುದು ಪತ್ತೆಯಾಗಿದೆ. ಇಂಥದ್ದೊಂದು ಪುಕರಣ ಅಪರೂಪವಾಗಿದ್ದು ಆರೋಗ್ಯವಂತ ವ್ಯಕ್ತಿಯಲ್ಲಿ ಉಬ್ಬಸ ಉಸಿರಾಟದ ಸಮಸ್ಯೆ ಕಂಡುಬಂದಾಗ ಹೊರಗಿನ ವಸ್ತು ದೇಹದಲ್ಲಿ ಸಿಲುಕಿರುವ ಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ" ಎಂದು ಕೆಎಂಸಿ ಆಸ್ಪತ್ರೆಯ ಕನ್ನಲೆಂಟ್ ಮತ್ತು ಹಿರಿಯ ಪಲ್ಮನೊಲಾಜಿಸ್ಟ್ ಡಾ. ವಿಶಾಖ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ತಪಾಸಣೆಯಲ್ಲಿ ತಜ್ಞರ ತಂಡ ಶ್ವಾಸನಾಳದ ಬಲ ಮದ ಭಾಗದಲ್ಲಿ ಕಡಲೆಬೀಜದ ತುಣುಕು ಪತ್ತೆಹಚ್ಚಿದ್ದು ಫೋರ್ಸೆಪ್ಸ್ ಮೂಲಕ ಆಹಾರದ ತುಣುಕನ್ನು ಗಂಟಲಿನವರೆಗೆ ತರಲಾಯಿತು. ಬಳಿಕ ಜಾಗೃತ ಸಡೆಶನ್ನ ಜೊತೆಗೆ ರೋಗಿಗೆ ಕೆಮ್ಮುವಂತೆ ಮಾಡಿ ತುಣುಕನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಈ ಪ್ರಕರಣದಲ್ಲಿ ಜಾಗೃತ ಸೆಡೆಶನ್ (ನಿದ್ರಾ ಜನಕ) ವಿಧಾನ ಬಹಳ ಸಹಕಾರಿಯಾಯಿತು. ಅಪಾಯವನ್ನು ತಗಿಸಿದ್ದಲದೇ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಲು ರೋಗಿಗೆ ನೆರವಾಯಿತು” ಎಂದು ಹಿರಿಯ ಕನ್ಸಲೆಂಟ್ ಅರವಳಿಕೆ ತಜ್ಞ ಡಾ. ಸುನೀಲ್ ಬಿ.ವಿ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಫೀರ್ ಸಿದ್ಧಿಕಿ, "ಈ ಪ್ರಕರಣ ಭೇದಿಸಿದ್ದು ನಮ್ಮ ಬಹುಶಿಸ್ತೀಯ ವಿಧಾನದ ಬಲವನ್ನು ಮತ್ತು ಕೆಎಂಸಿ ಆಸ್ಪತ್ರೆಯಲ್ಲಿ ಅನುಸರಿಸಲಾಗುವ ಉನ್ನತ ಮಟ್ಟದ ಕ್ಲಿನಿಕಲ್ ಜಾಗರೂಕತೆಗೆ ಸಾಕ್ಷಿಯಾಗಿದೆ. ಕೇವಲ ಸುಧಾರಿತ ತಂತ್ರಜ್ಞಾನ ಮಾತ್ರವಲ್ಲ, ಪ್ರತಿಯೊಬ್ಬ ರೋಗಿಗೂ ಸಂಪೂರ್ಣ ವೈಯಕ್ತಿಕವಾದ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಬದ್ಧತೆಯಾಗಿದೆ. ಸಮಯೋಚಿತ ರೋಗ ನಿರ್ಣಯ ಮತ್ತು ತಂಡದ ತಡೆರಹಿತ ಕೆಲಸವು ದೀರ್ಘಕಾಲದ ವೈದ್ಯಕೀಯ ಕ್ಲಿಷ್ಟತೆಯನ್ನು ಯಶಸ್ಸಿನ ಕಥೆಯನ್ನಾಗಿ ಪರಿವರ್ತಿಸಿತು" ಎಂದು ಹೇಳಿದರು.
ಸಮಾಲೋಚಕ ಶ್ವಾಸಕೋಶ ಶಾಸ್ತ್ರ ತಜ್ಞ ಡಾ. ಉದಯ ಮಾತನಾಡಿ- ಚಿಕಿತ್ಸೆ, ಕಾರ್ಯವಿಧಾನಗಳಲ್ಲಿ ಪ್ರಜ್ಞಾಪೂರ್ವಕ ಸೆಡೆಶನ್ ಪ್ರಯೋಜನಗಳು ಹಲವು. ಪರಿಹಾರ ಕಂಡುಕೊಳ್ಳುವ ಸಂದರ್ಭ ವಾಯುಮಾರ್ಗ ಚಲನೆಯನ್ನು ಕಡಿಮೆ ಮಾಡುವುದು, ರೋಗಿಯ ಪ್ರತಿಕ್ರಿಯೆಗಳ ಮೇಲೆ ಉತ್ತಮ ನಿಯಂತ್ರಣ ಮತ್ತು ಮೂಗಿನ ಆಘಾತವನ್ನು ತಪ್ಪಿಸುವುದು. ಶ್ವಾಸಕೋಶ ಶಾಸ್ತ್ರ, ಅರಿವಳಿಕೆ ಮತ್ತು ನರ್ಸಿಂಗ್ ತಂಡಗಳ ನಡುವಿನ ಸುಗಮ ಸಮನ್ವಯವು ರೋಗಿಯ ಸುರಕ್ಷತೆಯನ್ನು ದೀರ್ಘಕಾಲದವರೆಗೆ ಖಚಿತಪಡಿಸುತ್ತದೆ ಎಂದರು.
ರಮೇಶ್ ಅವರು ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಮನೆಗೆ ಮರಳಿದ್ದು ಮರೆಯಲಾಗದ ಜೀವನ ಪಾಠವನ್ನೂ ಅರಿತುಕೊಂಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ