ಅ.ಭಾ.ಸಾ.ಪ ಉಳ್ಳಾಲ ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ

Upayuktha
0


ಉಳ್ಳಾಲ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಉಳ್ಳಾಲ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇಂದು ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಇವರ 'ಕದಿಕೆ' ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನವರನ್ನು ನೂತನ ಪದಾಧಿಕಾರಿಗಳಾಗಿ ಆರಿಸಲಾಯಿತು.


ಚಂದ್ರಹಾಸ ಕಣಂತೂರು (ಅಧ್ಯಕ್ಷರು), ಶ್ರೀಮತಿ ವಿಜಯಲಕ್ಷ್ಮಿ ಕಟೀಲು (ಉಪಾಧ್ಯಕ್ಷರು), ಮೋಹನ್ ಶಿರ್ಲಾಲ್ (ಕಾರ್ಯದರ್ಶಿ), ವಿಜೇತ್ ಶೆಟ್ಟಿ ಮಂಜನಾಡಿ (ಜೊತೆ ಕಾರ್ಯದರ್ಶಿ), ಶ್ರೀಮತಿ  ಜ್ಯೋತಿ ಲೋಕೇಶ್ (ಖಜಾಂಜಿ) ಹಾಗೂ ಡಾ. ಅರುಣ್ ಉಳ್ಳಾಲ್, ಶ್ರೀಮತಿ ವಿಜಯಲಕ್ಷ್ಮಿ ರೈ, ಶ್ರೀಮತಿ ಸೀತಾ ಗಟ್ಟಿ, ಶ್ರೀಮತಿ ನೀತಾ ಗಟ್ಟಿ, ಹರೀಶ್ ಮಾಸ್ಟರ್ ಹಾಗೂ ಶ್ರೀಮತಿ ರಮಣಿ ಭಂಡಾರಿ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.


ವಸಂತ ಕೊಣಾಜೆ ಅವರು ಮಾಧ್ಯಮ ಪ್ರಮುಖರಾಗಿ ಆಯ್ಕೆಯಾದರು. ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶೈಲೇಶ್ ಕುಲಾಲ್ ಹಾಗೂ ಜಿಲ್ಲಾ ಸಹ ಕಾರ್ಯದರ್ಶಿ ಲತೀಶ್ ಬಾಕ್ರಬೈಲ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top