'ಸುರಪುರ ಸಂಸ್ಥಾನ ಹಾಗೂ ಟೇಲರ್ಸ್ ಮಂಜಿಲ್'

Upayuktha
0


ಭಾರತದ ಸ್ವಾತಂತ್ರ್ಯ ಹೋರಾಟವು ಅತ್ಯಂತ ರೋಚಕವಾದುದು. ಸುಮಾರು ಎರಡು ಶತಮಾನಗಳ ಕಾಲ ಇಂಗ್ಲಿಷರೊಂದಿಗೆ ಹೋರಾಡಿ, ಜೀವ ತ್ಯಾಗ ಮಾಡಿದ. ತಮ್ಮದೆಲ್ಲವನ್ನೂ ದೇಶಕ್ಕೆ ಸಮರ್ಪಿಸಿದ ದೇಶಾಭಿಮಾನಿಗಳು ಒಂದು ಕಡೆಯಾದರೆ, ಇಡೀ ಜೀವನದಲ್ಲಿ ಏನನ್ನೂ ಸಾಧಿಸದೇ, ಎಲ್ಲವನ್ನೂ ಲಾಭದ ದೃಷ್ಟಿಯಿಂದ ನೋಡಿದ, ಸ್ವಾತಂತ್ರ್ಯ ಬಂದ ನಂತರ ಅಧಿಕಾರದ ಗದ್ದುಗೆ ಏರಿದವರು ಇಳಿಯದೇ ಇರುವವರ ದೊಡ್ಡ ಗುಂಪು ಇನ್ನೊಂದೆಡೆಗೆ, ಈ ಇಬ್ಬಂದಿತನದಲ್ಲಿ ಶ್ರೀಸಾಮಾನ್ಯನು ನಲುಗಿ ಹೋಗಿದ್ದಾನೆ.


ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಂತರದ ಈ ಸಂದರ್ಭದಲ್ಲಿ ನಾವು ಹಿಂದೆ ಹೊರಳಿ ನೋಡಿದರೆ ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆ ನಮ್ಮ ಕಣ್ಣ ಮುಂದೆ ಸುಳಿಯುತ್ತದೆ. 'ನಮ್ಮ ಕಣ್ಣ ಮುಂದಿನ ಬದುಕು, ನಮ್ಮ ಕಣ್ಣ ಮುಂದಿನ ಬೆಳಕಾಗಿ ಕಂಗೊಳಿಸುತ್ತದೆ'.


ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರಕ್ಕೆ ಅಚ್ಚಳಿಯದ ಸ್ಥಾನವಿದೆ. 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಕಿಡಿ ಹಾರಿದ್ದೇ ಸುರಪುರದಿಂದ! ಸುರಪುರದ ಬೇಡ ಅರಸರು  ಶೌರ್ಯಕ್ಕೇ ಇನ್ನೊಂದು ಹೆಸರಾಗಿದ್ದರು.


ರಾಜಾ ನಾಲ್ವಡಿ ವೆಂಕಟಪ್ಪ ನಾಯಕರು ತನ್ನ 23ನೇ ವಯಸ್ಸಿಗೇ ಬ್ರಿಟಿಷರನ್ನು ಸದೆ ಬಡೆದು. ಅವರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿದ್ದರು. ಬ್ರಿಟಿಷರಂಥ ದೊಡ್ಡ ಸೈನ್ಯ ಪಡೆಯನ್ನು ಈ ಶೂರ ರಾಜ ಹಿಮ್ಮೆಟ್ಟಿಸಿ ಅವರ ದಿಕ್ಕು ತಪ್ಪಿಸಿದ್ದ. ಕೊನೆಗೆ ರಾಜನನ್ನು ಕುತಂತ್ರದ ಮೂಲಕ ಬ್ರಿಟಿಷರು ಸೆರೆ ಹಿಡಿದು,ಅವನನ್ನು ಕೊಂದು, ರಾಜನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಕಥೆ ಕಟ್ಟಿದರು. ವೀರರಾಜನ ದೇಹವನ್ನೂ ಕೂಡ ಸುರಪುರ ಸಂಸ್ಥಾನಕ್ಕೆ ಕೊಡಲಿಲ್ಲ. ಇಡೀ ದಕ್ಷಿಣ ಭಾರತದಲ್ಲೆಲ್ಲಾ ಬ್ರೀಟಿಷರ ವಿರುದ್ಧ ಜನರನ್ನು ಬಡಿದೆಬ್ಬಿಸಿದ,ಅವರ ವಿರುದ್ಧ ಆಕ್ರೋಶಗೊಳ್ಳುವಂತೆ ಸಹ ಮಾಡಿದ್ದು ಇದೇ ಸುರಪುರದ ವೀರ ಅರಸು. ಸಂಗೊಳ್ಳಿ ರಾಯಣ್ಣನಿಗೆ ಕೂಡ ಮುನ್ನೂರು ಜನ ವೀರ ಸೈನಿಕರನ್ನು ನೀಡಿ, ಅವನು ಬ್ರಿಟಿಷರ ವಿರುದ್ಧ ಸತತ ಐದು ವರ್ಷಗಳವರೆಗೆ ಹೋರಾಡುವಂತೆ ಪ್ರೇರೇಪಿಸಿದ್ದೂ ಇದೆ ಸುರಪುರದ ಅರಸರು! ರಾಣಿ ಈಶ್ವರಮ್ಮ ಕೂಡ ಇಂಗ್ಲಿಷರನ್ನು ಸದೆಬಡಿದ ಸುರಪುರದ ವೀರರಾಣಿ! 

                

ಕೊನೆಗೆ 1858ರಲ್ಲಿ ಸುರಪುರ ಸಂಸ್ಥಾನವು ಆಂಗ್ಲರ ವಶವಾಗಿ ಇದನ್ನು ಹೈದ್ರಾಬಾದ್ ನಿಜಾಮನ ಆಡಳಿತಕ್ಕೊಳಪಡಿಸುತ್ತಾರೆ. ನಂತರ ದೀರ್ಘಕಾಲ ಬ್ರಿಟಿಷರು ಹಾಗೂ ಹೈದ್ರಾಬಾದ್ ನಿಜಾಂರ ನಿರಂಕುಶಮತಿ ಆಡಳಿತಕ್ಕೊಳಪಟ್ಟು ನಲುಗಿದ ಸುರಪುರ ಸಂಸ್ಥಾನ ಹಾಗೂ ಹೈದ್ರಾಬಾದ ಕರ್ನಾಟಕದ (ಈಗ ಕಲ್ಯಾಣ ಕರ್ನಾಟಕವಾಗಿದೆ) ಪ್ರದೇಶಗಳು 1947 ಆಗಸ್ಟ್ 15ರಂದು ಮುಕ್ತಿ ಪಡೆಯಲಿಲ್ಲ, ಸ್ವತಂತ್ರಗೊಳ್ಳಲಿಲ್ಲ. ಇದಕ್ಕಾಗಿ ಸ್ವತಂತ್ರ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರೇ ಬರಬೇಕಾಯಿತು.


ಕೊನೆಗೆ ಈ ಭಾಗವು 1948 ಸೆಪ್ಟೆಂಬರ 17 ರಂದು ಸ್ವತಂತ್ರವಾಯಿತು. ಹೀಗಾಗಿ ಇಲ್ಲಿ ಎರಡೆರಡು ಸ್ವಾತಂತ್ರ್ಯ ಹೋರಾಟಗಳು ನಡೆದವು. ಇದು ಸ್ವಾತಂತ್ರ್ಯ ಹೋರಾಟದ ವೀರರ ಅಮರ ಕಥೆ. ಇದನ್ನು ಎಲ್ಲರೂ ಕೃತಜ್ಞತೆಯಿಂದ ಸ್ಮರಿಸಬೇಕು.ಸುರಪುರದ ಎಲ್ಲ ಅರಸರಲ್ಲಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ತುಂಬ ಪ್ರಸಿದ್ಧ ಅರಸು. ಕ್ರಿ.ಶ.1843 ರಿಂದ 1858 ರವರೆಗೆ ಅಳ್ವಿಕೆ ಮಾಡಿದ ಈ ರಾಜನು ಶೂರತ್ವಕ್ಕೆ ಇನ್ನೊಂದು ಹೆಸರು.


14ನೇ ಶತಮಾನದಲ್ಲಿ ನಂಜುಂಡ ಕವಿ ರಚಿಸಿದ 'ಕುಮಾರ ರಾಮ ಚರಿತೆ'ಯಲ್ಲಿ ಬೇಡರ ಪಡೆಯ ಶೌರ್ಯ ಸಾಹಸದ ವರ್ಣನೆಯಿದೆ. ಹಲಗಲಿಯ ಬೇಡರಂತೆ ಸುರಪುರದ ಬೇಡರು ಕೂಡ ಸ್ವಾತಂತ್ರ್ಯ, ಸ್ವಾಭಿಮಾನ, ಸತ್ಯನಿಷ್ಠೆ, ಸ್ವಾಮಿನಿಷ್ಠೆಗೆ ಹೆಸರಾಗಿದ್ದರು.


ರಾಜಾ ಕೃಷ್ಣಪ್ಪ ನಾಯಕ ಹಾಗೂ ರಾಣಿ ಈಶ್ವರಮ್ಮ ಅವರ ಪುತ್ರನೇ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ. ರಾಜಾ ಕೃಷ್ಣಪ್ಪ ನಾಯಕರು ತೀರಿ ಹೋದಾಗ ವೆಂಕಟಪ್ಪ ನಾಯಕ ಇನ್ನೂ ಅಪ್ರಾಪ್ತನಾಗಿದ್ದನು. ಆ ಸಂದರ್ಭದಲ್ಲಿ ರಾಣಿ ಈಶ್ವರಮ್ಮ ಮಗನನ್ನು ಪಟ್ಟಕ್ಕೆ ಕೂಡಿಸಿ ಅವನ ಹೆಸರಿನಿಂದ ರಾಜ್ಯಭಾರ ಮಾಡುತ್ತಿದ್ದರು. ಬ್ರಿಟಿಷರು ಸಮಯ ಸಾಧಕರು. ಇದೇ ಸಂದರ್ಭವನ್ನು ಬಳಸಿಕೊಂಡು, ವೆಂಕಟಪ್ಪ ನಾಯಕನು ಅಪ್ರಾಪ್ತನಿದ್ದಾನೆ. ಅವನಿಗೆ ಆಡಳಿತದಲ್ಲಿ ಅನುಕೂಲ ಮಾಡಿಕೊಡಬೇಕೆಂದು ಪ್ರಸಿದ್ದ ಲೇಖಕ 'ಮೆಡೋಜ್ ಟೇಲರ್'ನನ್ನು ಸುರಪುರದ ರಾಜಕೀಯ ಕಾರ್ಯಭಾರಿ ಎಂದು ಇಂಗ್ಲಿಷರು ನೇಮಿಸಿದರು. ಟೇಲರನು ಉತ್ತಮ ಆಡಳಿತಗಾರನಾಗಿದ್ದುದ್ದಲ್ಲದೇ, ರಾಜಕುಮಾರನಿಗೆ ಉತ್ತಮ ಶಿಕ್ಷಣ ಕೊಡಿಸಿದನು. ಆಂಗ್ಲ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದನು. ಯುವರಾಜನು ಟೇಲರನನ್ನು 'ಅಪ್ಪ' ಎಂದೇ ಕರೆಯುತ್ತಿದ್ದನು. ಒಳ್ಳೆಯ ಆಡಳಿತ ನೀಡಿದ ಮೆಡೋಜ್ ಟೇಲರ್ ಪ್ರಸಿದ್ದಿಯನ್ನು ಪಡೆದನು. ಅವನು ಕಟ್ಟಿಸಿದ 'ಟೇಲರ್ಸ್ ಮಂಜಿಲ್' ಆಕರ್ಷಕವಾಗಿದೆ. ರಾಜಾ ವೆಂಕಟಪ್ಪ ನಾಯಕ ಪ್ರಾಪ್ತ ವಯಸ್ಕನಾದ ಮೇಲೆ ಅವರಿಗೆ ರಾಜ್ಯಭಾರವನ್ನು ಮೆಡೋಜ ವಹಿಸಿಕೊಟ್ಟನು. ಆಗ ಯುವರಾಜನಿಗೆ ಕೇವಲ ಹದಿನೆಂಟು ವಯಸ್ಸು. ಈ ಸಂದರ್ಭದಲ್ಲಿ ಬ್ರಿಟಿಷರು ಹಾಗೂ ನಿಜಾಮರು ರಾಜ್ಯವನ್ನು ಕೊಳ್ಳೆ ಹೊಡೆದರು. ಉತ್ಕಟ ದೇಶಪ್ರೇಮಿಯಾಗಿದ್ದ ಯುವರಾಜರು ವಿದೇಶಿಯರ ದಬ್ಬಾಳಿಕೆಯಿಂದ ನಲುಗಿಹೋಗಿದ್ದರು. ಆದರೆ ರಾಜರ ಅಪ್ರತಿಮ ಶೂರತ್ವದ ಮುಂದೆ ಇದೆಲ್ಲ ನಗಣ್ಯವಾಯಿತು.                                             


'ಸುರಪುರ ಸಂಸ್ಥಾನದ ಅದ್ಭುತ 'ಟೇಲರ್ಸ್ ಮಂಜಿಲ್'

ಕಲ್ಲು ಬಂಡೆ ಬೆಟ್ಟಗಳಿಂದ ಆವೃತವಾದ ಊರು. ಅಂತದರಿಂದಲೇ ನಿರ್ಮಾಣಗೊಂಡದ್ದು ಈ ಸುರಪುರ ಪಟ್ಟಣ!  ಇಲ್ಲಿ ಗುಡ್ಡದ ಮ್ಯಾಲ ಟೇಲರ್ಸ ಮಂಜಿಲ್ ಇದೆ. ಇದು 179 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, 'T' ಅಕ್ಷರ  ಮಾದರಿಯಲ್ಲಿ ಇದೆ.ಈ ಕಟ್ಟಡದ ಪ್ರತಿಗೋಡೆಗೂ ಕನಿಷ್ಠ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾಗಿಲುಗಳಿವೆ. ನಾಲ್ಕು ಕೋಣೆಗಳಿರುವ ಕಟ್ಟಡದಲ್ಲಿ ಇಪ್ಪತ್ತೇಳು ಬಾಗಿಲುಗಳು ಇವೆ! ಇಲ್ಲಿಯ ವಿಶೇಷವೆಂದರೆ,ಎಲ್ಲ ಬಾಗಿಲುಗಳನ್ನು ಮುಚ್ಚಿದಾಗ ಯಾವುದಾದರೊಂದು ಬಾಗಿಲಕ್ಕೆ ಬಡದ್ರೂ,  ಎಲ್ಲಾ ಬಾಗಿಲು ಅಲುಗಾಡಾಕ ಶುರು ಮಾಡ್ತಾವು, ಮತ್ತು ತನ್ನಷ್ಟಕ್ಕೆ ತಾನೇ ತೆರಿತಾವು. ಆವಾಗ್ಲೇ ಈ ರೀತಿಯ ಟೆಕ್ನಿಕ್ ಉಪಯೋಗಿಸಿ ಇದನ್ನು ಮಾಡ್ಯಾರಂದ್ರs... ಇದು ಖರೇ ಸಾಮಾನ್ಯದ ಮಾತ ಅಲ್ಲ ನೋಡ್ರಿ!

 

ರಕ್ಷಣೆಯ ಉದ್ದೇಶದಿಂದ ವಾಯುಭಾರ ನಿಯಮವನ್ನು ಬಳಸಿ ನಿರ್ಮಿಸಲಾಗಿರುವ ಈ ಕಟ್ಟಡದ ಹೆಸರು 'ಟೇಲರ್ಸ್ ಮಂಜಿಲ್'. ಯಾದಗಿರಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಸುರಪುರದಲ್ಲಿ ಈ ಕಟ್ಟಡ ಇದೆ. ಸುರಪುರದಲ್ಲಿ ರೆಸಿಡೆಂಟ್ ಆಗಿದ್ದ ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಸ್ವತಃ ನೀಲಿ ನಕಾಶೆ ತಯಾರಿಸಿ ನಿರ್ಮಿಸಿದ ಕಟ್ಟಡವಿದು.

'ಸುರಪುರ ಸಂಸ್ಥಾನದ ಅದ್ಭುತ 'ಟೇಲರ್ಸ್ ಮಂಜಿಲ್'


ಕಲ್ಲು ಬಂಡೆಗಳ ಬೆಟ್ಟಗಳ ಸಾಲು. ಅಂತಹ ಬಂಡೆಗಳ ಬೆಟ್ಟದ  ನಿರ್ಮಾಣವಾದ ಪುಟ್ಟ ಪಟ್ಟಣ. ಅದಕ್ಕಿಂತ ಎತ್ತರದ ತುದಿಯಲ್ಲಿ ನಿರ್ಮಿಸಲಾದ ೧೭೯ವರ್ಷಗಳಷ್ಟು ಹಳೆಯದಾದ ಕಟ್ಟಡ, ಇಂಗ್ಲಿಷ್ ವರ್ಣಮಾಲೆಯ 'ಟಿ' ಮಾದರಿಯಲ್ಲಿ ಇರುವ ಈ ಕಟ್ಟಡದ ಪ್ರತಿಗೋಡೆಗೂ ಕನಿಷ್ಠ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾಗಿಲುಗಳಿವೆ. ನಾಲ್ಕು ಕೋಣೆಗಳಿರುವ ಕಟ್ಟದಲ್ಲಿ ಇಪ್ಪತ್ತೇಳು ಬಾಗಿಲುಗಳು ತುಸು ಹೆಚ್ಚೇ ಆಯಿತು. ಎಲ್ಲ ಬಾಗಿಲುಗಳನ್ನು ಮುಚ್ಚಿದಾಗ ಯಾವುದಾದರೊಂದು ಬಾಗಿಲನ್ನು ತಟ್ಟಿದರೂ ಎಲ್ಲ ಬಾಗಿಲುಗಳು ಅಲುಗಾಡುತ್ತವೆ.


ರಕ್ಷಣೆಯ ಉದ್ದೇಶದಿಂದ ವಾಯುಭಾರ ನಿಯಮವನ್ನು ಬಳಸಿ ನಿರ್ಮಿಸಲಾಗಿರುವ ಕಟ್ಟಡದ ಹೆಸರು 'ಟೇಲರ್ಸ್ ಮಂಜಿಲ್' ಯಾದಗಿರಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಸುರಪುರದಲ್ಲಿ ಈ ಕಟ್ಟಡ ಇದೆ. ಸುರಪುರದಲ್ಲಿ ರೆಸಿಡೆಂಟ್ ಆಗಿದ್ದ ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಸ್ವತಃ ನೀಲಿ ನಕಾಶೆ ತಯಾರಿಸಿ ನಿರ್ಮಿಸಿದ ಕಟ್ಟಡವಿದು.


ಯಾರು ಈ ಟೇಲ‌ರ್?

ಐತಿಹಾಸಿಕ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಮೆಡೋಸ್ ಟೇಲರ್ (1808-76) ಲೇಖಕ ಜನಪ್ರಿಯರಾಗಿದ್ದರು. 'ಕನ್‌ಫೆಷೆನ್ಸ್ ಆಫ್ ಥಗ್'(ಠಕ್ಕನೊಬ್ಬನ ಆತ್ಮಚರಿತ್ರೆ) ಮೂಲಕ ಇಂಗ್ಲೆಂಡ್ ಮಾತ್ರ ವಲ್ಲದೇ ಯುರೋಪಿನಾದ್ಯಂತ ಹೆಸರುವಾಸಿಯಾಗಿದ್ದರು. ಪ್ರಾಗೈತಿಹಾಸಿಕ ಶೋಧಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಮಹತ್ವದ ಕೆಲಸ ಮಾಡಿರುವ ಟೇಲರ್ ಇತಿಹಾಸಕಾರರು ಮತ್ತು ಸಂಶೋಧಕರೂ ಹೌದು. ತಮ್ಮ ಹದಿನೈದನೇ ವಯಸ್ಸಿಗೆ ಕೆಲಸ ಹುಡುಕುತ್ತ ಭಾರತಕ್ಕೆ ಬಂದ ಟೇಲ‌ರ್ ಔರಂಗಾಬಾದ್‌ನಲ್ಲಿ ಕಾರಕೂನನಾಗಿ ವೃತ್ತಿ ಆರಂಭಿಸಿದರು. ನಂತರ ಪೊಲೀಸ್, ಮಿಲಿಟರಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಕ್ಯಾಪ್ಟನ್-ಕರ್ನನ್ಹುದ್ದೆಯವರೆಗೆ ಪದೋನ್ನತಿ ಪಡೆದರು. ಆಡಳಿತಗಾರರಾಗಿ ಟೇಲರ್ ಕೈಗೊಂಡ ಕ್ರಮಗಳು ಅವರನ್ನು ಜನಪ್ರಿಯವಾಗಿಸಿದವು. ಜನ ಸಂಜೆ ದೀಪ ಹಚ್ಚುವ ವೇಳೆ ಅವರ ಹೆಸರನ್ನು ಸ್ಮರಿಸುತ್ತಿದ್ದರು. 'ಮೆಡೋಸ್ ಟೇಲರ್' ಎಂದು ಉಚ್ಚರಿಸಲು ಬಾರದ ಜನರಿಗೆ ಟೇಲರ್ 'ಮಹಾದೇವನ ಬಾಬಾ' ಆಗಿದ್ದರು.


ಸುರಪುರದಲ್ಲಿ ಟೇಲರ್: 'ಸುರಪುರ' ಎಂದೊಡನೆ ನೆನಪಾಗುವುದು ಬ್ರಿಟಿಷರ ವಿರುದ್ಧ ೧೮೫೭ರಲ್ಲಿ ಸಿಡಿದೆದ್ದ ರಾಜ  ರಾಜಾ ವೆಂಕಟಪ್ಪ ನಾಯಕ. ಈ ಶೂರ ಅರಸನು  ಏಳು ವರ್ಷದ ಹುಡುಗನಾಗಿದ್ದಾಗ ಟೇಲರ್ ಸುರಪುರಕ್ಕೆ ಬಂದನು. ಟೇಲರ್ ಸುರಪುರಕ್ಕೆ ಬರುವುದಕ್ಕೆ ಕಾರಣವಾದದ್ದು ಸಂಸ್ಥಾನವು ಹೈದರಾಬಾದ್ ನಿಜಾಮರಿಗೆ ನೀಡಬೇಕಾಗಿದ್ದ ಬಾಕಿ ಹಣ ವಸೂಲಿ ಮಾಡುವುದು ಮತ್ತು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು. ಟೇಲರ್ ಗಿಂತ ಮೊದಲು ಸುರಪುರಕ್ಕೆ ಬಂದಿದ್ದ ಕ್ಯಾಪ್ಟನ್ ಗ್ರೀಸ್ ಎಂಬ ಬ್ರಿಟಿಷ್ ಅಧಿಕಾರಿ ಇಲ್ಲಿ ಜನರ ವಿರೋಧಕ್ಕೆ ಅಂಜಿ ಓಡಿ ಹೋಗಿದ್ದನು.


ರಾಜಾ ವೆಂಕಟಪ್ಪ ನಾಯಕನ ತಂದೆ ರಾಜಾ ಕೃಷ್ಣಪ್ಪ ನಾಯಕನು ಅಕಾಲ ಮೃತ್ಯುವಿಗೆ ಈಡಾಗಿದ್ದರಿಂದ ಸಿಂಹಾಸನ ಖಾಲಿಯಾಗಿತ್ತು. ರಾಣಿ ಈಶ್ವರಮ್ಮನಿಗೆ ಗಂಡುಮಗು ಹುಟ್ಟುವ ಮುನ್ನವೇ ರಾಜಾ ಕೃಷ್ಣಪ್ಪ ನಾಯಕನು ತನ್ನ ಸಹೋದರ ರಾಜಾ ಪಿಡ್ಡನಾಯಕನ ಮಗನನ್ನು ಯುವರಾಜನೆಂದು ಘೋಷಿಸಿದ್ದನು. ಯುವರಾಜನನ್ನೇ ರಾಜನನ್ನಾಗಿ ಮಾಡಬೇಕು ಎಂಬುದು ರಾಜಾ ಪಿಡ್ಡನಾಯಕನ ಆಸೆಯಾಗಿತ್ತು. ಆದರೆ ರಾಣಿ ಈಶ್ವರಮ್ಮ ತನ್ನ ಕುಟುಂಬಕ್ಕೆ ಅಧಿಕಾರ ನೀಡಬೇಕು ಎಂದು ಬಯಸುತ್ತಿದ್ದಳು. ಇಡೀ ರಾಜ್ಯ ಎರಡು ಬಣಗಳಾಗಿ ಒಡೆದು ಹೋಗಿದ್ದ ಸಂದರ್ಭದಲ್ಲಿ ಟೇಲ‌ರ್ ಸುರಪುರಕ್ಕೆ ಬಂದನು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಸುಲಭವಾಗಿ ಬಗೆ ಹರಿಸುವುದು ಸುಲಭ ಸಾಧ್ಯವಾಗಿರಲಿಲ್ಲ.


ಆದರೆ, ಸೌಜನ್ಯ ಸಂಯಮ ಮತ್ತು ತೂಕದ ನಿರ್ಧಾರದಿಂದ ವರ್ತಿಸಿದ ಟೇಲರ್ ಸಾಹೇಬ ಏಳು ವರ್ಷದ ಮಗು ವೆಂಕಟಪ್ಪನಾಯಕನನ್ನು ಸಿಂಹಾಸನದ ಮೇಲೆ ಕೂಡಿಸುವಲ್ಲಿ ಯಶಸ್ವಿಯಾದನು. ಇದರಿಂದಾಗಿ ಉಭಯ ಪಂಗಡಗಳ 'ಗುರಿ' ರಾಜ ಮತ್ತು ಟೇಲರ್ ಕಡೆಗೆ ತಿರುಗಿತು. ದಸರಾ ಮೆರವಣಿಗೆಯಲ್ಲಿ ಮತ್ತು ದರ್ಬಾರಿನಲ್ಲಿ ದಾಳಿ ನಡೆಯುವ ಮುನ್ಸೂಚನೆ ಅರಿತ ಟೇಲರ್, ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದನು. ಈ ರೀತಿಯಾಗಿ ಸುರಪುರದಲ್ಲಿ ಇದ್ದ ಪ್ರಾರಂಭದ ದಿನಗಳನ್ನು ಅವನು ಆತಂಕದಲ್ಲಿಯೇ ಕಳೆಯಬೇಕಾಯಿತು. ಅಂತಹ ದಿನಗಳಲ್ಲಿಯೇ ಟೇಲ‌ರ್ ತಮ್ಮ ನಿವಾಸ(ಮಂಜಿಲ್) ನಿರ್ಮಾಣಕ್ಕೆ ಮುಂದಾದರು. ಪಟ್ಟದಿಂದ ದೂರ ಮತ್ತು ಎತ್ತರದಲ್ಲಿ ಇರುವ ಬೆಟ್ಟದ ಮೇಲೆ ೧೮೪೪ರಲ್ಲಿ ಅದ್ಭುತವಾದ ಬಂಗ್ಲೆ ಕಟ್ಟಿದನು.


ಸುರಪುರದಲ್ಲಿ ಟೇಲ‌ರ್ ಇದ್ದ 13 ವರ್ಷಗಳ ಪೈಕಿ ದ್ವಿತೀಯಾರ್ಧದಲ್ಲಿ ಬಹುತೇಕ ದಿನಗಳು ಅಭಿವೃದ್ಧಿ ಪರ, ನೆಮ್ಮದಿಯ ದಿನಗಳಾಗಿದ್ದವು. ರಾಜರಿಗೆ ಆತ್ಮೀಯನಾಗಿದ್ದ ಟೇಲ‌ರ್, ರಾಜರಿಗೆ ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿದ್ದು ವಿಶೇಷ. ರಾಜಾ ನಾಲ್ವಡಿ ವೆಂಕಟಪ್ಪ ನಾಯಕ, ಟೇಲರ್‌ನನ್ನು 'ಅಪ್ಪ' ಎಂದು ಕರೆಯುತ್ತಿದ್ದನು. ಟೇಲರ್ ಪಟ್ಟಣದಿಂದ ನಿರ್ಗಮಿಸುವುದನ್ನು ತನ್ನಿಂದ ನೋಡಲಾಗುವುದಿಲ್ಲ ಎಂದು ನಾಯಕರು ಬೇರೆ ಕಡೆಗೆ ಹೋಗಲು ಮನಸ್ಸು ಮಾಡಿದ್ದರು.


ಭಯ ಆತಂಕದಲ್ಲಿ ಇದ್ದ ದಿನಗಳಲ್ಲಿ ಮಂಜಿಲ್ ಕಾಮಗಾರಿ ಆರಂಭಿಸಿದರಿಂದ ರಕ್ಷಣೆಯೇ ಟೇಲರ್ ನ ಗುರಿಯಾಗಿತ್ತು. ಇಲ್ಲಿ ಒಂದು ವಿಶೇಷತೆ ಏನೆಂದರೆ, ಇಲ್ಲಿ ಯಾವ ಕಡೆಯಿಂದ ದಾಳಿ ನಡೆದರೂ ಕೂಡ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುವ ರೀತಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ತಾನಿದ್ದ ಕೋಣೆಯಿಂದಲೇ ಮುಖ್ಯದ್ವಾರ ತೆರೆಯುವುದು ಗೊತ್ತಾಗುವಂತಹ ತಂತ್ರಜ್ಞಾನವನ್ನು ಟೇಲರ್ ಈ ಕಟ್ಟಡದಲ್ಲಿ ಅಳವಡಿಸಿದ್ದಾರೆ. ಮಂಜಿಲ್‌ನ ಮುಂಭಾಗದಲ್ಲಿ ನಿಂತರೆ ಮುಖ್ಯದ್ವಾರದ ಪಕ್ಕದಲ್ಲಿಯೇ ಎರಡು ಬಾಗಿಲುಗಳಿವೆ. ಅದರ ಎಡಬಲ ಕೋಣೆಗಳಿಗೆ ಮತ್ತೆ ಪ್ರತ್ಯೇಕ ಬಾಗಿಲು ಕೂಡಿಸಲಾಗಿದೆ.


ಹಾಲ್, ಊಟದ ಹಾಲ್ ಹಾಗೂ ಎರಡು ಬೃಹತ್ ಕೋಣೆಗಳಿವೆ. ಎರಡೂ ಕೋಣೆಗಳಿಗೂ ಸ್ನಾನ-ಶೌಚಾಲಯ ವ್ಯವಸ್ಥೆಯಿದೆ. ಬೇಸಿಗೆಯಲ್ಲಿಯೂ ತಣ್ಣಗೆ 'ಹವಾ ನಿಯಂತ್ರಿತ' ವ್ಯವಸ್ಥೆ ಇರುವಂತೆ ನಿರ್ಮಿಸಿರುವಲ್ಲಿ ಟೇಲರ್ ಕೌಶಲ್ಯ ಎದ್ದು ಕಾಣಿಸುತ್ತದೆ. ಕಟ್ಟಡದಲ್ಲಿ ಉಪಕರಣಗಳು ಕೂಡ 'ಟಿ' ಆಕಾರದಲ್ಲಿಯೇ ಇವೆ. ಆಗ ಟೇಲರ್ ಬಳಸುತ್ತಿದ್ದ ಪಿಂಗಾಣಿ ಪಾತ್ರೆ ಮತ್ತು ಕುರ್ಚಿಯನ್ನು ಕಲಬುರಗಿ ಸರ್ಕಾರಿ ಮ್ಯೂಸಿಯಂನಲ್ಲಿ ಇಡಲಾಗಿದೆ.


ಮಂಜಿಲ್‌ನ ಮುಂಭಾಗದಲ್ಲಿ ಹಿಂದೆ ಉದ್ಯಾನ ಇತ್ತು ಎನ್ನುವುದಕ್ಕೆ ಕುರುಹುಗಳಿವೆ. ಅಲ್ಲಿಂದ ಸ್ವಲ್ಪ ಮುಂದೆ ಇರುವ 'ಕುದುರೆ ಗುಡ್ಡ' ಎಂದು ಸ್ಥಳೀಯರು ಕರೆಯುವ 'ಟೇಲರ್ ಸೀಟ್'ನಲ್ಲಿ ಕುಳಿತರೆ ಇಡೀ ಪಟ್ಟಣದ ವಿಹಂಗಮ ನೋಟ ದೊರೆಯುತ್ತದೆ. ದೂರದ ಬೆಟ್ಟಸಾಲುಗಳು ಮನಸ್ಸಿಗೆ ಮುದ ನೀಡುತ್ತವೆ.


ಟೇಲ‌ರ್ ಸೀಟ್‌ನಲ್ಲಿ ಕುಳಿತು ಬೆಳಿಗ್ಗೆ ಮತ್ತು ಸಂಜೆಯನ್ನು ಅನುಭವಿಸುವುದೇ ಒಂದು ಸೊಗಸು. ಈಗ ಇದು ಸರ್ಕಾರಿ 'ಐಬಿ' ಆಗಿದೆ.

ಕರ್ನಲ್ ಮೆಡೋಜ್ ಟೇಲರನ ಬಗ್ಗೆ ತಿಳಕೊಬೇಕಂದ್ರs........


ಐತಿಹಾಸಿಕ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಮೆಡೋಸ್ ಟೇಲರ್(1808-1876) ಲೇಖಕರಾಗಿ ಜನಪ್ರಿಯರಾಗಿದ್ದರು. 'ಕನ್‌ಫೆಷೆನ್ಸ್ ಆಫ್ ಥಗ್'(ಠಕ್ಕನೊಬ್ಬನ ಆತ್ಮಚರಿತ್ರೆ) ಮೂಲಕ ವಿಶ್ವ ಪ್ರಸಿದ್ಧಿ ಪಡೆದಿದ್ದನು. ಆಡಳಿತದ ದೃಷ್ಟಿಯಿಂದ ಟೇಲರ್ ಕೈಗೊಂಡ ಕ್ರಮಗಳು ಅವನನ್ನು ಜನಪ್ರಿಯನನ್ನಾಗಿ ಮಾಡಿದವು,'ಮೆಡೋಸ್ ಟೇಲರ್' ಎಂದು ಅನ್ನಲು ಬಾರದ ಜನರಿಗೆ, ಟೇಲರ್ ಸಾಕ್ಷಾತ್ 'ಮಹಾದೇವನ ಬಾಬಾ' ಆಗಿದ್ದನು.


ಶೂರ ಅರಸು ರಾಜಾ ವೆಂಕಟಪ್ಪ ನಾಯಕರ ತಂದೆ ರಾಜಾ ಕೃಷ್ಣಪ್ಪ ನಾಯಕರು ಅಕಾಲ ಮೃತ್ಯುವಿಗೆ ಈಡಾಗಿದ್ದರಿಂದ, ಮುಂದಿನ ರಾಜನ ಆಯ್ಕೆಯ ಸವಾಲು ಎದುರಾಗಿತ್ತು. ರಾಣಿ ಈಶ್ವರಮ್ಮನಿಗೆ ಗಂಡು ಮಗು ಜನಿಸುವ ಮೊದಲೇ, ರಾಜನು ತನ್ನ ತಮ್ಮ ರಾಜಾ ಪಿಡ್ಡನಾಯಕನ ಮಗನನ್ನು ಯುವರಾಜನೆಂದು ಘೋಷಣೆ ಮಾಡಿದ್ದನು. ಯುವರಾಜನನ್ನೇ ರಾಜನನ್ನಾಗಿ ಮಾಡಬೇಕು ಎಂಬುದು ರಾಜಾ ಪಿಡ್ಡನಾಯಕರ ಆಸೆಯಾಗಿತ್ತು. ಆದರೆ ರಾಣಿ ಈಶ್ವರಮ್ಮ ತನ್ನ ಒಡಲಿನ ಕುಡಿಯನ್ನು ಸಿಂಹಾಸನದ ಮೇಲೆ ಕೂಡ್ರಿಸಬೇಕೆಂದು  ಬಯಸುತ್ತಿದ್ದಳು. ಇಂಥ ಕ್ಲಿಷ್ಟ ಸಂದರ್ಭದಲ್ಲಿ ಟೇಲ‌ರ್ ಸುರಪುರಕ್ಕೆ ಬಂದನು. 


ಎಲ್ಲಾ ರೀತಿಯಿಂದಲೂ ಯೋಚಿಸಿದ ಟೇಲರ್ ಸಾಹೇಬ, ಏಳು ವರ್ಷದ ಮಗು ರಾಜಾ ವೆಂಕಟಪ್ಪನಾಯಕನನ್ನು ಸಿಂಹಾಸನದ ಮೇಲೆ ಕೂಡಿಸಿದನು.ಇದರಿಂದ ಕೆಲವರಿಗೆ ಅಸಮಾಧಾನವಾಯಿತು, ಗದ್ದಲ ಗಲಭೆಗಳು ಏಳುವ ಸನ್ನಿವೇಶ ನಿರ್ಮಾಣವಾಯಿತು. ಇದರಿಂದ ದಸರಾ ಮೆರವಣಿಗೆಯಲ್ಲಿ ಮತ್ತು ದರ್ಬಾರಿನಲ್ಲಿ ದಾಳಿ ನಡೆಯುವ ಮುನ್ಸೂಚನೆ ಅರಿತ ಟೇಲರ್,ಅದನ್ನು ತಡೆಯುವಲ್ಲಿ ಯಶಸ್ವಿಯಾದನು. ತಾನು ಇರಲು ಒಂದು ಸುರಕ್ಷಿತ ತಾಣಕ್ಕಾಗಿ ಅವನ ಹುಡುಕಾಟ ನಡೆಯಿತು. ಅಂತಹ ದಿನಗಳಲ್ಲಿಯೇ 'ಟೇಲ‌ರ್ಸ ಮಂಜಿಲ್' ನಿರ್ಮಾಣವಾಗಲು ಕಾರಣವಾಯಿತು. ಪಟ್ಟಣದಿಂದ ದೂರ ಮತ್ತು ಎತ್ತರದಲ್ಲಿ ಇರುವ ಬೆಟ್ಟದ ಮೇಲೆ 1844ರಲ್ಲಿ ಅದ್ಭುತವಾದ ಬಂಗ್ಲೆ ಕಟ್ಟಿದನು.ಇದು ಸಮುದ್ರ ಮಟ್ಟದಿಂದ 1866 ಅಡಿ ಎತ್ತರದಲ್ಲಿದೆ.


ಸುರಪುರದಲ್ಲಿ ಮೆಡೋಜ ಟೇಲ‌ರ ಇದ್ದ 12 ವರ್ಷಗಳಲ್ಲಿ ಅನೇಕ ಉತ್ತಮ ಹಾಗೂ ಅಭಿವೃದ್ಧಿ ಕೆಲಸಗಳು ನೆರವೇರಿದವು.ರಾಜರಿಗೆ ಆತ್ಮೀಯನಾಗಿದ್ದ ಟೇಲ‌ರ, ಅವರು ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಯನ್ನು ಹಾಗೂ ಉತ್ತಮ ಸಂಸ್ಕಾರ ಪಡೆಯಲು ಕಾರಣೀಕರ್ತನಾದನು. ರಾಜಾ ನಾಲ್ವಡಿ ವೆಂಕಟಪ್ಪ ನಾಯಕ, ಟೇಲರ್‌ನನ್ನು 'ಅಪ್ಪ' ಎಂದು ಕರೆಯುತ್ತಿದ್ದರು.


ಭಯ ಆತಂಕದಲ್ಲಿ ಇದ್ದ ದಿನಗಳಲ್ಲಿ ಮಂಜಿಲ್ ಕಾಮಗಾರಿ ಆರಂಭಿಸಿದರಿಂದ, ರಕ್ಷಣೆಯೇ ಟೇಲರ್ನ  ಗುರಿಯಾಗಿತ್ತು. ಇಲ್ಲಿಯ ಒಂದು ವಿಶೇಷತೆ ಏನೆಂದರೇ, ಇಲ್ಲಿ ಯಾವ ಕಡೆಯಿಂದ ದಾಳಿ ನಡೆದರೂ ಕೂಡ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ತಾವಿದ್ದ ಕೋಣೆಯಿಂದಲೇ ಮುಖ್ಯದ್ವಾರ ತೆರೆಯುವುದು ಗೊತ್ತಾಗುವಂತಹ ತಂತ್ರಜ್ಞಾನವನ್ನು ಟೇಲರ್ ಈ ಕಟ್ಟಡದಲ್ಲಿ ಅಳವಡಿಸಿದ್ದಾನೆ. ಮಂಜಿಲ್‌ನ ಮುಂಭಾಗದಲ್ಲಿ ನಿಂತರೆ, ಮುಖ್ಯದ್ವಾರದ ಬಾಜುಕ್ಕ ಎರಡು ಬಾಗಿಲುಗಳಿವೆ. ಅದರ ಎಡ ಬಲ ಕೋಣೆಗಳಿಗೆ ಮತ್ತೆ ಪ್ರತ್ಯೇಕ ಬಾಗಿಲುಗಳನ್ನು ಅಳವಡಿಸಿದ್ದಾರೆ. ಇಲ್ಲಿ ಹಾಲ್ ಇದೆ. ಊಟದ ಹಾಲ್ ಇದೆ. ಅಲ್ಲದೆ ಎರಡು ಸುಸಜ್ಜಿತ ಕೋಣೆಗಳೂ ಇವೆ.


ಬೇಸಿಗೆಯಲ್ಲಿ ತಣ್ಣಗೆ 'ಹವಾ ನಿಯಂತ್ರಿತ' ವ್ಯವಸ್ಥೆ ಇರುವಂತೆ ನಿರ್ಮಿಸಿರುವಲ್ಲಿ ಟೇಲರ್ ಕೌಶಲ್ಯ ಎದ್ದು ಕಾಣಿಸುತ್ತದೆ. ಕಟ್ಟಡದಲ್ಲಿ ಉಪಕರಣಗಳು ಕೂಡ 'ಟಿ' ಆಕಾರದಲ್ಲಿಯೇ ಇವೆ. ಆಗ ಟೇಲರ್ ಬಳಸುತ್ತಿದ್ದ ಪಿಂಗಾಣಿ ಪಾತ್ರೆ ಮತ್ತು ಕುರ್ಚಿಯನ್ನು ಕಲಬುರಗಿ ಸರ್ಕಾರಿ ಮ್ಯೂಸಿಯಂನಲ್ಲಿ ಇಡಲಾಗಿದೆ.


ಮಂಜಿಲ್‌ನ ಮುಂಭಾಗದಲ್ಲಿ ಹಿಂದೆ ಉದ್ಯಾನ ಇತ್ತು. ಇಡೀ ದಕ್ಷಿಣ ಭಾರತದ ಮೊಟ್ಟ ಮೊದಲ ಟೆನ್ನಿಸ್ ಕೋರ್ಟನ್ನು ಟೇಲರ್ ಇಲ್ಲಿ ನಿರ್ಮಿಸಿದ್ದನು. ಈಗ ಪಕ್ಕದಲ್ಲಿ ಹೆಲಿಪ್ಯಾಡ ಕೂಡ ಮಾಡಿದ್ದಾರೆ. ಅಲ್ಲಿಂದ ಸ್ವಲ್ಪ ಮುಂದೆ 'ಕುದುರೆ ಗುಡ್ಡ' ಇದೆ. ಇಲ್ಲಿಂದ ಇಡೀ ಪಟ್ಟಣದ ಸೌಂದರ್ಯವನ್ನು ಸವಿಯಬಹುದು. ಇಲ್ಲಿ ಎಲ್ಲಿ ನೋಡಿದಲ್ಲೆಲ್ಲ ಬೆಟ್ಟಗುಡ್ಡಗಳೇ ಕಾಣುತ್ತವೆ. ಇಲ್ಲಿಯ ಜನರು ಕುದುರಿ ಗುಡ್ಡದ ಮ್ಯಾಗ ಕುಂತು ಮುಂಜಾನೆ ಮತ್ತು ಸಂಜೆಯ ಹೊತ್ತಿನಲ್ಲಿ ನೋಡಿ ಆನಂದಿಸುತ್ತಾರೆ. ಈಗ ಇದು ಸರ್ಕಾರಿ 'ಐಬಿ' ಆಗಿದೆ. ಇದರ ಪಕ್ಕದಲ್ಲಿ ಈಗ ಇನ್ನೊಂದು 'ಐಬಿ'ಯನ್ನು ನಿರ್ಮಿಸಲಾಗಿದೆ. ಆದರೆ ಟೇಲರನ ಮಂಜಿಲಕ್ಕೆ ಬೇರೆ ಯಾವುದು ಸಾಟಿಯಿಲ್ಲ!


- ಶ್ರೀನಿವಾಸ ಜಾಲವಾದಿ, ಸುರಪುರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top