ಮಂಗಳೂರು: "ಯಕ್ಷಗಾನದ ಬಗ್ಗೆ ಅಧ್ಯಯನ, ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ನಾವು ಜೀವನದಲ್ಲಿ ಎತ್ತರಕ್ಕೆ ಏರಬಹುದು. ಹಾಗೆಯೇ ಸರಯೂ ಸಂಸ್ಥೆಯ ಶಿಕ್ಷಣಾರ್ಥಿಗಳು ಕೂಡಾ ಪುರಾಣ ಕಥೆಗಳಲ್ಲಿ ಬರುವ ಆದರ್ಶ ಪಾತ್ರಗಳನ್ನು ಅಭ್ಯಸಿಸಿ ಉತ್ತಮ ಜೀವನ ನಡೆಸಬೇಕು. ರಜತ ವರ್ಷಗಳ ಇತಿಹಾಸವುಳ್ಳ ಈ ಸಂಸ್ಥೆ ಇನ್ನೂ ಇನ್ನೂ ಬೆಳಗಲಿ" ಎ೦ದು ಕದ್ರಿ ದೇವಸ್ಥಾನದ ಟ್ರಸ್ಟಿಗಳಲ್ಲಿ ಓರ್ವರಾದ ರಾಜೇಂದ್ರ ರವರು ಹೇಳಿದರು.
ಕದ್ರಿ ದೇವಳದಲ್ಲಿ ಜರಗುತ್ತಿರುವ ಸರಯೂ ಸಪ್ತಾಹದ ಸನ್ಮಾನ, ಬಯಲಾಟಗಳ ಸರಣಿಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
"ಚಾರ್ಲಿ ಚಾಪ್ಲಿನ್" ಖ್ಯಾತಿಯ ಹಾಸ್ಯಗಾರ ಸೀತಾರಾಂ ಕುಮಾರ್ ಕಟೀಲು ರವರು ತಮ್ಮ ತಿರುಗಾಟದ ಅನುಭವವನ್ನು ವಿವರಿಸುತ್ತಾ ಸಂಸ್ಥೆಗೆ ಶುಭ ಹಾರೈಸಿದರು. ಯೋಗಪಟು, ತುಳುಕೂಟದ ಉಪಾಧ್ಯಕ್ಷ ಜೆ.ವಿ. ಶೆಟ್ಟರನ್ನು ಯಕ್ಷ ಸರಯೂ ಬಿರುದಿತ್ತು ಸನ್ಮಾನಿಸಲಾಯಿತು.
"ಯಕ್ಷಗಾನ ಪ್ರೇಮಿಯಾದ ತನ್ನನ್ನು ಸಂಸ್ಥೆ ತಮ್ಮನ್ನು ಸನ್ಮಾನಿಸಿದ್ದು ಸಂತೋಷದ ವಿಚಾರ. ನಾನು ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಾ ನಿವೃತ್ತಿಯಾಗಿದ್ದರೂ ಪ್ರವೃತ್ತ ನಾಗಿ ಕಾಣಿಸಿಕೊಳ್ಳುವಲ್ಲಿ ಇದು ನನಗೆ ಸಹಕಾರಿಯಾಗಿದೆ. ಎಲ್ಲರಿಗೂ ಶುಭವಾಗಲಿ" ಎಂದು ಅವರು ನುಡಿದರು.
ಪ್ರಭಾಕರ ರಾವ್ ಪೇಜಾವರ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ರವಿ ಅಲೆವೂರಾಯ ವರ್ಕಾಡಿಯವರು ನಿರ್ವಹಿಸಿದರು. ಸುಧಾಕರ ರಾವ್ ಸ್ವಾಗತ ಮಾಡಿದರು. ಪ್ರತೀಕ್ ರಾವ್ ಪ್ರಾರ್ಥಿಸಿದರು. ನಿತ್ಯಶ್ರೀ ಪೂಜಾರಿ ಸನ್ಮಾನಪತ್ರ ವಾಚಿಸಿದರು. ಕೃತಿ ದೇವಾಡಿಗ ಧನ್ಯವಾದವಿತ್ತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ