ನಾಗಕನ್ನಿಕಾದಲ್ಲಿ "ಯಕ್ಷ ಪೂರ್ಣಿಮಾ"

Upayuktha
0


ಮಂಗಳೂರು: "ಯಕ್ಷಗಾನದಲ್ಲಿ ಇಂದು ಸ್ತ್ರೀ- ಪುರುಷ ಎಂಬ ಬೇಧವಿಲ್ಲದೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚಿಣ್ಣರೂ ಸಮ ಪ್ರಮಾಣದಲ್ಲಿ ಭಾಗವಹಿಸಿ ಕಲಾರಂಗವನ್ನು ಬೆಳಗುತ್ತಿದ್ದಾರೆ. ಪ್ರೇಕ್ಷಕರೂ ಅದನ್ನು ಅಷ್ಟೇೆ ಪ್ರಮಾಣದಲ್ಲಿ ಸ್ವೀಕರಿಸಿದ್ದಾರೆ. ಆ ಮೂಲಕವಾಗಿ ಮಕ್ಕಳೂ ಸಂಸ್ಕಾರಯುತರಾಗುತ್ತಾರೆ. ಸರಯೂ ತನ್ನ ರಜತ ಸಂಭ್ರಮದಲ್ಲಿ ವಿವಿಧ ಮಕ್ಕಳ ತಂಡಗಳನ್ನು ಆಹ್ವಾನಿಸಿ ಅವಕಾಶವಿತ್ತಿದ್ದು ಉಳಿದ ತಂಡಗಳಿಗೆ ಮಾದರಿಯಾಗಿದೆ" ಎ೦ದು ನಿವೃತ್ತ ಶಿಕ್ಷಕ ಸದಾಶಿವ ಅವರು ಹೇಳಿದರು.


ಅವರು ದೇರೆಬೈಲ್ ಕೊಂಚಾಡಿಯ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಸರಯೂ ಯಕ್ಷ ಪಕ್ಷ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಯಕ್ಷ ಪೂರ್ಣಿಮಾ ಯಕ್ಷಕಲಾ ಕೇಂದ್ರ ತಂಡ ಸುರತ್ಕಲ್ ತಂಡವನ್ನು ಗೌರವಿಸಲಾಯಿತು. ತಂಡದ ನಿರ್ದೇಶಕಿ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಪೂರ್ಣಿಮಾ ಯತೀಶ್ ರೈಯವರನ್ನು ಕಲಾ ಗೌರವ ನೀಡಿ ಅಭಿನಂದಿಸಲಾಯಿತು.


ಮುಖ್ಯ ಅತಿಥಿಗಳಾಗಿ ಹಿರಿಯ ಮದ್ಲೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ಆನಂದ ದೇವಾಡಿಗ, ವನಜಾಕ್ಷಮ್ಮ, ಆನ೦ದ ದೇವಾಡಿಗ, ಆನಂದ ಶೆಟ್ಟಿ ಹಾಗೂ ಸರಯೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top