ಆರೋಗ್ಯ: ರಕ್ತದ ಕ್ಯಾನ್ಸರ್‌ ನ ಲಕ್ಷಣಗಳನ್ನು ಅರಿಯುವುದು ಬಹಳ ಮುಖ್ಯ

Upayuktha
0


ಕ್ತದ ಕ್ಯಾನ್ಸರ್ ಬಹಳ ಸಾಮಾನ್ಯವಾಗುತ್ತಿದೆ. ವಿಶ್ವದಾದ್ಯಂತ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆದರೆ ಆಶ್ಚರ್ಯಕರ ವಿಷಯವೆಂದರೆ ರಕ್ತದ ಕ್ಯಾನ್ಸರ್ ಲಕ್ಷಣಗಳ ಕುರಿತು ಜಾಗೃತಿ ಬಹಳ ಕಡಿಮೆಯಿದೆ. ಇತ್ತೀಚಿಗೆ ನಡೆಸಿದ ಸಮೀಕ್ಷೆಗಳ ಪ್ರಕಾರ, 50 ಪ್ರತಿಶತಕ್ಕಿಂತ ಹೆಚ್ಚು ವಯಸ್ಕರು ರಕ್ತದ ಕ್ಯಾನ್ಸರ್‌ ನ ಒಂದೇ ಒಂದು ಲಕ್ಷಣವನ್ನೂ ಹೆಸರಿಸಿಲ್ಲ. ಈ ಜ್ಞಾನದ ಕೊರತೆಯಿಂದಾಗಿ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ವಿಳಂಬವಾಗಬಹುದು. ಕೆಲವೊಮ್ಮೆ ಗಂಭೀರ ಪರಿಣಾಮ ಉಂಟು ಮಾಡಬಹುದು.


ಜಾಗೃತಿಯ ಮಹತ್ವ 

ಲ್ಯುಕೇಮಿಯಾ, ಲಿಂಫೋಮಾ, ಮತ್ತು ಮೈಲೋಮಾ ಸೇರಿದಂತೆ ಪ್ರತಿವರ್ಷ ಸಾವಿರಾರು ಜನರನ್ನು ರಕ್ತದ ಕ್ಯಾನ್ಸರ್ ಬಾಧಿಸುತ್ತವೆ. ವಿಶ್ವದಾದ್ಯಂತ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು 10 ಪ್ರತಿಶತದಷ್ಟು ರಕ್ತದ ಕ್ಯಾನ್ಸರ್ ತೊಂದರೆ ನೀಡುತ್ತವೆ. ಇದರಿಂದ ಪ್ರತಿವರ್ಷ ಸಾವಿರಾರು ಸಾವುಗಳು ಉಂಟಾಗುತ್ತವೆ. ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಇದರ ಲಕ್ಷಣಗಳು ತೀರಾ ಸೂಕ್ಷ್ಮವಾಗಿರುತ್ತವೆ ಮತ್ತು ಇದರ ಲಕ್ಷಣಗಳನ್ನು ಸಾಮಾನ್ಯ ಕಾಯಿಲೆಗಳೆಂದು ಭಾವಿಸಬಹುದಾಗಿದೆ. ಇದರಿಂದಾಗಿ ಅನೇಕ ಪ್ರಕರಣಗಳು ತಡವಾಗಿ ಗುರುತಿಸಲ್ಪಡುತ್ತವೆ. ತಡವಾದಷ್ಟೂ ಚಿಕಿತ್ಸೆ ಹೆಚ್ಚು ಕಷ್ಟಕರವಾಗುತ್ತದೆ.


ತಪ್ಪಾಗಿ ಅರ್ಥೈಸಲಾಗುವ ಲಕ್ಷಣಗಳು

ರಕ್ತದ ಕ್ಯಾನ್ಸರ್‌ ನ ಲಕ್ಷಣಗಳ ಸಮಸ್ಯೆಯೆಂದರೆ ಬಹಳ ಸಲ ಅವು ಸಾಮಾನ್ಯ ಆರೋಗ್ಯ ಸಮಸ್ಯೆಗಳಂತೆ ಕಾಣುತ್ತವೆ. ರಕ್ತದ ಕ್ಯಾನ್ಸರ್ ನ ಸಾಮಾನ್ಯ ಲಕ್ಷಣಗಳು ಹೀಗಿರುತ್ತವೆ: 


● ನಿರಂತರ ಆಯಾಸ ಅಥವಾ ವೀಕ್ ನೆಸ್

● ವಿನಾಕಾರಣ ಗಾಯಗಳು ಅಥವಾ ರಕ್ತಸ್ರಾವ 

● ವಿನಾಕಾರಣ ಆಗಾಗ ಜ್ವರ ಅಥವಾ ಸೋಂಕುಗಳು 

● ಕುತ್ತಿಗೆ, ಕಂಕುಳು ಅಥವಾ ತೊಡೆಸಂದಿಯಲ್ಲಿ ಊದಿಕೊಂಡ ಗಂಟುಗಳು 

● ವಿನಾಕಾರಣ ತೂಕ ನಷ್ಟ 

● ಬಟ್ಟೆ ಅಥವಾ ಹಾಸಿಗೆಯನ್ನು ಒದ್ದೆ ಮಾಡುವಷ್ಟು ಬೆವರುವಿಕೆ


ಈ ಲಕ್ಷಣಗಳು ರಕ್ತದ ಕ್ಯಾನ್ಸರ್‌ ಗೆ ಮಾತ್ರ ಸೀಮಿತವಾಗಿಲ್ಲದ ಕಾರಣ ಅನೇಕರು ಇವುಗಳನ್ನು ನಿರ್ಲಕ್ಷಿಸುತ್ತಾರೆ ಅಥವಾ ಒತ್ತಡ, ಸೋಂಕುಗಳು ಅಥವಾ ಕಡಿಮೆ ಗಂಭೀರ ಸಮಸ್ಯೆಗಳೆಂದೆ ಭಾವಿಸುತ್ತಾರೆ. 


ಜಾಗೃತಿಯ ಕೊರತೆ

ರಕ್ತದ ಕ್ಯಾನ್ಸರ್‌ ನ ಪ್ರಮಾಣ ಹೆಚ್ಚಿರುವ ಹೊರತಾಗಿಯೂ, ಅನೇಕರಿಗೆ ಯಾವ ಲಕ್ಷಣಗಳನ್ನು ಗಮನಿಸಬೇಕೆಂದು ತಿಳಿದಿಲ್ಲ. ಕೆಲವು ಪ್ರದೇಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಯಸ್ಕರು ರಕ್ತದ ಕ್ಯಾನ್ಸರ್‌ ನ ಲಕ್ಷಣವನ್ನು ಗುರುತಿಸುವುದಿಲ್ಲ. ಹಾಗಾಗಿ ಜಾಗೃತಿಯ ಕೊರತೆಯಿಂದ ಅನೇಕ ರೋಗಿಗಳು ಆರಂಭಿಕ ಚಿಕಿತ್ಸೆ ಪಡೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಈ ಜ್ಞಾನದ ಕೊರತೆಯನ್ನು ನಿವಾರಿಸಿದರೆ ಹೆಚ್ಚು ಜನರನ್ನು ಉಳಿಸಬಹುದಾಗಿದೆ. 

ರಕ್ತದ ಕ್ಯಾನ್ಸರ್‌ ನ ಸೂಕ್ಷ್ಮ ಲಕ್ಷಣಗಳನ್ನು ಸ್ಪಷ್ಟವಾಗಿ ತಿಳಿಸುವ ಮತ್ತು ಜನರನ್ನು ಬೇಗನೆ ವೈದ್ಯರನ್ನು ಭೇಟಿಯಾಗಲು ಪ್ರೋತ್ಸಾಹಿಸುವ ಆರೋಗ್ಯ ಅಭಿಯಾನಗಳನ್ನು ನಡೆಸಬೇಕು. ಆಗ ಜೀವಗಳನ್ನು ಉಳಿಸಬಹುದು. ವೈದ್ಯರು ಮತ್ತು ದಾದಿಯರು ಸಾಮಾನ್ಯ ತಪಾಸಣೆಯ ಸಂದರ್ಭದಲ್ಲಿ ರೋಗಿಗಳಿಗೆ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ.


ರಕ್ತದ ಕ್ಯಾನ್ಸರ್ ನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಲು ಕಲಿಯುವುದರಿಂದ ಈ ವಿಚಾರದಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಬಹುದು. ವಿಶ್ವದಾದ್ಯಂತ ರಕ್ತದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾರ್ವಜನಿಕರ ಅರಿವಿನ ಕೊರತೆಯನ್ನು ನೀಗಿಸುವುದು ಪ್ರಮುಖ ಆದ್ಯತೆಯಾಗಬೇಕಿದೆ. 


- ಡಾ. ಶರತ್ ದಾಮೋದರ್, ಬೆಂಗಳೂರು

(ಲೇಖಕರು: ಮಜುಂದಾರ್ ಶಾ ವೈದ್ಯಕೀಯ ಕೇಂದ್ರದ ಅಂಕಾಲಜಿ ಸರ್ವಿಸಸ್ ಚೇರ್ ಮನ್ ಮತ್ತು ಕ್ಲಿನಿಕಲ್ ಡೈರೆಕ್ಟರ್ ಹಾಗೂ ನಾರಾಯಣ ಹೆಲ್ತ್ ಸಿಟಿಯ ಅಡಲ್ಟ್ ಹೆಮಟಾಲಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್, ಹೆಚ್ ಓ ಡಿ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top