ಈ ಪಾಕಿಸ್ತಾನವನ್ನು ಒಂದು ದೇಶವೆಂದು ಕರೆಯುವುದೇ ಅತ್ಯಂತ ನಾಚಿಕೆಯ ವಿಷಯ. ಈ ಪಾಕಿಸ್ತಾನ ಹುಟ್ಟುವಾಗಲೇ ಇದು ಬೇಕೊ ಬೇಡವೊ ಅನ್ನುವ ಒಂದು ತರದಲ್ಲಿಯೇ ಸಾಂದರ್ಭಿಕ ಪರಿಸ್ಥಿತಿಯಲ್ಲಿ ಹುಟ್ಟಿದ ಶಿಶು. ಈ ಮಗುವಿನ ಹೆಸರು ಕೂಡ ಇದಕ್ಕೆ ಅನ್ವರ್ಥವಾಗಿಯೇ ಹುಟ್ಟಿ ಕೊಂಡಿದೆ. "ಪಾಕಿ" ಅಂದರೆ ಅಲೆ ಮಾರಿಗಳು ಅನ್ನುವ ಅರ್ಥವೂ ಇದೆ. ಹಾಗಾಗಿಯೇ ಒಂದು ರೀತಿಯಲ್ಲಿ ಹುಟ್ಟುವಾಗಲೇ ಇದೊಂದು ಅನಾಥ ಶಿಶುವೆಂದರು ತಪ್ಪಾಗಲಾರದು. ಇದು ಜನಿಸುವಾಗಲೇ ಇದಕ್ಕೆ ಸರಿಯಾದ ಪೇೂಷಕರ ಆರೈಕೆಯು ಇರಲಿಲ್ಲ ಪ್ರೀತಿಯು ಇರಲಿಲ್ಲ. ಹಾಗಾಗಿ ಅದೊಂದು ಜಗತ್ತಿಗೆ ಸಮಸ್ಯಾತ್ಮಕ ಶಿಶುವಾಗಿಯೇ ಬೆಳೆದು ಬಂತು ಅನ್ನುವುದು ಇಡಿ ಜಗತ್ತಿಗೆ ಮನವರಿಕೆಯಾಗಿದೆ.
ಹುಟ್ಟಿದಾಗ ಪ್ರಜಾಪ್ರಭುತ್ವ ದೇಶವೆಂದು ನಾಮಕರಣ ಮಾಡಿದ್ದರು; ಸಂವಿಧಾನದ ಮಂತ್ರವನ್ನು ಪಠಿಸಿದ್ದರು. ಆದರೆ ಬೆಳೆದು ಬಂದ ದುಷ್ಟರ ಸಹವಾಸ ಪರಿಸರದಿಂದಾಗಿ ಮುಂದೆ ಭಯೇೂತ್ಪಾದಕ ಎಂಬ ಹಣೆಪಟ್ಟಿ ಕಟ್ಟಿಕೊಂಡೆ ಯೌವನಾವಸ್ಥೆಗೆ ಬರಬೇಕಾಯಿತು. ಇಂತಹ ದುಷ್ಟ ಪರಿಸರದಲ್ಲಿ ಬೆಳೆದು ಬಂದ ಈ ದೇಶಕ್ಕೆ ಭಯೋತ್ಪಾಕ ಅನ್ನುವ ಹಣೆಪಟ್ಟಿ ಕಟ್ಟಿಕೊಂಡು ಬದುಕಬೇಕಾದ ಕೀಳರಿಮೆಯ ದುಃಸ್ಥಿತಿ. ಇದು ಪಾಕಿಸ್ತಾನದ ಜಾತಕವನ್ನು ತೆರೆದು ಓದಿದವರಿಗೆ ಮೊದಲಾಗಿ ತಿಳಿಯುವ ಸತ್ಯ ಸಂಗತಿ.
ಈ ದೇಶ ಬೆಳೆದು ಬಂದ ತನ್ನ ಇಪ್ಪತ್ತೈದನೇ ವರುಷಕ್ಕೆ ತಾನು ಮಾಡಿಕೊಂಡ ಸ್ವಯಂ ಕೃತ ಅಪರಾಧದಿಂದಾಗಿ ತನ್ನ ಒಂದು ಭಾಗವನ್ನೆ ಕಳೆದುಕೊಳ್ಳ ಬೇಕಾದ ಸಂದಿಗ್ಧ ಪರಿಸ್ಥಿತಿ.
ಹಾಗಾಗಿಯೇ ಇರ ಬೇಕು ಭಯೋತ್ಪಾದನೆ ಎಂಬ ದರಿದ್ರಗುಣ ಇದರ ಗಭ೯ದಲ್ಲಿಯೇ ಧರಿಸಿಕೊಂಡು ಮುಂದುವರಿಯ ಬೇಕಾಯಿತು. ಇದರ ಜೊತೆಗೆ ಬಡತನ ಹಸಿವು ನಿರುದ್ಯೋಗ ಅನಕ್ಷರತೆ; ಇವೆಲ್ಲವೂ ಈ ಪಾಕಿಗಳನ್ನು ಪಾಪದ ಕೂಪಕ್ಕೆ ತಳ್ಳಿರುವುದಂತು ನಿಜ. ಹೆಸರಿಗೇನೊ ಸಂಸದೀಯ ಪ್ರಜಾಪ್ರಭುತ್ವ ಸರಕಾರ. ಯಾರು ಕೈಯಲ್ಲಿ ಹಿಡಿದು ಓದಲು ಮನಸ್ಸು ಬಾರದ ಒಂದು ಸಂವಿಧಾನವಿದೆಯಂತೆ?ಇದರ 75 ವರುಷಗಳ ರಾಜಕೀಯ ಇತಿಹಾಸ ನೇೂಡಿದಾಗ ತಿಳಿಯುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಈ ದೇಶದ ಒಡಲಲ್ಲಿ ಸಂಪೂರ್ಣವಾಗಿ ಸತ್ತು ಗಬ್ಬು ವಾಸನೆ ಹೊಡೆಯುತ್ತಿದೆ. ಪ್ರತಿ ಬಾರಿ ಸರ್ಕಾರ ಬದಲಾಗ ಬೇಕಾದರೆ ರಕ್ತಕ್ರಾಂತಿಯ ಮೂಲಕವೇ ಇನ್ನೊಬ್ಬ ಅಧಿಕಾರಕ್ಕೆ ಬರ ಬೇಕಾದ ಪರಿಸ್ಥಿತಿ. ಒಮ್ಮೆ ಪ್ರಧಾನಿ ಸರ್ಕಾರ ಇನ್ನೊಮ್ಮೆ ಮಿಲಿಟರಿ ಆಧಿಪತ್ಯ. ಮತ್ತೊಮ್ಮೆ ಅಧ್ಯಕ್ಷೀಯ ಸರ್ಕಾರ ಒಟ್ಟಿನಲ್ಲಿ ಅರಾಜಕತಾ ಸಾಮ್ರಾಜ್ಯ. ಮಾತ್ರವಲ್ಲ ಒಬ್ಬ ಅಧಿಕಾರಕ್ಕೆ ಬರ ಬೇಕಾದರೆ ಹಿಂದಿನವರನ್ನು ಹತ್ಯೆ ಮಾಡಿಯೊ ಜೈಲಿಗೆ ಅಟ್ಟಿಯೊ ತಪ್ಪಿದರೆ ದೇಶದಿಂದ ಗಡಿಪಾರು ಮಾಡಿಯೇ ಕುಚಿ೯ಯಲ್ಲಿ ಕೂರಬೇಕಾದ ದುಃಸ್ಥಿತಿ. ಇಂತಹದೊಂದು ದರಿದ್ರ ಪರಿಸ್ಥಿತಿ ವಿಶ್ವದ ಯಾವ ರಾಷ್ಟ್ರದಲ್ಲೂ ಕಾಣಲು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವ ಬಿಡಿ, ಕೊನೆಯ ಪಕ್ಷ ರಾಜಪ್ರಭುತ್ವವಾದರೂ ಕೂಡಾ ಇಲ್ಲ. ಒಟ್ಟಿನಲ್ಲಿ ವಿಶ್ವದಲ್ಲಿರುವ ಅನಾಗರಿಕತೆಯ ಅರಾಜಕತೆಯ ದೇಶಕ್ಕೊಂದು ಉದಾಹರಣೆ ಕೊಡುವುದಿದ್ದರೆ ಅದು ಪಾಕಿಸ್ತಾನವೇ ಸರಿ.
ಇಂತಹ ಒಂದು ಚರಿತ್ರಾಹೀನ ರಾಷ್ಟ್ರದೊಂದಿಗೆ ಸ್ನೇಹತನ ಕಟ್ಟಿಕೊಂಡಿರುವ ಚೀನಾವಾಗಲಿ ಅಮೇರಿಕವಾಗಲಿ ಅಥವಾ ವಿಶ್ವ ಸಂಸ್ಥೆಯ ನಿಲುವಾಗಲಿ ನಿಜಕ್ಕೂ ಅತ್ಯಂತ ನಾಚಿಕೆಗೇಡಿತನವೆಂದೇ ಭಾವಿಸಬೇಕು. ಪಾಕಿಸ್ತಾನದ ಜೊತೆ ಗಳಸ್ಯ ಕಂಠಸ್ಯ ಸ್ನೇಹಿತನ ಬೆಳೆಸಿಕೊಂಡಿರುವ ಮುಖ್ಯ ಉದ್ದೇಶವೆಂದರೆ ಈ ಪಾಪಿಸ್ಥಾನ ಅನ್ನುವ ದೇಶ ಯಾವತ್ತು ಸತ್ತು ಬೀಳುತ್ತೆ ಅಂದೇ ಇದರ ಭೂ ಭಾಗ ಕಬಳಿಸಬಹುದೆಂಬ ಒಂದೇ ಒಂದು ಆಸೆ ಇರಬಹುದು. ಈ ಒಂದು ಪರಿಸ್ಥಿತಿಗೆ ಬರಲು ಪಾಕಿಸ್ತಾನಕ್ಕೆ ಇನ್ನು ಹೆಚ್ಚಿನ ಸಮಯ ಬೇಕಾಗಿಲ್ಲ ಅನ್ನುವುದು ಪಾಕಿಗಳ ಸದ್ಯದ ಆಥಿ೯ಕ ರಾಜಕೀಯ ಪರಿಸ್ಥಿತಿ ನೇೂಡುವಾಗಲೇ ವೇದ್ಯವಾಗುತ್ತದೆ.
ಒಂದಂತು ನಿಜ ಇಂತಹ ದಾರಿದ್ರ್ಯ ದೇಶವನ್ನೆ ನಮ್ಮ ಮಗ್ಗುಲಲ್ಲಿ ಇಟ್ಟು ಕೊಂಡು ಮಲಗಬೇಕಾದ ಸ್ಥಿತಿ ನಮಗೆ ಬಂದಿದೆ ನೇೂಡಿ, ಇದು ನಮ್ಮ ಗ್ರಹಚಾರವೆಂದೇ ಹೇಳ ಬೇಕು. ಅಲ್ವೇ?
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ