ಆಧ್ಯಾತ್ಮಿಕ ದೃಷ್ಟಿಯಿಂದ ಕುಂಭಮೇಳದ ಮಹತ್ವ

Upayuktha
0




ಕುಂಭಮೇಳ ವಿಶ್ವದ ಅತಿದೊಡ್ಡ ಮತ್ತು ಭವ್ಯ ಧಾರ್ಮಿಕ ಆಯೋಜನೆಯಲ್ಲಿ ಒಂದಾಗಿದೆ, ಅದು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಮೃದ್ಧಿಯ ಪ್ರತೀಕವಾಗಿದೆ. ಇದರ ಆಯೋಜನೆ ಭಾರತದ ನಾಲ್ಕು ಪವಿತ್ರ ಸ್ಥಳಗಳಲ್ಲಿ - ಪ್ರಯಾಗರಾಜ, ಹರಿದ್ವಾರ, ಉಜ್ಜೈನಿ, ಮತ್ತು ನಾಸಿಕನಲ್ಲಿ 12 ವರ್ಷಕ್ಕೊಮ್ಮೆ ನಡೆಯುತ್ತದೆ. 


ಪ್ರತಿ 6 ವರ್ಷದಲ್ಲಿ ಅರ್ಧಕುಂಭದ ಆಯೋಜನೆ ಕೂಡ ಮಾಡಲಾಗುತ್ತದೆ. ಈ ಮೇಳ ಭಾರತೀಯ ದರ್ಶನ, ಧಾರ್ಮಿಕ ಪರಂಪರೆ ಮತ್ತು ಆಧ್ಯಾತ್ಮಿಕ ಚಿಂತನೆಯ ಮಹತ್ವಪೂರ್ಣ ಕೇಂದ್ರವಾಗಿದೆ. ಇದು ಕೇವಲ ಹಿಂದೂ ಧರ್ಮವನ್ನು ಸಮೃದ್ಧಗೊಳಿಸುವುದಷ್ಟೇ ಅಲ್ಲದೆ ಶ್ರದ್ಧಾಳುಗಳಿಗೆ ಆನಂದ ಮತ್ತು ಆಂತರಿಕ ಶಾಂತಿ ನೀಡುತ್ತದೆ.


ಪವಿತ್ರ ಸ್ನಾನದ ಮಹತ್ವ 

ಕುಂಭಮೇಳದ ಈ ಮುಖ್ಯ ಆಕರ್ಷಣೆ ಗಂಗಾ, ಯಮುನಾ, ಕ್ಷಿಪ್ರಾ ಮತ್ತು ಗೋದಾವರಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದಾಗಿದೆ. ಈ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪಗಳು ನಾಶವಾಗುತ್ತದೆ. ಎಂದು ನಂಬಿಕೆ ಇದೆ ಮತ್ತು ಆತ್ಮಶುದ್ಧಿಯೂ ಆಗುತ್ತದೆ. ಇದು ಮಾನಸಿಕ ಶಾಂತಿಯ ಸ್ರೋತವೂ ಆಗಿದೆ.


 ಮೋಕ್ಷ ಪ್ರಾಪ್ತಿ 

ಧಾರ್ಮಿಕ ಮಾನ್ಯತೆಯ ಪ್ರಕಾರ ಕುಂಭದ ಸಮಯದಲ್ಲಿ ಪವಿತ್ರ ಸ್ಥಳಗಳಲ್ಲಿ ಸ್ನಾನ ಇದು ಮೋಕ್ಷ ಪ್ರಾಪ್ತಿಯಾಗಿದೆ. ಇದು ಜನ್ಮ ಮತ್ತು ಮೃತ್ಯುವಿನ ಚಕ್ರದಿಂದ ಮುಕ್ತಿಯ ಮಾರ್ಗ ಪ್ರಶಸ್ತಗೊಳಿಸುತ್ತದೆ.


 ಆಧ್ಯಾತ್ಮಿಕ ಜ್ಞಾನದ ಆದಾನ ಪ್ರದಾನ 

ಕುಂಭಮೇಳ ಸಂತರು, ಮಹಾತ್ಮರು ಮತ್ತು ಯೋಗಿಗಳಿಗಾಗಿ ಒಂದು ವೇದಿಕೆಯಾಗಿದೆ, ಅಲ್ಲಿ ಅವರು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಆದಾನ ಪ್ರದಾನ ಮಾಡುತ್ತಾರೆ. ಧ್ಯಾನ, ಯೋಗ, ಪ್ರವಚನ ಮತ್ತು ಧಾರ್ಮಿಕ ಅನುಷ್ಠಾನಗಳಿಂದ ಈ ಮೇಳ ಆಧ್ಯಾತ್ಮಿಕ ಜಾಗೃತಿಗೆ ಪ್ರೇರಣೆ ನೀಡುತ್ತದೆ.


 ಶ್ರದ್ಧೆ ದೃಢಗೊಳಿಸುವ ಮೇಳ

ಇದರ ಆಯೋಜನೆ ಶ್ರದ್ಧೆವುಳ್ಳವರಿಗೆ ಧರ್ಮ ಮತ್ತು ಶ್ರದ್ಧೆಯ ಕಡೆಗೆ ಮತ್ತೆ ಮುಂದೆ ಸಾಗಲು ಒಂದು ಅವಕಾಶ ಪ್ರದಾನಿಸುತ್ತದೆ. ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅನುಭವ ನೀಡುತ್ತದೆ. ಇದು ಶ್ರದ್ಧಾಳುಗಳ ಶ್ರದ್ಧೆಯನ್ನು ದೃಢಗೊಳಿಸುವಲ್ಲಿ ಸಹಾಯ ಮಾಡುತ್ತದೆ.


 ಚೈತನ್ಯ ಮತ್ತು ಸಾಮೂಹಿಕ ಐಕ್ಯತೆಯ ಪ್ರತೀಕ 

ಕುಂಭಮೇಳ ಲಕ್ಷಾಂತರ ಶ್ರದ್ಧಾಳುಗಳನ್ನು ಒಗ್ಗೂಡಿಸುವ ಪ್ರತೀಕವಾಗಿದೆ. ಅದು ಐಕ್ಯತೆ, ಸೌಹಾರ್ದತೆ ಮತ್ತು ಶಾಂತಿಯ ಸಂದೇಶ ನೀಡುತ್ತದೆ. ಇದರ ಆಯೋಜನೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಐಕ್ಯತೆಯನ್ನು ಗಟ್ಟಿಗೊಳಿಸುತ್ತದೆ. ಕುಂಭಮೇಳದ ಪಾವಿತ್ರ್ಯತೆಯಿಂದ ಎಲ್ಲೆಡೆ ಚೈತನ್ಯದ ಪ್ರಸಾರ ಮಾಡುತ್ತದೆ.


 ಪೌರಾಣಿಕ ದೃಷ್ಟಿಯಿಂದ ಕುಂಭಮೇಳದ ಕಥೆ ಸಮುದ್ರ ಮಂಥನಕ್ಕೆ ಸಂಬಂಧ ಪಟ್ಟದಾಗಿದೆ. ಅಮೃತ ಕಲಶದಿಂದ ಅಮೃತದ ಕೆಲವು ಹನಿಗಳು ಪ್ರಯಾಗರಾಜ, ಹರಿದ್ವಾರ, ಉಜ್ಜೈನಿ, ನಾಸಿಕದಲ್ಲಿ ಬಿದ್ದಿದ್ದವು ಎಂದು ನಂಬಿಕೆ ಇದೆ. ಆದಕಾರಣ ಈ ಸ್ಥಳಗಳನ್ನು ಪವಿತ್ರವೆಂದು ಇಲ್ಲಿ ಕುಂಭಮೇಳದ ಆಯೋಜನೆ ಮಾಡಲಾಗುತ್ತದೆ.


 ಧರ್ಮಾಚರಣೆ ಕಲಿಸುತ್ತದೆ 

ಕುಂಭಮೇಳದಲ್ಲಿ ತಪಸ್ಸು, ವ್ರತ, ಧ್ಯಾನ ಮತ್ತು ಸಾಧನೆಗಳಂತಹ ಆಧ್ಯಾತ್ಮಿಕ ಶಿಸ್ತಿನ ಪಾಲನೆ ಆಗುತ್ತದೆ. ಇದನ್ನು ಧರ್ಮಾಚರಣೆ ಎನ್ನುತ್ತಾರೆ. ಆತ್ಮಶುದ್ಧಿ ಮತ್ತು ಆತ್ಮದ ಉನ್ನತಿಗೆ ಮಾರ್ಗ ಎಂಬ ನಂಬಿಕೆ ಇದೆ.


 ಗಂಗಾ ಸ್ನಾನ ಮತ್ತು ಪಾಪಗಳ ನಾಶ 

ಗಂಗೆಗೆ "ಪಾಪನಾಶಿನಿ" ಎಂದು ಹೇಳಲಾಗಿದೆ. ಇದರಲ್ಲಿ ಸ್ನಾನ ಮಾಡುವುದರಿಂದ ಕೇವಲ ದೇಹ ಅಷ್ಟೇ ಅಲ್ಲದೆ ಆತ್ಮಶುದ್ಧಿಯೂ ಆಗುತ್ತದೆ. ಇದು ಮಾನಸಿಕ ಶಾಂತಿ ಪ್ರದಾನಿಸುತ್ತದೆ ಮತ್ತು ರೋಗಗಳನ್ನು ಸಹ ದೂರಗೊಳಿಸುತ್ತದೆ.


 ಆಧ್ಯಾತ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯ ಪ್ರತೀಕ 

ಕುಂಭಮೇಳ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಿದೆ. ಇದರ ಆಯೋಜನೆ ಶ್ರದ್ಧಾಳುಗಳಿಗೆ ಆತ್ಮ ಚಿಂತನೆ ಮತ್ತು ಮಾನವ ಜೀವನದ ಉದ್ದೇಶವನ್ನು ತಿಳಿಯಲು ಪ್ರೇರೇಪಿಸುತ್ತದೆ .


 ಜಿಜ್ಞಾಸುಗಳು ಮತ್ತು ಧರ್ಮಪ್ರೇಮಿಗಳಿಗೆ ಮನವಿ 

ಹಿಂದೂ ಜನಜಾಗೃತಿ ಸಮಿತಿ ಕಳೆದ 20 ವರ್ಷಗಳಿಂದ ಕುಂಭಮೇಳದಲ್ಲಿ ಹಿಂದೂ ರಾಷ್ಟ್ರ ಜಾಗೃತಿಯ ಕಾರ್ಯ ಮಾಡುತ್ತಿದೆ. ಈ ವರ್ಷವೂ ಸಮಿತಿ ಬೇರೆ ಬೇರೆ ಪ್ರದರ್ಶನ ಮತ್ತು ಸಭೆಗಳ ಮಾಧ್ಯಮದಿಂದ ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯ ಮಾಡಲಿದೆ.

ಧರ್ಮಪ್ರೇಮಿಗಳು ಈ ಅವಕಾಶದ ಲಾಭ ಪಡೆದು ಧರ್ಮ ಮತ್ತು ರಾಷ್ಟ್ರದ ಸೇವೆಯಲ್ಲಿ ತಮ್ಮ ತಮ್ಮ  ಯೋಗದಾನ ನೀಡಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top