ವಾಸ್ಕೋ: ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಅಕ್ಷರಜ್ಯೋತಿ ಯಾತ್ರೆ

Upayuktha
0

 



ಪಣಜಿ (ವಾಸ್ಕೊ): ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಅಕ್ಷರಜ್ಯೋತಿ ಯಾತ್ರೆ ಗೋವಾದ ವಾಸ್ಕೊ ಶ್ರೀ ಯಲ್ಲಾಲಿಂಗೆಶ್ವರ ಶಾರದಾ ಮುಂದಿರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿಷ್ಠಾನದ ಅಧ್ಯಕ್ಷರದ ಬಸವ ಕುಮಾರ ಪಾಟೀಲರವರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭೋದನೆ ಮಾಡಿದರು ಆದರ್ಶ ವಿದ್ಯಾರ್ಥಿಗಳಾಗಲು ಏನು ಮಾಡಬೇಕು...? ವಿದ್ಯಾರ್ಥಿಗಳು ಹೇಗೆ ದೇಶಾಭಿಮಾನ ಹೊಂದಬೇಕು ಮತ್ತು ಹೇಗೆ ಅಭ್ಯಾಸಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ ಎಂದು ವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಜೀವನ ಯಶಸ್ವಿಯಾದಾಗ ಮಾತ್ರ  ಜೀವನದಲ್ಲಿ ಗುರಿತಲುಪಲು ಸಾಧ್ಯ ಎಂದರು.


ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ಸುನಿತಾ ಸುಕುಮಾರಿ ಮಾತನಾಡಿ, ಇಂತಹ ಕಾರ್ಯಕ್ರಮದ ಅವಶ್ಯಕತೆ ನಮ್ಮ ವಿದ್ಯಾರ್ಥಿಗಳಿಗೆ ಇತ್ತು ಇಂತಹ ಸಂದರ್ಭದಲ್ಲಿ ಅಕ್ಷರ ಜ್ಯೊತಿ ಯಾತ್ರೆ ನಮ್ಮ ಶಾಲೆಗೆ ಬಂದಿದ್ದು ಬಹಳ ಖುಷಿಯಾಗಿದೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ ಎಂದರು.


ಕನ್ನಡ ಸಂಘ ಜುವಾರಿ ನಗರದ ಅಧ್ಯಕ್ಷ ಶಿವಾನಂದ ಬಿಂಗಿ ಮಾತನಾಡಿ- ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲು ಇಂತಹ ಕಾರ್ಯಾಗಾರ ಮಾಡುತ್ತಿರುವದರಿಂದ ವಿದ್ಯಾರ್ಥಿಗಳ ಮನೋಬಲ ಹೆಚ್ಚುತ್ತದೆ ಮತ್ತು ಮುಂಬರುವ ಪರೀಕ್ಷೆಗಳಿಗೆ ಮಾನಸಿಕವಾಗಿ ಸಿದ್ದಗೊಳ್ಳಲು ಕಾರ್ಯಕ್ರಮ ಸ್ಪೂರ್ತಿಯಾಗಿತ್ತು ಎಂದರು.


ಇಂತಹ ಸೇವೆ ನಿಡುತ್ತಿರುವ ಬಸವಕುಮಾರ ಪಾಟೀಲರ ಸೇವೆ ಅಗಾಧ. ಗೋವಾದಲ್ಲಿನ ಕನ್ನಡ ಶಾಲೆ ಗಳಲ್ಲಿನ ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆದು ಉಜ್ವಲ ಭವಿಷ್ಯ ಹೊಂದಲಿ. ಒಳ್ಳೆಯ ಕಲಿಕಾ ಮಾರ್ಗದಿಂದ ಮಾತ್ರ ಒಳ್ಳೆಯ ಆದರ್ಶ ವಿದ್ಯಾರ್ಥಿ ನಿರ್ಮಾಣ ಮಾಡಲು ಸಾಧ್ಯ ಎಂದರು. ಇದೇ ವೇಳೆ ಕನ್ನಡ ಉಳಿವಿಗಾಗಿ ಕನ್ನಡ ಬೆಳೆಸಲು ಶ್ರಮಿಸುತ್ತಿರವ ಶಿಕ್ಷಕರಿಗೆ ಧನ್ಯವಾದ ತಿಳಿಸಿದರು.


ಈ ಸಂದರ್ಭದಲ್ಲಿ ಕನ್ನಡ ಶಾಲಾ ಹಿರಿಯ ಶಿಕ್ಷಕ ವಿ.ಟಿ ಅರಬೆಂಚಿ, ಕನ್ನಡ ಸಂಘ ಜುವ ನಗರದ ಕಾರ್ಯದರ್ಶಿ ದಾವಲ್ ಸಾಬ್ ನದಾಫ್, ಕನ್ನಡ ಸಂಘದ ಸಹ ಕಾರ್ಯದರ್ಶಿ ಸಿದ್ಧನಗೌಡ ಗೌಡ ಗೌಡರ ಮತ್ತು ಎಸ್ ಟಿ ಮ್ಯಾಗೇರಿ, ಉದಯ್ ಕುಮಾರ್ ಭಗವತಿ, ಶಿಕ್ಷಕಿ ವಿದ್ಯಾ, ಶಿವಾನಿ, ಶ್ರೀಮತಿ ಗೌಡರ್, ಮತ್ತು ಮಲ್ಲಿಕಾರ್ಜುನ್ ನರಹಟ್ಟಿ ಉಪಸ್ಥಿತ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top