ಲಕ್ಷದೀಪೋತ್ಸವದಲ್ಲಿ 'ಮಹಾನ್ ಬುದ್ಧ' ನೃತ್ಯನಾಟಕ

Upayuktha
0

 


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಮಂಗಳವಾರ ವಸ್ತು ಪ್ರದರ್ಶನ ಮಂಟಪದಲ್ಲಿ ‘ಮಹಾನ್ ಬುದ್ಧ’ ಡ್ಯಾನ್ಸ್ ಡ್ರಾಮಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ‘ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ' ದ ಕಲಾವಿದರು ಭಗವಾನ್ ಬುದ್ಧನ ಜೀವನ ಚರಿತ್ರೆಯ ರೂಪಕವನ್ನು ಪ್ರಸ್ತುತ ಪಡಿಸಿದರು. 


ಎ ವಿ ಸತ್ಯನಾರಾಯಣ ನಿರ್ದೇಶನದಲ್ಲಿ ಮೂಡಿಬಂದ ‘ಮಹಾನ್ ಬುದ್ಧ'  ಡ್ಯಾನ್ಸ್ ಡ್ರಾಮಾ ರಾಜಕುಮಾರ ಸಿದ್ಧಾರ್ಥ ಗೌತಮಬುದ್ಧನಾಗಿ ಪರಿವರ್ತನೆಯಾಗುವ ಪ್ರಸಂಗವನ್ನು ಒಳಗೊಂಡಿತ್ತು. ಗೌತಮಬುದ್ಧ ಜೀವನಾಧಾರಿತ ಈ ನೃತ್ಯ ನಾಟಕ ನೋಡುಗರನ್ನು ಮನಸೂರೆಗೊಳಿಸಿತು.


ಲುಂಬಿನಿಯಲ್ಲಿ ಜನಿಸಿದ ಸಿದ್ಧಾರ್ಥ ಅರಮನೆಯ ರಾಜವೈಭೋಗ ಹಾಗೂ ರಾಜಪಟ್ಟ ಹೀಗೆ ಲೌಕಿಕ ಆಡಂಬರವನ್ನು ತೊರೆದು ಜ್ಞಾನದೆಡೆಗೆ ಸಾಗುವ ಪಯಣವನ್ನು ಅತ್ಯಂತ ಮನೋಹರವಾಗಿ ಪ್ರಸ್ತುತ ಪಡಿಸಿದರು.ರಾಗ, ತಾಳ, ಭಾವ, ನಿರೂಪಣೆ, ನೃತ್ಯ, ಕಲಾವಿದರ ನಟನೆ ಈ ನೃತ್ಯನಾಟಕದ ಮೆರುಗು ಹೆಚ್ಚಿಸಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top