ಮಣಿಪಾಲ: ಅಂತರಾಷ್ಟ್ರೀಯ ಖ್ಯಾತಿಯ ಮಣಿಪಾಲದಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸರ್ಜಿಕಲ್ ಸಾಮಗ್ರಿಗಳು ಸಿಗುತ್ತಿರುವುದು ಅಭಿನಂದನೆಯ ಎಂದು ಡಾ. ಟಿ ಎಂ ಎ ಪೈ ಫೌಂಡೇಶನ್ ಮಣಿಪಾಲ ಅಧ್ಯಕ್ಷರಾದ ಟಿ ಅಶೋಕ್ ಪೈ ಹೇಳಿದರು.
ಅವರು ಮಣಿಪಾಲದ ಗಿರಿಜಾ ಸರ್ಜಿಕಲ್ ನೂತನ ಶಾಖೆಯನ್ನು ನ.10 ರಂದು ಉದ್ಘಾಟಿಸಿ ಮಾತನಾಡಿದರು. ಮಣಿಪಾಲ ಶಿಕ್ಷಣ ಕೇಂದ್ರದ ಹಬ್ ಆಗಲು ಈ ರೀತಿಯ ಸಂಸ್ಥೆಗಳು ಕೂಡ ಕೊಡುಗೆ ನೀಡಿವೆ ಎಂದರು.
ವೇದಿಕೆಯಲ್ಲಿ ಉಜ್ವಲ ಡೆವಲಪರ್ಸ್ ನ ಪುರುಷೋತ್ತಮ ಪಿ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗ, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಉಡುಪಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಎಸೋಸಿಯೇಷನ್ ಅಧ್ಯಕ್ಷ ಎ ರಮೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು ಸಂಸ್ಥೆಯ ಮುಖ್ಯಸ್ಥರಾದ ರವೀಂದ್ರ ಶೆಟ್ಟಿ ಸ್ವಾಗತಿಸಿದರು ಸುರೇಖಾ ಶೆಟ್ಟಿ ಹರೀಶ್ ಕುಮಾರ್ ಮುಂತಾದವರಿದ್ದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು.