
ಮಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ, ಚಳ್ಳಕೆರೆ ಇಲ್ಲಿ ಸಹ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಅವರು ಮಂಡಿಸಿದ ʼಸಿಂಥೆಸಿಸ್ ಆಂಡ್ ಕೆಟಾಲಿಟಿಕ್ ಆಕ್ಟಿವಿಟೀಸ್ ಆಫ್ ಪೆಲೆಡಿಯಂ ಅಯಾನ್ ಡೋಪ್ಡ್ ಟೈಟಾನಿಯಂ ಆಕ್ಸೈಡ್ ಬೇಸ್ಡ್ ಕೆಟಲಿಸ್ಟ್: ಎಕ್ಸ್ಪೆರಿಮೆಂಟಲ್ ಆಂಡ್ ಡೆನ್ಸಿಟಿ ಫಂಕ್ಷನಲ್ ಥಿಯರೆಟಿಕಲ್ ಸ್ಟಡೀಸ್ʼ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ (ಪಿಎಚ್ಡಿ) ಪದವಿ ನೀಡಿ ಗೌರವಿಸಿದೆ.
ಇವರು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ಕೆ ಎಂ ಉಷಾ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಪ್ರಸನ್ನ ಅವರು ಮೂಲತಃ ಬಂಟ್ವಾಳ ತಾಲೂಕಿನ ಬಿಜೋಡಿಯ ಬಾಬು ಅಮೀನ್ ಮತ್ತು ಸಂಧು ದಂಪತಿಯ ಸುಪುತ್ರ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ