ಪಣಜಿ: ವಾಸ್ಕೊ-ಸೊಲ್ಲಾಪುರ ರೈಲು ಓಡಾಟ ಮತ್ತೆ ಪುನರಾರಂಭಿಸಲಾಗುವುದು. ಇದು ಗೋವಾ ಕನ್ನಡಿಗರ ಬಹುದಿನಗಳ ಬೇಡಿಕೆಯಾಗಿದೆ. ಇದನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಅಂತೆಯೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರವೀಣಕುಮಾರ್ ಶಟ್ಟಿ ನುಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ, ಗೋವಾ ರಾಜ್ಯ ಘಟಕ ದ ವತಿಯಿಂದ ಗೋವಾದ ವಾಸ್ಕೋದ ರವೀಂದ್ರ ಭವನದಲ್ಲಿ- ಕನ್ನಡ ಸಾಂಸ್ಕೃ ತಿಕ ಕಾಯಕ್ರಮ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕನ್ನಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಗೋವಾ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬದ್ಧವಾಗಿದೆ. ಗೋವಾದಲ್ಲಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯಿದೆ. ಈ ಮೂಲಕ ಗೋವಾ ಕನ್ನಡಿಗರ ಸಮಸ್ಯೆಗೆ ಸದಾ ಸ್ಫಂಧಿಸಲಾಗುತ್ತಿದೆ ಎಂದು ಪ್ರವೀಣಕುಮಾರ್ ಶೆಟ್ಟಿ ನುಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ್ ಮರದ್ ಮಾತನಾಡಿ-ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಪರಿಶೀಲನೆ ಮಾಡಿದ್ದೇವೆ, ಶೀಘ್ರವೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುತ್ತೇವೆ. ಕೇಂದ್ರ ರೈಲ್ವೆ ಇಲಾಖೆಯ ರಾಜ್ಯಸಚಿವ ವಿ. ಸೋಮಣ್ಣ ರವರ ಬಳಿ ವಾಸ್ಕೊ-ಸೊಲ್ಲಾಪುರ ರೈಲು ಓಡಾಟ ಆರಂಭಿಸುವಂತೆ ಮನವಿ ಮಾಡುವುದಾಗಿ ನುಡಿದರು.
ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಮಾತನಾಡಿ- ವಾಸ್ಕೊ-ಸಿಂಧಗಿ ಬಸ್ ಓಡಾಟ ಬಂದ್ ಆಗಿತ್ತು. ಸತತ ಹೋರಾಟದ ಫಲವಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಪ್ರವೀಣಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಈ ಬಸ್ ಓಡಾಟ ಪುನರಾರೆಂಭಗೊಂಡಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ವಾಸ್ಕೊ- ಸೊಲ್ಲಾಪುರ ರೈಲು ಓಡಾಟ ಆರಂಭಿಸುವ ಮೂಲಕ ಗೋವಾ ಕನ್ನಡಿಗರ ಬೇಡಿಕೆ ಪೂರ್ಣಗೊಳಿಸು ತ್ತೇವೆ. ಈ ರೈಲು ಓಡಾಟಕ್ಕೆ ರಾಜ್ಯಸಭಾ ಸದಸ್ಯರಾದ ಸದಾನಂದ ತಾನಾವಡೆ ಹಾಗೂ ಗೋವಾ ಸಾರಿಗೆ ಸಚಿವ ಮಾವಿನ್ ಗುದಿನ್ಹೊ, ಸಚಿವ ಸಂಕಲ್ಪ ಅಮೋಣಕರ್, ದಾಜಿ ಸಾಲ್ಕರ್ ರವರು ಇದಕ್ಕೆ ತಮ್ಮ ಅಗತ್ಯ ಪ್ರಯತ್ನ ನಡೆಸುವುದಾಗಿಯೂ ಭರವಸೆ ನೀಡಿದ್ಸಾರೆ ಎಂದರು.
ರಾಜ್ಯಸಭಾ ಸದಸ್ಯ ಸದಾನಂದ ಶೇಟ್ ತಾನಾವಾಡೆ, ಗೋವಾ ರಾಜ್ಯ ಸಾರಿಗೆ ಸಚಿವ ಮಾವಿನ್ ಗುದಿನ್ಹೊ, ಶಾಸಕ ಸಂಕಲ್ಪ ಅಮೋಣಕರ್, ವಾಸ್ಕೊ ಶಾಸಕ ಕೃಷ್ಣಾ(ದಾಜಿ) ಸಾಳಕರ, ಗಿರೀಶ ಬೋರಕರ, ನಗರಸಭೆ ಅಧ್ಯಕ್ಷರು, ಎಂ.ಎಂ.ಸಿ ವಾಸೊ, ಪ್ರಕಾಶ್ ಮತ್ತೀಹಳ್ಳಿ, ಕಾರ್ಯದರ್ಶಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇತರೆ ಕನ್ನಡ ಪರ ಸಂಘ/ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು. ಕನ್ನಡ ಸಾಂಸ್ಕøತಿಕ ಕಾರ್ಯಕ್ರಮಗಳು, ಜನಪದ ನೃತ್ಯ, ಕನ್ನಡ ಗೀತೆಗಳ ಕಾರ್ಯಕ್ರಮ ಜರುಗಿದವು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ