ಮೂಡುಬಿದಿರೆಯಲ್ಲಿ ಬಹುಭಾಷಾ ಕವಿಗೋಷ್ಠಿ

Upayuktha
0

ಮಂಗಳೂರು: ಖ್ಯಾತ ಪತ್ರಕರ್ತರಾಗಿದ್ದ ವಕೀಲ ವೇಣುಗೋಪಾಲ್ ಮತ್ತು ಡಾ| ಶೇಖರ ಅಜೆಕಾರು ಇವರುಗಳ ಸಂಸ್ಮರಣ ಕಾರ್ಯಕ್ರಮವನ್ನೊಳ ಗೊಂಡಂತೆ ಬಹುಭಾಷಾ ಕವಿಗೋಷ್ಢಿ ಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ ಪ್ರೆಸ್ ಕ್ಲಬ್ (ರಿ) ವತಿಯಿಂದ ಅಕ್ಡೋಬರ್ 25 ರಂದು ಸ್ಥಳೀಯ ಸಮಾಜ ಮಂದಿರದಲ್ಲಿ ನಡೆಸಲಾಯಿತು.


ಪತ್ರಕರ್ತೆ ಪ್ರೇಮಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಖ್ಯಾತ ಮಾಜಿ ಸಚಿವ ಅಭಯಚಂದ್ರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು. 


ಅವರು ಮಾತನಾಡುತ್ತಾ ಬಹುಮುಖ ಪ್ರತಿಭೆಯ ಡಾ| ಶೇಖರ ಅಜೆಕಾರು ವಿಶೇಷವಾಗಿ ಮೂಡುಬಿದಿರೆಯಲ್ಲಿ ಹಲವು‌ಕಾಲ ನೆಲಸಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದಂತಹ ಹಲವಾರು ವಿಭಿನ್ನ ಮಾದರಿಯ ಕಾರ್ಯಕ್ರಮದ ರೂವಾರಿಗಳಾಗಿದ್ದು ಹಲವಾರು ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿದ್ದರು ಹಾಗೂ ವಕೀಲರೂ ಆಗಿದ್ದ ವೇಣುಗೋಪಾಲರ ಶ್ರಮದ ಫಲವಾಗಿ ಸ್ವತಂತ್ರ ಪತ್ರಕರ್ತರ ಕೊಠಡಿ ಸಹ ಲಭ್ಯವಾಯಿತು ಎಂದರು.


ನಂತರ ವಿಜಯಕರ್ನಾಟಕದ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿಯವರು ಮಾಧ್ಯಮ ಮತ್ತು ವಿಶ್ವಾಸಾರ್ಹತೆ ಎಂಬ ವಿಷಯದ ಮೇಲೆ ಮಾತನಾಡುತ್ತಾ ಜಾಲತಾಣಗಳ ಮತ್ತು ಯಂತ್ರ ಮಾದ್ಯಮಗಳ ಪೈಪೋಟಿಯ ಮಧ್ಯೆಯೂ ಇಂದಿಗೂ ಪ್ರತಿಶತ ತೊಂಭತ್ತರಷ್ಟು ನಂಬುಗೆಗೆ ಪಾತ್ರವಾಗಿ ಪತ್ರಿಕಾ ಮಾಧ್ಯಮವೇ ಇದೆ ಎಂದರು.


ಖ್ಯಾತ ನ್ಯಾಯವಾದಿ ಬಾಹುಬಲಿ ಪ್ರಸಾದ್ ರವರು ವಕೀಲ ವೇಣುಗೋಪಾಲರ ಸಂಸ್ಮರಣೆ ಮಾಡುತ್ತಾ ಅವರ ಪತ್ರಿಕಾ ಪ್ರೇಮ ಹಾಗೂ ನ್ಯಾಯಾಲಯದಲ್ಲಿ ಸಹ ಹಲವಾರು ತೀರ್ಪುಗಳ ಬಗೆಗೆ ಅವರು ತೋರಿಸುತ್ತಿದ್ದ ಒಲವು ಹಾಗೂ ಶ್ರದ್ಧೆಗಳನ್ಮು ಉದಾಹರಣೆ ಸಹಿತ ವಿವರಿಸಿದರು.


ಮೂಡಬಿದಿರೆ ಕ.ಸಾ.ಪ ಕಾರ್ಯದರ್ಶಿ ಸದಾನಂದ ನಾರಾವಿಯವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಢಿಯ ಚಾಲನೆಯನ್ನು ಹವ್ಯಕ ಭಾಷೆಯ ಶೃಂಗಾರ ಗಜಲ್ ರೂಪಕದ ಮೂಲಕ ಮಂಗಳೂರಿನ ವೈದ್ಯ ಕಣಚೂರು ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಹಾಗೂ ಬರಹಗಾರ ಸುರೇಶ ನೆಗಳಗುಳಿಯವರು ನೆರವೇರಿಸಿದರು.


ಹೆರಾಲ್ಡ್ ತೆರಾವೋ, ರೇಮಂಡ್ ಡಿಕುನ್ಹಾ ಪರವಾಗಿ ರಿಯಾನಾ, ಮುಕುಂದ ಮಿಜಾರು ಕೊಂಕಣಿಯಲ್ಲಿಯೂ, ಹಸನಬ್ಬರು ಬ್ಯಾರಿ ಭಾಷೆಯಲ್ಲಿಯೂ, ವನಜಾ ಜೋಶಿ ಚಿತ್ಪಾವನ ಭಾಷೆಯಲ್ಲಿಯೂ, ಲಿಂಗಪ್ಪ ಗೌಡ ನೀರ್ಕೆರೆ ಕುಡುಬಿ, ಪದ್ಮನಾಭ ಮಿಜಾರು ತುಳು, ಸೌಮ್ಯಾ ಕುಗ್ವೆ ಹವ್ಯಕ ಮತ್ತು ಕನ್ನಡದಲ್ಲಿ ಅನಿತಾಶೆಟ್ಡಿ ಶರಣ್ಯ ಬೆಳುವಾಯಿ ನಾಗಶ್ರೀ ಭಂಡಾರಿ ರಾಮಕೃಷ್ಣ ಶಿರೂರು ಮತ್ತು ಕಾರ್ಯಕ್ರಮದ ರೂವಾರಿ ಧನಂಜಯ ಮೂಡುಬಿದಿರೆಯವರು ಕವನ ವಾಚಿಸಿದರು.


ಗೋಷ್ಠಿ ಅಧ್ಯಕ್ಷ ಸದಾನಂದ ನಾರಾವಿಯವರು ಇಬ್ಬರೂ ಪತ್ರಕರ್ತರ ವಿಶೇಷ ಗುಣಗಳ ಬಗ್ಗೆ ಹೇಳುತ್ತಾ ಕವನ ವಾಚಿಸಿದ ಸರ್ವರನ್ನೂ ಅಭಿನಂದಿಸಿದರು


ಸರ್ವಾಧ್ಯಕ್ಚ ಸಂಘದ ಅದ್ಯಕ್ಷ ಬಿ ಸೀತಾರಾಮ ಆಚಾರ್ಯರು ಸಂಸ್ಮರಣೆ ಮಾಡಲ್ಪಡುವ ಈರ್ವರ ಗುಣಗಾನ ಮಾಡುತ್ತಾ ಸದಾಶಯ ವ್ಯಕ್ತ ಪಡಿಸಿ ಅತಿಥಿ ಹಾಗೂ ಎಲ್ಲಾ ಕವಿಗಳಿಗೆ ಧನ್ಯವಾದ ಅರ್ಪಿಸಿದರು.


ಪತ್ರಕರ್ತ ಬಿ.ಕೆ. ಅಶ್ರಫ್ ವಾಲ್ಪಾಡಿಯವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಪ್ರಸನ್ನ ಹೆಗಡೆ ಜೈಸನ್ ತಾಕೊಡೆ ನವೀನ್ ಸಾಲ್ಯಾನ್ ಪುಂಡಿಕಾಯಿ ಗಣಪಯ್ಯ ಕೆ.ಕೇಶವ ಭಟ್, ಹರೀಶ್ ಕೆ ಆದೂರು ಮತ್ತಿತರರು ಉಪಸ್ಣಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top