ವನಿತಾ ಕಥನ- 9: ವಸಿಷ್ಠರ ಪತ್ನಿ ದೇವಿ ಅರುಂಧತಿ (ಭಾಗ 2)

Upayuktha
0



ಅರುಂಧತಿಯ ತಂದೆಯಾದ ಕರ್ದಮ ಪ್ರಜಾಪತಿಗಳ ಆಶ್ರಮಕ್ಕೆ ಒಂದು ಬಾರಿ ಬ್ರಹ್ಮದೇವರು ಭೇಟಿ ನೀಡಿ ದೇವತೆಗಳಿಂದ ಜ್ಞಾನವನ್ನು ಪಡೆಯುವ ಆಶೀರ್ವಾದವನ್ನು ಅರುಂಧತಿ ದೇವಿಗೆ ನೀಡಿದಾಗ ಋಷಿಗಳು ಅವಳನ್ನು ಸಾವಿತ್ರಿ ದೇವಿಯ ಬಳಿ ಅಧ್ಯಯನಕ್ಕೆ ಕರೆದುಕೊಂಡು ಹೋಗುತ್ತಾರೆ. ಆ ಸಮಯದಲ್ಲಿ ಸಾವಿತ್ತಿ ದೇವಿ ಮಾನಸ ಪರ್ವತದಲ್ಲಿ ಇದ್ದು ಗಾಯತ್ರಿ, ಸರಸ್ವತಿ, ಬಹುಳ ಮತ್ತು ದುಪದರೊಂದಿಗೆ ಧರ್ಮದ ಅನೇಕ ವಿಚಾರಗಳನ್ನು ಚರ್ಚೆ ಮಾಡುತತಿರುವ ಸಮಯದಲ್ಲಿ ಅರುಂಧತಿ ದೇವಿ ಅವರ ಶಿಷ್ಯಳಾಗಿ 7 ವರ್ಷಗಳ ಕಾಲ ಅಧ್ಯಯನವನ್ನು ಮಾಡುತ್ತಾಳೆ ಅವಳ ಆಧ್ಯಯನದ ನಂತರ ದೇವಿಯರು ಕರ್ದಮ ಪ್ರಜಾಪತಿಗೆ ನಿನ್ನ ಪುತ್ರಿ ಬ್ರಹ್ಮನ ಮಾನಸ ಪುತ್ರಿಯ ಸ್ವರೂಪ ಎಲ್ಲ ವಿದ್ಯೆಗಳೂ ಅವಳಿಗೆ ಬಂದಿವೆ ಆದ್ದರಿಂದ ಅವಳ ಸೂಕ್ಷ್ಮ ಗ್ರಾಹಿತ್ಯವನ್ನು ಗಮನಿಸಿದ ವಿಷ್ಣು ಪರಮಾತ್ಮನು ಅವಳನ್ನು ಆಶೀರ್ವದಿಸಿದ್ದಾನೆ ಎಂಬುದಾಗಿ ಹೇಳುತ್ತಾರೆ.


ನಂತರ ಸಾವಿತ್ರಿ ದೇವಿಯು ವಸಿಷ್ಠ ಮಹರ್ಷಿಯು ಇವಳ ಅನುರೂಪ ಪತಿಯಂದು ಕರ್ದಮ ಪ್ರಜಾಪತಿಗೆ ಹೇಳಿದಳು, ಆದ್ದರಿಂದ ವಸಿಷ್ಠರೊಂದಿಗೆ ವಿವಾಹವನ್ನು ನೆರವೇರಿಸುತ್ತಾರೆ ಅರುಂಧತಿ ದೇವಿಯ ಕನ್ಯಾದಾನದ ಸಮಯದಲ್ಲಿ ಗೋಮತಿ, ಕ್ಷಿಪ್ರಾ ಮತ್ತು ಸರಯೂ ನದಿಗಳ ಪವಿತ್ರ ಜಲದಿಂದ ಅವಳ ಕನ್ಯಾದಾನವನ್ನು ಮಾಡಿಕೊಡಲಾಗುತ್ತದೆ. ಅರುಂಧತಿ ದೇವಿಯ ದೇವಿಗಳಿಗೂ ಕೂಡ ಧರ್ಮದ ವಿಚಾರಗಳ ಅನುಮಾನವನ್ನು ಪರಿಹಾರ ಮಾಡುತ್ತಲಿದ್ದಳು.

ಒಂದು ಬಾರಿ ಅಗ್ನಿ, ಸೂರ್ಯ ಮತ್ತು ಇಂದ್ರರು ವಸಿಷ್ಠರ ಆಶ್ರಮಕ್ಕೆ ಭೇಟಿ ನೀಡಿದಾಗ ಅವರಿಗೆ ಧರ್ಮದ ಬಗ್ಗೆ ಇದ್ದ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಬಂದಿದ್ದರು. ಅರುಂಧತಿ ದೇವಿಯು ಆಸಮಯದಲ್ಲಿ ನದಿಯಿಂದ ನೀರನ್ನು ತರುತ್ತಿದ್ದಳು. ನೀರು ನಂದ ನಂತರ ಚರ್ಚಿಸೋಣ ಎಂದು ಹೇಳುತ್ತಾಳೆ ಆಗ ಅಗ್ನಿ, ಸೂರ್ಯ ಮತ್ತು ಇಂದ್ರ ದೇವರು ಮಂತ್ರ ಶಕ್ತಿಯಿಂದ ತಾವು ನೀರನ್ನು ತುಂಬುವುದಾಗಿ ಹೇಳುತ್ತಾರೆ ಆದರೆ ಕೇವಲ ಬಿಂದಿಗೆಯ ಮುಕ್ಕಾಲು ಭಾಗ ಮಾತ್ರ ತಂಬಿರುತ್ತದೆ. ಉಳಿದ ಕಾಲು ಭಾಗವು ಖಾಲಿಯಾಗಿರುತ್ತದೆ. ದೇವತೆಗಳ ಅನುಮಾನವನ್ನು ಪರಿಹರಿಸುವ ಚರ್ಚೆಯು ಮುಗಿದ ನಂತರ ಖಾಲಿಯಾಗಿದ್ದ ಬಿಂದಿಗೆಯು ತುಂಬುತ್ತದೆ. ಸಾಂಕೇತಿಕವಾಗಿ ಅರುಂಧತಿಯ ಧರ್ಮಜ್ಞಾನವು ಪರಿಪೂರ್ಣವಾದುದು ಎಂದು ತಿಳಿಯುತ್ತದೆ.


ಶಿವನ ಆಶೀರ್ವಾದವೂ ಕೂಡ ಅರುಂಧತಿ ದೇವಿಗೆ ಇದ್ದಿತು. ಒಮ್ಮೆ ಸಪ್ತರ್ಷಿಗಳು ಹಿಮಾಲಯಲ್ಲಿ ವಾಸಿಸುತ್ತಿದ್ದರು. 12 ವರ್ಷಗಳ ಕಾಲ ಮಳೆಯಾಗಿರಲಿಲ್ಲ. ಅ ಸಮಯದಲ್ಲಿ ಅರುಂಧತಿ ದೇವಿಯು ಲೋಕ ಕಲ್ಯಾಣಕ್ಕಾಗಿ ತಪಸ್ಸನ್ನು ಆಚರಿಸಿದಳು. ಪ್ರಸನ್ನನಾದ ಶಿವನು ಪ್ರತ್ಯಕ್ಷನಾದನು. ಆಗ ಅರುಂಧತಿ ದೇವಿಯ ಬಳಿಗೆ ಶಿವನಿಗೆ ಅರ್ಪಿಸಲು ಏನೂ ಇರದ ಕಾರಣ ಅಲ್ಲಿಯೇ ಇದ್ದ ಕಂದಮೂಲಗಳನ್ನು ಅರ್ಪಿಸಿ ನೈವೇದ್ಯ ಮಾಡಿದಳು. ಅವಳ ಭಕ್ತಿ ಹಾಗೂ ಜಾಣ್ಮೆಗೆ ಮೆಚ್ಚಿದ ಶಿವನು ಅವಳನ್ನು ಆಶೀರ್ವದಿಸಿದನು ನಂತರದಲ್ಲಿ ಸಮಯ ಸಮಯಕ್ಕೆ ಮಳೆಯು ಆರಂಭವಾಯಿತು.


ಅರುಂಧತಿ ದೇವಿಯು ರಾಮಾವತಾರದಲ್ಲಿ ಪರಮಾತ್ಮನ ಗುರು ಪತ್ನಿಯಾದ ಕಾರಣ. ತನ್ನ ಆಶ್ರಮವಾಸದ ಕಾಲದಲ್ಲಿ ರಾಮದೇವರು ಅವಳ ಆಶೀರ್ವಾದ ಪಡೆಯಲು ನಮಿಸುತ್ತಿದ್ದನು, ಅರುಂಧತಿ ದೇವಿಯ ಸೀತಾರಾಮರ ವಿವಾಹ ಸಂದರ್ಭದಲ್ಲಿ ಸೀತಾದೇವಿಗೆ ಪತಿವ್ರತಾ ಧರ್ಮವನ್ನು ಉಪದೇಶಿಸಿರುತ್ತಾಳೆ. 


ವಸಿಷ್ಠ ಮತ್ತು ಅರುಂಧತಿಯರಿಗೆ ಶಕ್ತಿ, ಚಿತ್ರಕೇತು, ಸುರೋಚಿಸ, ವಿರಜಸ, ಮಿತ್ರ, ಉಲ್ಬಣ, ವಸುಭದ್ರಾಯನ ಮತ್ತು ದ್ಯುಮತ್‌ ಎಂಬ ಮಕ್ಕಳಿದ್ದಾರೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top