ನೆನೆಯುವುದೆನ್ನ ಮನ ನಮ್ಮೂರನ್ನು ವಿದೇಶಿ ನೆಲದೊಳಗೆ

Upayuktha
0

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ "East or West Home is best". ಸುಖವೊ ಕಷ್ಟವೊ ಕೊನೆಗೆ ನಮ್ಮ ಊರು ನಮ್ಮ ಮನೆಯೇ ಉತ್ತಮ ಅನ್ನುವುದೇ ಈ ಮಾತಿನ ಅರ್ಥ. ನಮ್ಮೂರಿನ ಸುಖ ನಮಗೆ ಅರ್ಥವಾಗಬೇಕಾದರೆ ಒಮ್ಮೆ ನಾವು ನಮ್ಮೂರು ಬಿಟ್ಟು ಹೊರಗೆ ಹೇೂಗಿ ಸ್ವಲ್ಪ ಕಾಲ ನೆಲೆಸಬೇಕು. ಆಗ ತಿಳಿಯುತ್ತದೆ ನಮ್ಮೂರು ಅಂದರೇನು ಅನ್ನುವುದರ ನಿಜವಾದ ಅರ್ಥ. ದೇಶವಾದರೂ ಅಷ್ಟೇ ನಮ್ಮ ದೇಶವನ್ನು ಬಿಟ್ಟು ಒಮ್ಮೆ ಹೊರಗೆ ಹೇೂಗಿ ನೇೂಡಬೇಕು. ಅಲ್ಲಿ ನಮಗೆ ಎಷ್ಟೇ ಸವಲತ್ತು ಸಿಗಬಹುದು ಸಂಪತ್ತು ಬರಬಹುದು; ಆದರೆ ಮಾನಸಿಕವಾದ ನೆಮ್ಮದಿ ಭಾವನಾತ್ಮಕವಾದ ಸುಖ ಸಿಗಲು ಸಾಧ್ಯವೇ ಇಲ್ಲ. ಯಾಕೆಂದರೆ ಆ ದೇಶದ ಜನ ನಮ್ಮನ್ನು ಎಂದೂ ಮನುಷ್ಯ ಪ್ರೀತಿಯಿಂದ ಗುರುತಿಸಲು ಸಾಧ್ಯವೇ ಇಲ್ಲ. ಮರು ಭುಾಮಿಯಲೊಂದು ಓಯಸ್ಸಿಸ್ ಹುಡುಕಿದ ಹಾಗೆ ಅಲ್ಲಿ ನಮ್ಮ ದೇಶ ನಮ್ಮ ಭಾಷೆಯವರು ಯಾರಾದರೂ ಸಿಗಬಹುದಾ ಎಂದು ಹುಡುಕಬೇಕು ಅಷ್ಟೇ. ಎಲ್ಲಿಯಾದರು ಒಬ್ಬರು ಸಿಕ್ಕಿದರು ಅಂದರೆ ಆ ಖುಷಿಗೆ ಮಿತಿಯೇ ಇಲ್ಲ. ನೀವು ಯಾರು, ನಿಮ್ಮ ರಾಜ್ಯ ಯಾವುದು, ನಿಮ್ಮ ಭಾಷೆ ಯಾವುದು,  ಅನ್ನುವುದರಲ್ಲಿಯೇ ಒಂದಾಗಿ ಬಿಡುತ್ತೇವೆ. ಅಂದರೆ ಇದೇ ಭಾವನೆ ನಾವು ಊರಿನಲ್ಲಿ ಇದ್ದಾಗ ನಮಗೆ ಬರುವುದೇ ಇಲ್ಲ. ಇದು ನಮ್ಮ ಮನುಷ್ಯ ಸಂಬಂಧದ ಇನ್ನೊಂದು ವಿಶೇಷ ಗುಣ ಅಲ್ವಾ?


ನಾವು ಅಮೇರಿಕಾ, ಇಂಗ್ಲೆಂಡ್, ಕೆನಡಾವೊ, ಅಬುಧಾಬಿಯೊ, ಎಲ್ಲಿಯೆ ಇರಬಹುದು ಅಲ್ಲಿನ ಭವ್ಯ ಕಟ್ಟಡ, ರಸ್ತೆ ಸಂಪರ್ಕ, ಕಾನೂನು ವ್ಯವಸ್ಥೆ, ಊಟ ಉಪಚಾರ. ಸಕಲ ವ್ಯವಸ್ಥೆ ಎಷ್ಟೇ ಚೆನ್ನಾಗಿರಲಿ ನಮ್ಮ ಊರು, ನಮ್ಮ ಭಾಷೆ, ನಮ್ಮ ಜನ, ನಮ್ಮ ಮನೆ, ನಮ್ಮ ರಸ್ತೆ, ನಮ್ಮ ನದಿ, ಎಲ್ಲವೂ ನಿಮಿಷ ನಿಮಿಷಕ್ಕೂ ನೆನಪಿಗೆ ಬಂದೇ ಬರುತ್ತದೆ.


ಪರದೇಶಗಳಲ್ಲಿ ಅವುಗಳೆಲ್ಲವೂ ನಮಗಿಂತ ಎಷ್ಟೇ ಚೆನ್ನಾಗಿದ್ದರೂ ಕೂಡಾ ಕೊನೆಯಲ್ಲಿ ನಮಗೆ ನೆಮ್ಮದಿ ಸುಖ ತೃಪ್ತಿ ನೀಡುವುದು ನಮ್ಮೂರ ಹೊಂಡ ಬಿದ್ದ ರಸ್ತೆಗಳೇ ಕಾಲುಮುರಿದ ಸಂಕಗಳೇ ಕಲ್ಲು ಬಿಸಾಡಿ ಹಣ್ಣು ತಿಂದ ಮಾವು ಗೇರುಮರಗಳೇ.. ಮುಳುಗಿ ಎದ್ದು ಬಿದ್ದು ಈಜಾಡಿದ ನದಿಯನ್ನು ಮರೆಯಲು ಸಾಧ್ಯನಾ? ಖಂಡಿತವಾಗಿಯೂ ಸಾಧ್ಯವಿಲ್ಲ..ಇದು ನಮ್ಮಹಾಗೂ ಪ್ರಕೃತಿ ಪರಿಸರದ ನಡುವಿನ ಸಂಬಂಧದ ಕೊಂಡಿ ಅಲ್ವೇ?

ಇಷ್ಟಾದರೂ ಕೆಲವರಂತೂ ಊರು ಬಿಟ್ಟು ಅಮೇರಿಕಾವೊ ಕೆನಡಾವೊ ಪರದೇಶಗಳಿಗೆ ಹೇೂಗಿ ತಳವೂರಿದವರಿಗೆ ಊರಿನ ಕಡೆ ಮುಖ ಮಾಡಲು ಮನಸ್ಸೇ ಆಗುವುದಿಲ್ಲ. ಅಲ್ಲಿಯೇ ಹುಟ್ಟಿ ಬೆಳೆದ ಮಕ್ಕಳಿಗಾದರೂ ಸರಿ. ಯಾಕೆಂದರೆ ಅವರಿಗೆ ಈ ನೆಲದ ಮಣ್ಣಿನ ವಾಸನೆ ಮೂಗಿಗೆ ಹೊಡೆದಿಲ್ಲ.


ಆದರೆ ನಮ್ಮ ನೆಲದ ಮಣ್ಣಿನ ವಾಸನೆ ಇಪ್ಪತ್ತು ಮೂವತ್ತು ವರುಷ ಸೇವಿಸಿ ಮತ್ತೆ ಪರದೇಶಗಳಿಗೆ ಹೇೂಗಿ ಝಂಡಾ ಊರಿದವರ ಮನಸ್ಥಿತಿ  ಹೇಗಿರಬಹುದು ಅನ್ನುವುದು ನನ್ನ ಭಾವನೆ. ಯಾಕೆಂದರೆ ಊರು ಬಿಟ್ಟು ಒಂದು ತಿಂಗಳಲ್ಲಿಯೇ ನಮ್ಮೂರಿನ ನೆನಪು ಇಷ್ಟೊಂದು ಕಾಡುತ್ತಿರಬೇಕಾದರೆ ಊರು ಬಿಟ್ಟು ಶಾಶ್ವತವಾಗಿ ಹೊರ ದೇಶದಲ್ಲಿ ಬೇರೂರಿದವರ ಮನ ಸ್ಥಿತಿ ಹೇಗಿರಬಹುದು ಅನ್ನುವುದನ್ನು ಊಹಿಸುವ ಪರಿಸ್ಥಿತಿಯಲ್ಲಿ ನಾನಿದ್ದೇನೆ.

ನನ್ನೂರಿನ ಬೆಳಿಗ್ಗೆ ಸಂಜೆಯ ವಾಕಿಂಗ್ ಅಂದರೆ ಎಷ್ಟೊಂದು ಕುಶಿ. ಅಲ್ಲಿಯೇ ಅಡಿಗಡಿಗೆ ಸ್ನೇಹಿತರು ಸಿಗುವುದು ಒಂದಿಷ್ಟು ಲೇೂಕಾಭಿರಾಮ; ನಮ್ಮೂರ ಭಟ್ಟರ ಅಂಗಡಿ ಎದುರು ಬಂದು ನಿಂತು ಊರಿನ ಸುಖ ಕಷ್ಟದ ಬಗ್ಗೆ ಉಭಯ ಕುಶಲೇೂಪರಿ ನಮ್ಮ ಭಟ್ಟರು ಕೂಡಾ ಅಷ್ಟೇ ಗುರುಗಳೇ ಹೇಗಿದ್ದೀರಿ ಅನ್ನುವ ಪ್ರೀತಿಯ ಮಾತುಗಳು. ಇವುಗಳನ್ನು ಹೇಗೆ ಮರೆಯಲು ಸಾಧ್ಯ. ಈ ಎಲ್ಲಾ ಸುಖ ಪರದೇಶದ ವಾಕಿಂಗ್ ಟ್ರ್ಯಾಕ್‌ ಎಷ್ಟೇ ಚೆನ್ನಾಗಿದ್ದರೂ ಅಲ್ಲಿ ಸಿಗಲು ಸಾಧ್ಯವಾ? ವಾಕಿಂಗ್ ಸುಖ ಬರೇ ದೇಹಕ್ಕೆ ಮಾತ್ರ ಅಲ್ಲ ಮನಸ್ಸಿಗೂ ಸಿಗಬೇಕಲ್ಲ.


ರಸ್ತೆಯಲ್ಲೂ ನಡೆದಾಡುವಾಗಲು ಅಷ್ಟೇ ಯಾರೊ ಅಡ್ಡಾದಿಡಿಯಾಗಿ ಬೈಕೋ ಕಾರೊ ಓಡಿಸಿ ಹಿಂದಿನಿಂದ ಕುಟ್ಟಿ ತಂದು ಬೈಸಿಕೊಳ್ಳುವುದರಲ್ಲೂ ಒಂದು ಸುಖ. ಅಂದರೆ ಈ ಸುಖ ಕಷ್ಟಗಳನ್ನೆ ನಮ್ಮ ಬದುಕೆಂದು ನಾವು ಸ್ವೀಕರಿಸಿ ಬಿಟ್ಟಿದ್ದೇವೆ. ಹಾಗಾಗಿ ಇದರಲ್ಲಿ ಒಂದು ನೆಮ್ಮದಿ ಇದೆ. ಈ ಎಲ್ಲಾ ಮಾನವೀಯ ಸುಖ ಪರದೇಶದಲ್ಲಿ ಸಿಗಲು ಸಾಧ್ಯವಾ? ಖಂಡಿತವಾಗಿಯೂ ಸಾಧ್ಯವಿಲ್ಲ.


ಪರದೇಶದಲ್ಲಿ ಹೇಗಿದ್ದರೂ ನಾವು ಪರದೇಶಿಗರೆ? ಹಾಗಾಗಿ ಪರದೇಶಿಯ ರಸ್ತೆಯಲ್ಲಿ ನಡೆಯುವಾಗ ತಲೆ ತಗ್ಗಿಸಿಯೇ ನಡೆಯಬೇಕು. ಇದು ಪರದೇಶದಲ್ಲಿ ನಮ್ಮ ಸ್ಥಿತಿ. ಪರದೇಶಗಳ ಸೌಂದರ್ಯತೆಯನ್ನು ನೇೂಡಿ ಕಣ್ಣು ತುಂಬಿಸಿಕೊಳ್ಳಬಹುದೇ ಹೊರತು ಮನಸ್ಸು ಹೃದಯದ ತುಂಬಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದು ನಾನು ನನ್ನ ಪ್ರವಾಸ ಕಾಲದಲ್ಲಿ ಕಂಡುಕೊಂಡ ಅನುಭವದ ಮಾತು.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top