ವರ್ಣನೆಗೂ ನಿಲುಕದ ಪ್ರಕೃತಿಯ ಆರ್ತನಾದ

Upayuktha
0


ತಾಯಿಯ ಮಡಿಲು, ಪ್ರಕೃತಿಯ ಒಡಲು, ಇವೆರಡಕ್ಕೂ ಸರಿಸಾಟಿಯಾದ ಬಾಂಧವ್ಯ ಎಲ್ಲೂ ಸಿಗದು. ತಾಯಿ ತನ್ನ ಮಕ್ಕಳಿಗೆ ಪ್ರೀತಿಯನ್ನು ಉಣಬಡಿಸಿ ಬೆಳೆಸುವವಳು. ಹಾಗೆಯೇ ಪ್ರಕೃತಿ, ತನ್ನ ಒಡಲಲ್ಲಿರುವ ಸಕಲ ಜೀವರಾಶಿಗಳನ್ನೂ ಶತ ಶತಮಾನಗಳಿಂದಲೂ ಸಲಹಿಕೊಂಡು ಬಂದಿರುವ ಮಾನವನ ರಕ್ಷಾ ಕವಚ. ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿ, ದೇವರು ನಮಗೆ ಕೊಟ್ಟ ಅತ್ಯದ್ಭುತ ಕೊಡುಗೆ. ಜುಳು ಜುಳು ಹರಿಯುವ ನದಿಗಳ ನೋಟ, ಮರಗಳ ಮೇಲೆ ಪಕ್ಷಿಗಳ ಹಾರಾಟ ಇವೆಲ್ಲವೂ ಪ್ರಕೃತಿಯ ಸೊಬಗಿಗೆ ಮತ್ತೊಂದು ಗರಿಮೆ.


ಪ್ರಕೃತಿಯ ವರ್ಣನೆಗೆ ಪದಗಳೇ ವಿರಳ. ಪ್ರಕೃತಿಯ ಸೌಂದರ್ಯ ಭರಿತ ನೋಟವೇ ಭೂಮಿಯ ಸ್ವರ್ಗ. ಆಗ ಹೇಳಿದ ಹಾಗೆ ಮಾನವನ ರಕ್ಷಾ ಕವಚವೇ ಪ್ರಕೃತಿ. ಇದನ್ನು ಅರಿಯದ ನಾವು, ನಮ್ಮಿಂದಲೇ ಪ್ರಕೃತಿ ಎನ್ನುವ ಭ್ರಮಾಲೋಕದಲ್ಲಿ ಪ್ರಕೃತಿಯ ಒಡಲಿಗೆ ಕತ್ತಿ ಹಾಕುತ್ತಿದ್ದೇವೆ. ಎತ್ತ ನೋಡಿದರತ್ತ ಪ್ರಕೃತಿಯ ಮೇಲಿನ ದೌರ್ಜನ್ಯ ಹೆಚ್ಚಾಗಿ, ಪರಿಸರದ ನೈಜತೆ ಮರೆಮಾಚಿವೆ.ಸ್ವಾರ್ಥ ಉದ್ದೇಶಗಳ ಈಡೇರಿಕೆಗಾಗಿಯೇ ಹಂಬಲಿಸುತ್ತಿರುವವರು ಮಾನವರು. ನಮ್ಮ ರಕ್ಷಾ ಕವಚವನ್ನು ನಾವೇ ಕಳಚುತ್ತಿದ್ದೇನೆ ಎನ್ನುವ ಸತ್ಯವನ್ನು ಇಂದಿನ ಕಾಲದಲ್ಲಿ ಮರೆಯುತ್ತಿದ್ದೇವೆ. ಹಸಿರು ನಮ್ಮೆಲ್ಲರ ಉಸಿರು ಎಂಬ ನುಡಿ ಅಕ್ಷರಶಃ ನಿಜ. ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸಿದರೆ ಮಾತ್ರ ನಾವು ಉಸಿರಾಡಲು ಸಾಧ್ಯ. 



ನಾವು ಪ್ರಕೃತಿಗೆ ಎಸಗುವ ಅನ್ಯಾಯದಿಂದಲೇ ಮಾನವ ವಿನಾಶಕ್ಕೆ ಕಾರಣವಾಗುವುದು. ಎಲ್ಲಾ ದೌರ್ಜನ್ಯಗಳನ್ನು ಸಹಿಸಿದ ಪ್ರಕೃತಿಯ ಸಹನೆಗೂ ಮಿತಿಯಿದೆ. ಮಾನವನ ವಿಕೃತಿಗಳಿಗೆ ಪ್ರತಿಯಾಗಿ ಪ್ರಕೃತಿ ನೀಡುವ ಶಿಕ್ಷೆಯು ಖಂಡಿತವಾಗಿಯೂ ಮಾನವನಿಂದ ಸಹಿಸಲಸಾದ್ಯ. ಅವನ ಊಹೆಗೂ ನಿಲುಕದ್ದು. ಅದಕ್ಕೆ ಉದಾಹರಣೆಯೇ ಇತ್ತೀಚೆಗೆ ಆದಂತಹ ಪ್ರಕೃತಿ ವಿಕೋಪಗಳು. ಇಷ್ಟಾದರೂ ಮನುಷ್ಯ ಇನ್ನೂ ಎಚ್ಚರಗೊಳ್ಳುತ್ತಿಲ್ಲ. ಮಳೆಗಾಲದಲ್ಲಿ ಪ್ರಕೃತಿಯ ಕೋಪಕ್ಕೆ ಹೆದರಿ ಪರಿಸರ ಪ್ರೇಮಿಯಂತೆ ಬದಲಾಗುವ ಮಾನವ, ನಂತರ ತನ್ನ ಅದೇ ಕೆಟ್ಟ ಚಾಳಿ ಆರಂಭಿಸುತ್ತಾನೆ. ಎನ್ನುವುದು ಕಹಿ ಸತ್ಯ. ನಾವೇ ಮಾಡಿದ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸುತ್ತಿದ್ದೇವೆ. ಎಷ್ಟೋ ಕುಟುಂಬಗಳಿಂದು ಸೂರುಗಳನ್ನು ಕಳೆದುಕೊಂಡು ಅನಾಥವಾಗಿವೆ. ಇದನ್ನು ಕೇಳಿಸಿಕೊಂಡ ನಾವು ಅಯ್ಯೋ ಪಾಪ ಎಂದು ನೊಂದುಕೊಳ್ಳುತ್ತಿದ್ದೇವೆ. ಹೋದ ಜೀವಗಳಿಗಾಗಿ ಕಂಬನಿ ಮಿಡಿಯುತ್ತಿದ್ದೇವೆ. ಅದೇ ಕಣ್ಣೀರು ಪ್ರಕೃತಿಯ ಮೇಲೆ ದೌರ್ಜನ್ಯ ಎಸಗಿದಾಗ ಮಾಯವಾಗಿ ಹೋಗಿದ್ದವು. ಆ ಎಲ್ಲಾ ಕುಟುಂಬಗಳ ಆರ್ತನಾದ ನಮ್ಮ ಕಿವಿಗಳಿಗೆ ಕೇಳಿಸುತ್ತಿವೆ. ಆದರೆ ಪ್ರಕೃತಿಯ ನೋವು. 


ನಮ್ಮ ತಪ್ಪುಗಳಿಂದಾಗಿ, ನಾವು ಪ್ರಕೃತಿಗೆ ಎಸಗಿದ ಅನ್ಯಾಯಗಳಿಂದಾಗಿ ಇಂದು ಬಲಿಯಾಗುತ್ತಿರುವ ವರೂ ನಾವೇ. ನಾವು ಕಟ್ಟಿದ ಸೂರಿಗೆ ಚಿಕ್ಕ ಹಾನಿಯಾದರೂ ಸಂಕಷ್ಟ ಪಡುತ್ತೇವೆ. ಅದೇ ರೀತಿ ಪ್ರಕೃತಿ ಶತಶತಮಾನಗಳಿಂದಲೂ ತನ್ನ ಸೊಬಗನ್ನು ರಕ್ಷಿಸಿಕೊಂಡು ಬರುತ್ತಿವೆ. ಅದಕ್ಕೆ ಮಾನವನ ಸ್ವಾರ್ಥ ಎನ್ನುವ ಕತ್ತಿಯು ಅಡ್ಡವಾಗಿ ನಿಂತರೆ ಪ್ರಕೃತಿ ತಾನೇ ಏನು ಮಾಡೀತು?ನಡೆದದ್ದು ನಡೆದು ಹೋಗಿವೆ. ಇನ್ನಾದರೂ ಎಚ್ಚರಗೊಳ್ಳೋಣ. ಪರಿಸರ ಸಂರಕ್ಷಣೆ ಕೇವಲ ಜೂನ್ 5ಕ್ಕೆ ಸೀಮಿತವಾಗಿರದೆ, ಜೀವವಿರುವ ವರೆಗೂ ಪ್ರಕೃತಿಯನ್ನು ಪ್ರೀತಿಸುತ್ತಿರೋಣ. ಪರಿಸರವನ್ನು ಉಳಿಸಿ ಬೆಳೆಸೋಣ. ವಿದ್ಯಾರ್ಥಿಗಳಿಗೆ ಗಿಡ ನೆಡಬೇಕೆಂದು ತಿಳಿದಿದೆಯೇ ಹೊರತು ದೊಡ್ಡ ದೊಡ್ಡ ಮರಗಳನ್ನು ಕಡಿಯಬಾರದೆನ್ನುವ ಪ್ರಜ್ಞೆಯೇ ಇಲ್ಲವಾಗಿದೆ. ಆದ್ದರಿಂದ ಮಕ್ಕಳಿಗೆ ಮರಗಳ ರಕ್ಷಣೆಯ ಅವಶ್ಯಕತೆಯ ಶಿಕ್ಷಣ ಮೊದಲು ನೀಡಬೇಕು. ಆಗಲೇ ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರೇಮ ಮೊಳಕೆಯೊಡೆಯಲು ಸಾಧ್ಯ. ಪ್ರಕೃತಿಯನ್ನು ಉಳಿಸಿ ಬೆಳೆಸಿ ತನ್ನದೆಂದು ಪ್ರೀತಿಸುವ ಮನೋಭಾವನೆ ನಮ್ಮೆಲ್ಲರದಾಗಲಿ. ಸಾಧ್ಯವಾದಷ್ಟು ಮುಂದಿನ ಪೀಳಿಗೆಗೆ ಸ್ವಚ್ಛ, ಸುಂದರ ಪರಿಸರವನ್ನು ನೀಡೋಣ.


- ಸಂಶೀನ

ತೃತೀಯ ಪತ್ರಿಕೋದ್ಯಮ ಹಾಗೂ ಆಂಗ್ಲ ಸಾಹಿತ್ಯ ವಿಭಾಗ

ವಿವೇಕಾನಂದ ಕಾಲೇಜು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top