ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ, ಅಂಬಿಕಾ ವಿದ್ಯಾಲಯ (ಸಿಬಿಎಸ್ಸಿ), ಬಪ್ಪಳಿಗೆ ವತಿಯಿಂದ ಜೂ. 29, ಸೋಮವಾರದಂದು ಆಯೋಜಿಸಿದ್ದ 'ಆಟಿದ ಬೆನ್ನಿಡ್ ಕೆಸರ್ದ ಗೊಬ್ಬು' ಕಾರ್ಯಕ್ರಮದಲ್ಲಿ, ಇಂದಿನ ಕಾಲಘಟ್ಟದ ಕೃಷಿ ಕಾರ್ಯದಲ್ಲಿ ಗಣನೀಯ ಬದಲಾವಣೆ ಕಂಡಿದ್ದು, ಈ ಬದಲಾವಣೆ ಮಾನವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಆದುದರಿಂದ ಆಧುನಿಕ ತಂತ್ರಜ್ಞಾನದ ಜೊತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಪಾಲನೆಯೂ ಅವಶ್ಯಕ ಎಂದು ಪ್ರಗತಿಪರ ಕೃಷಿಕರಾದ ಮಾಧವ ಗೌಡ ಕಾಂತಿಲ ಅವರು ನುಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಕೆ. ಮುತ್ತಪ್ಪ ಗೌಡ , ಅಂಬಿಕಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟೋಜ, ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ನಟೋಜ ಹಾಗೂ ಪ್ರಾಂಶುಪಾಲೆ ಕು .ಡಿ.ಮಾಲತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಪೀಳಿಗೆಯ ಜನರು ಆಹಾರ ಪಚನಕ್ರಿಯೆಗಾಗಿ ವ್ಯಾಯಾಮದ ಮೊರೆ ಹೋಗುತ್ತಾರೆ. ಆದರೆ ಹಿಂದಿನ ತಲೆಮಾರಿನವರು ಕೃಷಿ ಕಾರ್ಯದಲ್ಲಿ ನೈಸರ್ಗಿಕ ವಾಗಿ ವ್ಯಾಯಾಮವನ್ನು ಪಡೆಯುತ್ತಿದ್ದರು ಹಾಗೂ ಆರೋಗ್ಯವಾಗಿದ್ದರು. ಎಂದು ಹೇಳಿದರು.
ಯೋಧನು ದೇಶವನ್ನು ರಕ್ಷಿಸುತ್ತಾನೆ ಅದೇ ರೀತಿ ಕೃಷಿಕನು ದೇಶಕ್ಕೆ ಅನ್ನವನ್ನು ಉಣಬಡಿಸುತ್ತಾನೆ ಎನ್ನುತ್ತಾ ಕೃಷಿಕನ ಮಹತ್ವವನ್ನು ವಿವರಿಸಿದರು.
ಕೋರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಜಗತ್ತಿಗೆ ಅನ್ನವನ್ನು ನೀಡಿ ಮುನ್ನಡೆಸಿದ ಅನ್ನದಾತನಿಗೆ ಸದಾ ನಾವು ಋಣಿಯಾಗಿರಬೇಕು ಎಂದು ಸಭಾಧ್ಯಕ್ಷ ಸುಬ್ರಹ್ಮಣ್ಯ ನಟೋಜ ಹೇಳಿದರು.
ವಿದ್ಯಾರ್ಥಿನಿಯರಾದ ತನ್ವಿ ರೈ ಹಾಗೂ ಭುವಿ ಕಾರ್ಯಕ್ರಮ ನಿರೂಪಿಸಿದರು. ಶಿವಕೀರ್ತನ್ ಸ್ವಾಗತಿಸಿದರು. ಸಿಂಚನ ಪಿ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವಿವಿಧ ಪದ್ಯಾಟಗಳಲ್ಲಿ ಪಾಲ್ಗೊಂಡರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ