ಬಳ್ಳಾರಿ: ಪ್ಲೇಸ್ಮೆಂಟ್ ಸೆಲ್, ವೀರಶೈವ ಮಹಾವಿದ್ಯಾಲಯ, ಬಳ್ಳಾರಿ ಮತ್ತು ಗುರುದೇವ್ ಅಕಾಡೆಮಿ, ದಾರವಾಡ ಇವರ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾಯಕ್ರಮದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ಶಂಕರ್ ಹಂಚಿ, ವೀರೇಶ್ ಮೇಟಿ ಮತ್ತು ಶಶಿಕಾಂತ್ ಎಂ ರವರು ಮಾಹಿತಿ ನೀಡಿದರು. ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಜಿ. ಮನೋಹರ ಇವರು ಮಾತನಾಡುತ್ತ ಕಾರ್ಯಕ್ರಮದ ಉದ್ದೇಶ ಮತ್ತು ಅದರ ಸದುಪಯೋಗದ ಬಗ್ಗೆ ವಿವರಿಸಿದರು.
ಪ್ಲೇಸ್ಮೆಂಟ್ ಸೆಲ್ ಸಂಯೋಜಕರಾದ ಡಾ.ವಿನೋದ್ಕುಮಾರ್, ಜಿ ಮಲ್ಲನಗೌಡ, ಡಾ.ರವಿಕುಮಾರ್ ನಾಯ್ಕ.ಟಿ.ಆರ್, ಶರಣಬಸವ ಮತ್ತು ಇತರೆ ಬೋಧಕ ಸಿಬ್ಬಂಧಿಯವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ